ಸಮಯ ಪ್ರಜ್ಞೆಯಿಂದ ತಪ್ಪಿದ ಸಿಲಿಂಡರ್ ದುರಂತ
Team Udayavani, Mar 26, 2022, 3:33 PM IST
ಶಹಾಪುರ: ಗ್ರಾಮದಲ್ಲಿ ಕಳೆದ ಫೆ.25ರಂದು ನಡೆದ ಸಿಲಿಂಡರ್ ದುರಂತ ಶುಕ್ರವಾರಕ್ಕೆ ಸರಿಯಾಗಿ ಒಂದು ತಿಂಗಳ ಹೊತ್ತಿಗೆ ಮತ್ತೂಂದು ದುರಂತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಗ್ರಾಮದ ಗಣಪತಿ ತಮಗೊಂಡ ಎಂಬವರ ಮನೆಯಲ್ಲಿ 5 ಕೆ.ಜಿ ಸಿಲಿಂಡರ್ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಉರಿಯ ತೊಡಗಿದೆ. ತಕ್ಷಣ ತಡಮಾಡದೇ ಅದನ್ನು ಹಸಿ ತಟ್ಟು, ಹಾಸಿಗೆಯಿಂದ ಮುಚ್ಚಲಾಗಿದೆ. ಆದರೂ ಬೆಂಕಿ ಉರಿ ನಿಲ್ಲದ ಕಾರಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಅಗ್ನಿಶಾಮಕ ದಳದ ಠಾಣಾಧಿಕಾರಿ ಮಚ್ಚೇಂದ್ರನಾಥ್, ಬಸವರಾಜ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಇದೇ ಸಂದರ್ಭದಲ್ಲಿ ನೆರದಿದ್ದ ಜನರಲ್ಲಿ ಸಿಲಿಂಡರ್ ಬಳಕೆ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿ ಹೇಳಿದರು. ಸಿಲಿಂಡರ್ ಆಕಸ್ಮಿಕ ಬೆಂಕಿ ಹತ್ತಿರುವ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಗ್ರಾಮದಲ್ಲಿ ಇದು ಮೂರನೇ ದುರಂತ. ವಾರದ ಹಿಂದೆ ಒಬ್ಬರ ಮನೆಯಲ್ಲೂ ಸಿಲಿಂಡರ್ ಅನಿಲ ಸೋರಿಕೆ ವಾಸನೆ ಎಲ್ಲೆಡೆ ಹರಡಿರುವುದರಿಂದ ಯುವಕರಿಬ್ಬರು ಅದನ್ನು ಬ್ಯಾರಲ್ ಒಂದರಲ್ಲಿ ಹಾಕಿ ನೀರು ಸುರಿದು ಹೊರವಲಯದಲ್ಲಿ ಹೊತ್ತೊಯ್ದಿದ್ದರು. ಆಗಲೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅದನ್ನು ಸಮರ್ಪಕವಾಗಿ ಪರಿಹರಿಸಿದ್ದರು.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿ ಕಾರಿಗಳಾದ ಮಚ್ಚೇಂದ್ರನಾಥ್, ಬಸವರಾಜ ಸಿಬ್ಬಂದಿಗಳಾದ ಶಿವರಾಜ, ನೂರಂದಯ್ಯಸ್ವಾಮಿ, ರಫೀಕ್, ಮಂಜುನಾಥ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ