ತ್ಯಾಜ್ಯ ತುಂಬಿದ ತಿಮ್ಮಣ್ಣ ಬಾವಿ
Team Udayavani, Oct 10, 2018, 4:13 PM IST
ಗುರುಮಠಕಲ್: ನಗರದ ಮುಖ್ಯ ರಸ್ತೆಯಲ್ಲಿ ಎರಡು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟ ತಿಮ್ಮಣ್ಣ ಬಾವಿಯಲ್ಲಿ ಜಲಮೂಲ ಇದೆ. ಆದರೆ ತ್ಯಾಜ್ಯ ಬಾವಿಯಲ್ಲಿ ತುಂಬಿ ಚರಂಡಿಯಾಗಿ ಪರಿರ್ವನೆಗೊಂಡಿದೆ.
ಈ ಐತಿಹಾಸ ತಿಮ್ಮಣ್ಣ ಬಾವಿಗೆ ನಿರ್ವಹಣೆ ಭಾಗ್ಯವಿಲ್ಲ. ನಗರದ ಬಹುತೇಕರು ಈ ಬಾವಿ ಇರುವ ರಸ್ತೆಯಿಂದಲೇ ಸಂಚಾರಿಸುತ್ತಾರೆ. ಆದರೆ ಬಾವಿ ದುಸ್ಥಿತಿ ಕುರಿತು ಚಿಂತನೆ ನಡೆಸುತ್ತಿಲ್ಲ. ಈ ಬಾವಿಯನ್ನು ತಿಮ್ಮಣ್ಣ ಎನ್ನುವವರು ನಿರ್ಮಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತವೆ. ಹೀಗಾಗಿ ಇದಕ್ಕೆ ತಿಮ್ಮಣ್ಣನ ಬಾವಿ ಎಂದೇ ಕರೆಯಲಾಗುತ್ತಿದೆ. ಬಸ್ ನಿಲ್ದಾಣಕ್ಕೆ ಸಮೀಪದಲ್ಲಿರುವ ತಿಮ್ಮಣ್ಣ ಬಾವಿ ಜನಬಿಡು ಪ್ರದೇಶದಲ್ಲಿದ್ದು, ಉತ್ತಮ ನೀರಿನ ಸೆಲೆ ಹೊಂದಿದೆ. ಮಳೆಗಾಲದಲ್ಲಿ ಬಾವಿಯಲ್ಲಿನ ನೀರು ನೆಲ ಮಟ್ಟಕ್ಕೆ ತುಂಬಿ ಹೊರಗಡೆ ಹರಿಯುತ್ತದೆ. ಆದರೆ ಸಾರ್ವಜನಿಕರು ಕಸಕಡ್ಡಿ ಹಾಕುವುದರಿಂದ ಬಾವಿ ಕುಲಿಷಿತಗೊಂಡಿದೆ.
ಪುರಸಭೆಯವರು ಒಂದೆರಡು ಬಾರಿ ಬಾವಿ ಸ್ವತ್ಛಗೊಳಿಸಿದ್ದರು. ಸಾರ್ವಜನಿಕರು ಕಸ ಹಾಕುವುದರಿಂದ ಮತ್ತೆ ಬಾವಿ ಕುಲುಷಿತಗೊಂಡಿದೆ. ಈ ಮೊದಲು ಸುತ್ತಲಿನ ಜನ ಈ ಬಾವಿ ನೀರನ್ನು ಕುಡಿಯಲು ಬಳಸುತ್ತಿದ್ದರು. ಯಾವಾಗ ವ್ಯಾಪಾರಿಗಳು ಕಸ ಹಾಕಲು ಆರಂಭಿದರೋ ಅಂದಿನಿಂದ ಬಾವಿ ನೀರು ಕಲುಷಿತಗೊಳ್ಳಲಾರಂಭಿಸಿತು.
ನಗರದ ನೀರಿನ ಸಮಸ್ಯೆ ನೀಗಿಸಲು ಸುಮರು 45 ಕಿ.ಮೀಟರ್ ದೂರದ ಭೀಮಾ ನದಿಯಿಂದ ನೀರನ್ನು ತರಲಾಗುತ್ತದೆ. ಆದರೆ ನಗರದಲ್ಲೇ ಇರುವ ಜಲಸಂಪನ್ಮೂಲ ರಕ್ಷಸಿಕೊಳ್ಳುವಲ್ಲಿ ಪುರಸಭೆ ಏಕೆ ಮುಂದಾಗಿಲ್ಲ ಎನ್ನುವುದು ಜನರ ಪ್ರಶ್ನೆ.
14 ಬಾವಿಗಳ ನಿರ್ವಹಣೆ ಕುರಿತು ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಪುರಸಭೆ ಯಿಂದ ಕಾರ್ಯ ಕೈಗೊಳ್ಳುವಂತೆ ಆದೇಶಿರುವುದರಿಂದ ಶೀಘ್ರವೇ ಈ ಕುರಿತು ಸಭೆ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.
ಈ ಬಾವಿ ಯಾವಗ ನಿರ್ಮಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಇಲ್ಲ. ನಾಯಕನ ಬಾವಿಯನ್ನು ನಿರ್ಮಿಸಿದ ಒಂದೆರಡು ವರ್ಷಗಳ ನಂತರ ಈ ಬಾವಿಯನ್ನು ನಿರ್ಮಿಸಿದ್ದಾರೆ ಎಂದು ಹಿರಿಯರು ಹೇಳುತ್ತಿದ್ದಾರೆ.
ಬಸವಂತ ರಾಜ್ ನೀರೆಟಿ, ನಿವೃತ್ತ ಶಿಕ್ಷಕ
ಬಾವಿಯಲ್ಲಿ ಸಮೃದ್ಧವಾದ ನೀರಿನ ಸೆಲೆಯಿದೆ. ಈಗ ಬಾವಿಯಲ್ಲಿ ನಿರಿದ್ದರೂ, ಕಸಬಿದ್ದು ಚರಂಡಿಯಂತಾಗಿರುವುದು
ದುರದೃಷ್ಟಕರ.
ಸುರೇಶ ಬುದ್ದಿ, ಸ್ಥಳೀಯ ನಿವಾಸಿ
ಪುರಸಭೆಯವರು ಒಂದೆರಡು ಸಲ ಬಾವಿ ಸ್ವತ್ಛಗೊಳಿಸಿದ್ದರು. ಆದರೆ ಸಾರ್ವಜನಿಕರು ಕಸ ಹಾಕಿದ್ದರಿಂದ ಮತ್ತೆ ಕುಲುಷಿತಗೊಂಡಿದೆ. ಈ ಬಾವಿಗೆ ತಡೆಗೊಡೆ ನಿರ್ಮಿಸಬೇಕು. ಪುರಸಭೆ ಸಭೆಯಲ್ಲಿ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು.
ಪಾಪಿರೆಡ್ಡಿ, ಪುರಸಭೆ ಸದಸ
ಚನ್ನಕೇಶವುಲು ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ