ಕೃಷ್ಣಾ ಕಾಡಾ ಗ್ರಂಥಾಲಯಕ್ಕೆ ಬೇಕು ಕಾಯಕಲ್ಪ


Team Udayavani, Dec 1, 2019, 1:37 PM IST

yg-tdy-1

ಶಹಾಪುರ: ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಈ ಭಾಗದ ರೈತರ ಪಾಲಿಗೆವರವಾದ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿ ಕಟ್ಟಡದಲ್ಲಿ ಆರಂಭದಿಂದಲೂ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿವರೆಗೂ ಈಗ್ರಂಥಾಲಯ ಓದುಗರ ಮನ ತಣಿಸಿದೆ. ಆದರೆ ಇದೀಗ ಗ್ರಂಥಾಲಯ ದುರಸ್ತಿ ಹಂತದಲ್ಲಿದ್ದು, ಓದುಗರಿಗೆ ಕಿರಿಕಿರಿಯುಂಟು ಮಾಡಿದೆ.

ಸುಮಾರು 30 ವರ್ಷಗಳಿಂದ ಈಗ್ರಂಥಾಲಯ ಓದುಗರ ಅಭಿರುಚಿಗೆ ತಕ್ಕಂತೆ,ಪುಸ್ತಕ, ಹಲವಾರು ಕೃತಿಗಳು ಸೇರಿದಂತೆಪ್ರಮುಖ ಕನ್ನಡ ದಿನ ಪತ್ರಿಕೆ, ಮ್ಯಾಗಜಿನ್‌ ಗಳನ್ನು ಒದಗಿಸುತ್ತ ಬಂದಿದೆ. ಪ್ರಸ್ತುತಗ್ರಂಥಾಲಯ 40/60 ಅಳತೆ ಹೊಂದಿದ್ದು, ಓರ್ವ ಗ್ರಂಥಾಲಯ ಸಹಾಯಕ ಮತ್ತು ಒಬ್ಬಶುಚಿಗಾರ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ.

ಹನಿ ನೀರಿಲ್ಲ: ಕೃಷ್ಣಾ ಕಾಡಾ ಕಚೇರಿ ನೌಕರರಿಗೆ ಓದಲು ಅನುಕೂಲವಾಗಿದೆ. ಅಲ್ಲದೆ ಕಾಡಾ ವಸತಿ ಪ್ರದೇಶದ ಜನರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕ, ವೃಂದ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಟ್ಟಡದುರಸ್ತಿ ಕಾಣದೇ ಹಾಳು ಕೊಂಪೆಯಾಗಿದ್ದು, ಓದುಗರಿಗೆ ಇಲ್ಲಿ ಕುಡಿಯಲು ಹನಿ ನೀರು ಕೂಡ ಸಿಗದಾಗಿದೆ. ಗ್ರಂಥಾಲಯದಲ್ಲಿ ಒಟ್ಟು 22,920 ಪುಸ್ತಕಗಳು, ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕಗ್ರಂಥಗಳು ಇಲ್ಲಿವೆ.

ಓರ್ವ ಸದಸ್ಯರಿಂದ 101 ರೂ. ಶುಲ್ಕ ಪಡೆಯಲಾಗುತ್ತಿದೆ. ಸದಸ್ಯರೊಬ್ಬರಿಗೆ ಎರಡು ಪುಸ್ತಕ ನೀಡಲಾಗುತ್ತಿದ್ದು, 15 ದಿನಕ್ಕೊಮ್ಮೆ ಪುಸ್ತಕ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಗ್ರಂಥಾಲಯ ಶುಚಿಗಾರ. ಕಟ್ಟಡ ದುರಸ್ತಿ ಕಂಡಿಲ್ಲ, ಕಿಟಕಿ ಗಾಜುಗಳುಒಡೆದಿವೆ, ಮಳೆ ನೀರಿಗೆ ಕಟ್ಟಡ ಹೆಚ್ಚು ತೇವಾಂಶ ಹಿಡಿದಿದೆ. ಕಟ್ಟಡದ ಮೂರನೇಮಹಡಿಯಲ್ಲಿ ಗ್ರಂಥಾಲಯ ಇರುವುದರಿಂದ ಕಟ್ಟಡ ಮೇಲ್ಛಾವಣಿ ಮಳೆ ನೀರಿನಿಂದ ತೀರ ತೇವಾಂಶ ಹೀರಿಕೊಂಡಿದೆ. ಆದ್ದರಿಂದ ಕಟ್ಟಡ ದುರಸ್ತಿ ಅವಶ್ಯ ಎನ್ನುತ್ತಾರೆ ಓದುಗರು.

ಸುರಕ್ಷತೆ ಇಲ್ಲ: ಕಿಟಕಿ ಗಾಜುಗಳು ಒಡೆದಿದ್ದು, ಮಳೆ ಜೋರಾಗಿ ಬಂದಾಗ ಕಿಟಕಿ ಮೂಲಕ ನೀರು ಕಚೇರಿಯೊಳಗೆ ನುಗ್ಗುತ್ತದೆ. ಈಸಮಸ್ಯೆ ಕುರಿತು ಜಿಲ್ಲಾ ಗ್ರಂಥಾಲಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಗ್ರಂಥಾಲಯ ಸಹಾಯಕ ತಿಳಿಸುತ್ತಾರೆ. ಶುಚಿಗಾರನೇ ಇಲ್ಲಿ ಗ್ರಂಥ ಪಾಲಕ. ಕರ್ತವ್ಯಕ್ಕೆಹಾಜರಾಗದ ಗ್ರಂಥಾಲಯ ಸಹಾಯಕ, ಕುಡಿಯಲು ನೀರಿಲ್ಲವೆನ್ನುವುದು ಓದುಗರ ದೂರು. ಒಟ್ಟಿನಲ್ಲಿ ಗ್ರಂಥಾಲಯದ ಕಟ್ಟಡದುರಸ್ತಿಯೊಂದಿಗೆ ಗ್ರಂಥಾಲಯ ಸಹಾಯಕಸಮರ್ಪಕ ಕರ್ತವ್ಯ ನಿರ್ವಹಿಸಬೇಕೆನ್ನುವುದು ಓದುಗರ ಒತ್ತಾಸೆಯಾಗಿದೆ.

 

-ಮಲ್ಲಿಕಾರ್ಜುನ ಮುದ್ನೂರ

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.