ನರೇಗಾ ಯೋಜನೆ; 345 ಜನ ಕಾರ್ಮಿಕರಿಗೆ ಕೆಲಸ
Team Udayavani, Mar 27, 2022, 3:08 PM IST
ಸುರಪುರ: ತಾಲೂಕಿನ ದೇವಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಯೋಜನೆ ಅಡಿ 345 ಜನ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ಮೂಡಲ ತಿಳಿಸಿದರು.
ನಾಲಾ ಊಳೆತ್ತುವುದು, ರಸ್ತೆ ಬದಿಯಲ್ಲಿನ ಜಂಗಲ್ ಕಂಟಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ದೇವಾಪುರದಿಂದ ಭಾಗಣ್ಣ ಮತ್ಯಾನ ಗದ್ದುಗೆವರೆಗೆ ಕೆಬಿಜೆಎನ್ಎಲ್ ಕಾಲುವೆಯ ಊಳು ಎತ್ತಲು 120 ಜನ ಕಾರ್ಮಿಕರು, ಪರಮಣ್ಣ ಮುತ್ಯಾನ ಗದುಗೆವರೆಗೆ ನಾಲಾ ಊಳು ಎತ್ತವ ಕಾರ್ಯಕ್ಕೆ 180 ಜನ, ಅಲ್ಲಿಂದ ಹಿರೇಹಳ್ಳದವರೆಗಿನ ನಾಲಾ ಊಳು ಎತ್ತಲು 45 ಜನ ಸೇರಿ ಒಟ್ಟು 345 ಜನ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ ಎಂದು ತಿಳಿಸಿದರು.
ಯೋಜನೆ ಅಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ ಕಾರ್ಮಿಕರು ಗುಳೆ ಹೋಗುವುದನ್ನು ನಿಲ್ಲಿಸಬೇಕು. ಅವರವರ ಗ್ರಾಮಗಳಲ್ಲಿಯೇ ಕೆಲಸ ನೀಡಲಾಗುವುದು. ಹೊಸ ಮಾರ್ಗಸೂಚಿಯಂತೆ ಕಾರ್ಮಿಕರಿಗೆ ದಿನಕ್ಕೆ 289 ರೂ. ಮತ್ತು ಸಾಮಗ್ರಿಗಳಿಗೆ 10 ರೂ. ನೀಡಲಾಗುತ್ತಿದೆ. ಪ್ರತಿ ಕಾರ್ಮಿಕರಿಗೆ 150 ದಿನ ಕೆಲಸ ಕೊಡಲಾಗುವುದು. ಕಾರಣ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ