ವೆಂಕಟರೆಡ್ಡಿ-ರಾಜುಗೌಡ ರೋಡ್ ಶೋ
Team Udayavani, May 11, 2018, 2:23 PM IST
ಯಾದಗಿರಿ: ಯಾದಗಿರಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಹಾಗೂ ಅವರ ಸಹೋದರ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು.
ನಗರದ ಮೈಲಾಪುರ ಬೇಸ್ ನಿಂದ ಚಕ್ಕರಕಟ್ಟ ಮುಖಾಂತರ, ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂ ಧಿ ಪುತ್ಥಳಿಗೆ ಮಾರ್ಲಾಪಣೆ ಮಾಡಿ ಮಾತನಾಡಿದ ವೆಂಕಟರೆಡ್ಡಿ ಮುದ್ನಾಳ, ಚುನಾವಣೆಯಲ್ಲಿ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸಬೇಕು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಎಲ್ಲಾ ಜಾತಿ ಧರ್ಮವರನ್ನು ಸಮಾನಾಗಿ
ಕಾಣುವ ದೃಷ್ಟಿಕೋನ ನನ್ನದು, ಸಬ್ ಕಾ ಸಾಥ ಸಬ್ ಕಾ ವಿಕಾಸ್ ಎನ್ನುವ ಮಂತ್ರ ಭಾರತೀಯ ಜನತಾ ಪಕ್ಷ ನನಗೆ ಹಾಕಿಕೊಟ್ಟಿರುವ ಮೂಲಮಂತ್ರವಾಗಿದೆ ಎಂದರು.
ಮಾಜಿ ಶಾಸಕ ಡಾ| ವೀರಬಸಂತರೆಡ್ಡಿ ಮುದ್ನಾಳ ಮಾತನಾಡಿ, ಮುದ್ನಾಳ ಕುಟುಂಬ ಜನರ ಸೇವೆಗಾಗಿ ಸದಾ ಸಿದ್ಧರಿದ್ದು, ವೆಂಕಟರೆಡ್ಡಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ|
ಶರಣಭೂಪಾಲರಡ್ಡಿ ನಾಯ್ಕಲ್, ದೇವಿಂದ್ರನಾಥ ನಾದ, ಖಂಡಪ್ಪ ದಾಸನ, ಬಸವರಾಜ ಚಂಡ್ರಿಕಿ, ಉಮಾರಡ್ಡಿಗೌಡ
ನಾಯ್ಕಲ್, ಬಸವರಾಜ ಪಾಟೀಲ ಬಿಳಾರ, ಚನ್ನಾರಡ್ಡಿ ಪಾಟೀಲ ಬಿಳಾರ, ಮಲ್ಲಣಗೌಡ ಹತ್ತಿಕುಣಿ, ಮಹೇಶಗೌಡ ಮುದ್ನಾಳ, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ವಿನಾಯಕ ಮಾಲಿಪಾಟೀಲ, ರುದ್ರುಗೌಡ ಪಾಟೀಲ, ರವಿ ಬಾಪುರೆ, ಮಲ್ಲಿಕಾರ್ಜುನರಡ್ಡಿ, ಮೋಹನ ಬಾಬು, ಸುರೇಶ ಕೊಟಿಮನಿ,
ಶಂಕ್ರಪ್ಪಗೌಡ ಗೋನಾಲ, ವೀಣಾ ಮೋದಿ, ಸುನೀತಾ ಚವ್ಹಾಣ, ನಾಗರಾಜ ಬೀರನೂರ್, ಮಹೇಂದ್ರ ಕಂದಕೂರ, ಸೂಗರಡ್ಡಿ ಬಿಳಾರ, ಡಾ| ಶರಣರಡ್ಡಿ ಕೋಡ್ಲಾ, ವೆಂಕಟರೆಡ್ಡಿ ತಂಗಡಿಗಿ, ಎಸ್.ಪಿ. ನಾಡೇಕಾರ್, ಸುನೀತಾ ರಾಠೊಡ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ದೌರ್ಜನ್ಯ ಹತ್ತಿಕ್ಕುವುದು ನನ್ನ ಸಂಕಲ್ಪ
ಸುರಪುರ: ನಗರಸಭೆ ವ್ಯಾಪ್ತಿಯ ರಂಗಂಪೇಟ ತಿಮ್ಮಾಪುರ, ಹಸನಾಪುರ ದಿವಳಗುಡ್ಡ ವಣಿಕ್ಯಾಳ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಗುರುವಾರ ರೋಡ್ ಶೋ ನಡೆಸಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಸರಕಾರ ಬದಲಿಸಿ ಬಿಜೆಪಿ ಬೆಂಬಲಿಸಿ ಘೋಷಣೆ ಕೂಗಿದರು. ಈ ವೇಳೆ ರಾಜುಗೌಡ ಮಾತನಾಡಿ, ಹೆದರಿಸುವುದ ಬೆದರಿಸುವುದು ಭಯದ ವಾತಾವರಣ ನಿರ್ಮಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಇದಕ್ಕೆಲ್ಲ ರಾಜುಗೌಡ ಹೆದರುವುದಿಲ್ಲ. ಕಾರ್ಯಕರ್ತರೂ ಕೂಡ ಹೆದರುವ ಅಗತ್ಯವಿಲ್ಲ. ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಿ ಶಾಂತಿ ಮತ್ತು ಸೌರ್ಹಾದ ವಾತಾವರಣಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ನನಗೆ ವ್ಯಕ್ತವಾಗುತ್ತಿರುವ ಬೆಂಬಲ ಸಹಿಸಲಾಗದೆ ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ನನ್ನ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ದೌರ್ಜನ್ಯ ಹತ್ತಿಕ್ಕುವುದು ನನ್ನ ಮೊದಲ ಸಂಕಲ್ಪ. ಇದಕ್ಕೆ ತಾವು ಸಹಕರಿಸಿ ನನಗೆ ಮತನೀಡಿ ಗೆಲ್ಲಿಸಿ ಎಂದರು. ಮುಖಂಡರಾದ ಸುರೇಶ ಸಜ್ಜನ್, ರಾಜಾ ಹಣಮಪ್ಪ ನಾಯಕ ತಾತಾ, ಚಂದ್ರಶೇಖರ ಜಡಿಮರಳ, ಮಲ್ಲಿಕಾರ್ಜುನ ಕಡೇಚೂರ, ಹಣಮಂತ ಚಂದನಕೇರಿ, ವೀರಭದ್ರಪ್ಪ ಕುಂಬಾರ, ಭೀಮಾಶಂಕರ ಬಿಲ್ಲವ್, ಶ್ರೀರಂಗ ಮಿರಿಯಾಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್