ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿಸಲು ಆಗ್ರಹ
Team Udayavani, Aug 3, 2018, 2:33 PM IST
ಶಹಾಪುರ: ಕೃಷ್ಣಾ ಕಾಡಾ ವ್ಯಾಪ್ತಿ ಬರುವ ತಾಲೂಕಿನ ಹಯ್ನಾಳ (ಬಿ) ಮತ್ತು ವಡಿಗೇರಾ ತಾಲೂಕು ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿಗೆ ಸಮರ್ಪಕ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಕಾಡಾ ಮುಖ್ಯ ಎಂಜಿನಿಯರ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರೇಖರ ಮಾಗನೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಗನೂರ, ಕೆಳ ಭಾಗದ ಕಾಲುವೆಗೆ ನೀರು ತಲುಪದೆ ಇರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ ರೈತರಿಗೆ ನೀರು ತಲುಪದಿರುವ ಕುರಿತು ತಿಳಿಸಿದರೂ ಯಾರೊಬ್ಬರು ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ. ಕಾಲುವೆ ನಿರ್ಮಾಣದಿಂದಲೂ ಕೆಳ ಭಾಗದ ರೈತರಿಗೆ ನೀರಿಲ್ಲ. ನೀರಾವರಿ ಪ್ರದೇಶದಡಿ ಭೂಮಿ ಕಳೆದುಕೊಂಡಿದ್ದು, ಅಲ್ಲದೆ ಕಾಲುವೆ ನಿರ್ಮಾಣವಾದರೂ ಇದುವರೆಗೂ ಕೆಳ ಭಾಗದ ಕಾಲುವೆಗೆ ನೀರು ಬರುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಆ. 5ರ ವರೆಗೆ ಕೆಳ ಭಾಗದ ಡಿಸ್ಟಿಬ್ಯೂಟರ್ -9 ವ್ಯಾಪ್ತಿ ಕಾಲುವೆಗೆ ನೀರು ಹರಿಸದಿದ್ದರೆ, ಕಾಡಾ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ ಅವರು, ಕೃಷ್ಣಾ ಕಾಡಾ ವ್ಯಾಪ್ತಿ ಕಾಲುವೆ ನೀರನ್ನು ಅಕ್ರಮವಾಗಿ ಬಳಸುತ್ತಿದ್ದಾರೆ. ಆಂಧ್ರದ ಹಲವರು ಮೀನು ಸಾಕಾಣಿಕೆ ಕೆರೆಗಳಿಗೆ ಗದ್ದೆಗಳಿಗೆ ಅಕ್ರಮ ಪೈಪ್ ಲೈನ್ ಮಾಡಿ ಕಾಲುವೆ ನೀರನ್ನು ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಕೆಬಿಜೆಎನ್ನೆಲ್ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೇಣು ಮಾದಪ್ಪ ನಾಯಕ, ಬಸನಗೌಡ ಪಾಟೀಲ, ಮುದಕಪ್ಪ, ಗೋವಿಂದಪ್ಪ ನರಿಬೋಳ, ಮಲ್ಲಣ್ಣ ಪೂಜಾರಿ, ಕೃಷ್ಣಪ್ಪ ದೊರಿ, ನಿಂಗಯ್ಯ ಕವಲಿ, ಭೀಮರಾಯ ಹೂಗಾರ, ರಾಮಪ್ಪ ಬಲಕಲ್, ಅಂಬ್ಲಿಯ್ಯ ಕವಲಿ, ರಾಮಣ್ಣ, ವೀರೇಶ ನಾಯಕ, ಹಣಮಂತ ಬೀರನೂರ, ಸೊಮಣ್ಣ, ಮಲ್ಲಣ್ಣ, ನಂದಣ್ಣ ಬೀರನೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು