ಮಳೆಗಾಗಿ ನಂದಿ ಬಸವಣ್ಣನಿಗೆಸಗಣಿ ಬಡಿದ ಗ್ರಾಮಸ್ಥರು!
Team Udayavani, Aug 6, 2018, 12:51 PM IST
ಶಹಾಪುರ: ಬರಗಾಲದಿಂದ ತತ್ತರಿಸಿದ ರೈತರು ಕಪ್ಪೆ, ಕತ್ತೆ, ಮದುವೆ, ಗ್ರಾಮ ದೇವತೆಗೆ ನೀರು ಹಾಕುವುದು ಸೇರಿದಂತೆ ಹಲವು ಸಾಂಪ್ರದಾಯಿಕ ಪದ್ಧತಿಗಳು ಆಚರಿಸುವುದನ್ನು ನೋಡಿದ್ದೇವೆ. ಆದರೆ, ತಾಲೂಕಿನ ಸಗರ ಗ್ರಾಮದಲ್ಲಿ ಅಗಸಿ ಬಸವಣ್ಣ ಹತ್ತಿರದ ನಂದಿ ಬಸವಣ್ಣನ ಪ್ರತಿಮೆಗಳಿಗೆ ಎತ್ತು ಅಥವಾ ಗೋವಿನ ಸಗಣಿ ಬಡಿಯುವ ವಾಡಿಕೆಯಿದೆ.
ಎರಡು ತಿಂಗಳಾದರೂ ಸಮರ್ಪಕ ಮಳೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸವಣ್ಣನ ಪ್ರತಿಮೆಗೆ ಗ್ರಾಮದ ಮಕ್ಕಳು, ಮಹಿಳೆಯರು ಸಗಣಿ ಬಡಿಯುವ ಮೂಲಕ ಮಳೆ ಆಗಮನಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂದಿ ಬಸವಣ್ಣನಿಗೆ ಸಗಣಿ ಬಡಿದರೆ ಅದನ್ನು ಸ್ವತ್ಛಗೊಳಿಸಲು ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದು. ಈ ಹಿಂದೆ ಬರ ಎದುರಾದಾಗ ಬಸವಣ್ಣನಿಗೆ ಸಗಣಿ ಬಡಿದ 15 ದಿನಗಳಲ್ಲಿ ಮಳೆ ಬಂದ ಉದಾಹರಣೆಗಳಿವೆ.
ಸಾಂಪ್ರಾದಾಯಿಕವಾಗಿ ಅನಾದಿ ಕಾಲದಿಂದಲೂ ಮಳೆ ಬಾರದಿದ್ದಾಗ ಇಲ್ಲಿನ ಅಗಸಿ ಬಸವಣ್ಣನಿಗೆ ಗ್ರಾಮಸ್ಥರು ಮಳೆ ಕರುಣಿಸು ದೇವ ಎಂದು ಸಗಣಿ ಬಡಿಯುವ ಪದ್ಧತಿ ಜಾರಿಯಲ್ಲಿದೆ. ಅದರಂತೆ ಪ್ರಸಕ್ತ ಮಳೆ ಅಭಾವದಿಂದ ಕಂಗಾಲಾದ ರೈತರು ಕಳೆದ ವಾರದಿಂದ ಬಸವಣ್ಣನ ಪ್ರತಿಮೆಗೆ ಸಗಣಿ ಬಡಿಯುತ್ತಿದ್ದಾರೆ ಎನ್ನುತ್ತಾರೆ ಕರಿ ಬಸವೇಶ್ವರ ಮಠದ ಮರಳು ಮಹಾಂತ ಶಿವಾಚಾರ್ಯರು.
ಮಳೆ ಅಭಾವ ಉಂಟಾದಾಗ ಮೊದಲಿಂದಲೂ ಇಲ್ಲಿನ ನಂದಿ ಬಸವಣ್ಣನ ಪ್ರತಿಮೆಗೆ ಗ್ರಾಮಸ್ಥರು ಸಗಣಿ ಬಡಿಯುವ ಪದ್ಧತಿ ಆಚರಣೆಯಲ್ಲಿದೆ. ಬಸವಣ್ಣನಿಗೆ ಸಗಣಿ ಬಡಿದರೆ ಅದನ್ನು ಸ್ವತ್ಛಗೊಳಿಸಲು ವರುಣ ಕೃಪೆಯಾಗಲಿದೆ ಎಂಬುದು ಇಲ್ಲಿನ ಜನರ ನಂಬಿಕೆ ಎನ್ನುತ್ತಾರೆ ಸಾಹಿತಿ ಲಿಂಗಣ್ಣ ಪಡಶೆಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್