ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಟೆಂಡರ್
Team Udayavani, Aug 22, 2020, 5:05 PM IST
ಹುಣಸಗಿ: ತಾಲೂಕಿನ ಹಿಂದುಳಿದ ಗ್ರಾಮ ಹಾಗೂ ತಾಂಡಾಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು 26 ಕೋಟಿ ರೂ. ಮೊತ್ತದ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಹುಣಸಗಿ ತಾಲೂಕಿನ ಹರಿಜನ, ಗಿರಿಜನ ವಸತಿ ಕಾಲೋನಿಗಳ ಸರ್ವತೋಮುಖ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಿಸಿ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಕೆಬಿಜೆಎನ್ ಎಲ್ನಿಂದ 26 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಸೊನ್ನಾಪುರ, ಹೊಂಬಳಕಲ್ಲ, ಕೋಟೆಗುಡ್ಡ, ರಾಜವಾಳ, ಮದಲಿಂಗನಾಳ, ಬೂದಿಹಾಳ, ಬಸಾಪುರ, ಕುರೆಕನಾಳ, ಮಾಳನೂರು, ಮಾರಲಬಾವಿ ಮತ್ತು ಯರಕಿಹಾಳ ತಾಂಡಾ, ಡಿಬ್ಬಿ ತಾಂಡಾ, ಚಾಪಿ ತಾಂಡಾ, ರಾಜನಕೋಳೂರು ತಾಂಡಾ, ಪಿ.ಎನ್.ತಾಂಡಾ, ಬಸರಿಗಿಡದ ತಾಂಡಾ, ಬಸವನಗರ ತಾಂಡಾ, ಮಾವಿನಗಿಡದ ತಾಂಡಾ, ಕಡದರಹಾಳ ತಾಂಡಾ, ಕೋಳಿಹಾಳ ದೊಡ್ಡ ಹಾಗೂ ಸಣ್ಣ ತಾಂಡಾ, ರಾಜಕುಮಾರ ನಾಯಕ ತಾಂಡಾ, ಮಾರನಾಳ ತಾಂಡಾಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ