ವಿಶ್ವಕರ್ಮ ಉಪ ಪಂಗಡದಿಂದ ದೈವಜ್ಞ ಬ್ರಾಹ್ಮಣರ ಕೈ ಬಿಡಿ
Team Udayavani, Nov 16, 2020, 6:32 PM IST
ಯಾದಗಿರಿ: ದೈವಜ್ಞ ಬ್ರಾಹ್ಮಣರನ್ನು ವಿಶ್ವಕರ್ಮ ಸಮುದಾಯಗಳ ಉಪ ಪಂಗಡಗಳಿಂದ ಕೈಬಿಡುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ವಿರ್ಶವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಆನಂದ ಲಕ್ಷ್ಮೀಪುರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಹಾಸಭಾ ಸದಸ್ಯರು, ದೈವಜ್ಞ ಬ್ರಾಹ್ಮಣರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷ್ಮೀಪುರ ಮಾತನಾಡಿ, ಕೇವಲ ಪಂಚವೃತ್ತಿಗಳಲ್ಲೊಂದಾದ ಚಿನ್ನ, ಬೆಳ್ಳೆ ಕೆಲಸಗಳನ್ನು ಮಾಡುತ್ತಾರೆ ವಿನಃ ವಿಶ್ವಕರ್ಮರಿಗೂ ದೈವಜ್ಞ ಬ್ರಾಹ್ಮಣರಿಗೂ ಯಾವುದೇ ಸಂಬಂಧ ಇರುವುದಿಲ್ಲ. ವಿಶ್ವಕರ್ಮರು ತಮ್ಮ ಕುಲದೇವರು. ವಿಶ್ವಕರ್ಮನ ಪೂಜೆ ಸಲ್ಲಿಸುವುದು ವಿಶ್ವಕರ್ಮ ಪಂಚ ಕಸುಬುಗಳನ್ನು ಮಾಡುವುದು ಸೃಷ್ಟಿ ನಿರ್ಮಿಸಿದ ವಿಶ್ವಕರ್ಮ ವಂಶಸ್ಥರಾದ ವೀರ ಬ್ರಹ್ಮೆಂದ್ರ ಸ್ವಾಮಿಗಳು ತಿಂಥಣಿಯ ಮೌನೇಶ್ವರರು ಸೇರಿ ಹಲವು ಪವಾಡ ಪುರುಷರನ್ನು ಹೊಂದಿದ ಸಮಾಜಕ್ಕೂ ದೈವಜ್ಞ ಬ್ರಾಹ್ಮಣರಿಗೂ ಯಾವುದೇ ಸಂಬಂಧವಿಲ್ಲ ಎಂದರು.
ಆದರೂ ನಮ್ಮ ವಿಶ್ವಕರ್ಮ ಸಮಾಜಕ್ಕೆ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದ್ಯಾವ ನ್ಯಾಯ ಅವರನ್ನು ಕೂಡಲೇ ಪಂಗಡದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ ಇವರ ಬಗ್ಗೆ ಅವಹೇಳನಕಾರಿಯಾಗಿ ಮಾತುಗಳನ್ನಾಡಿ ಅವರ ಪ್ರತಿಕೃತಿ ದಹನ ಮಾಡಿರುತ್ತಾರೆ. ಅವರಿಗೆ ಅಷ್ಟೇ ಅಲ್ಲದೇ ಇಡಿ ನಮ್ಮ ವಿಶ್ವಕರ್ಮ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ದೇವೇಂದ್ರಪ್ಪ ಎಲ್. ವಡಗೇರಿ ಮಹೇಶ ವಿಶ್ವಕರ್ಮ ತಡಿಬಿಡಿ, ಶಿವಣ್ಣ ಹೂನೂರು, ಬಸವರಾಜ ಸೈದಾಪೂರ, ಶಂಕರ ಕರಣಿಗಿ, ಬನ್ನಪ್ಪ ಕಾಳೆಬೆಳಗುಂದಿ, ರಮೇಶ ಹತ್ತಿಕುಣಿ, ಶೇಖರ ತಾತಾ ಮುಷ್ಟೂರು, ಮಂಜುನಾಥ ಕಂಚಗಾರ, ರಾಜಶೇಖರ, ಜನಾರ್ದನ ಯಡ್ಡಳ್ಳಿ, ರಾಮಾಚಾರಿ, ಸಂಗಮೇಶ ವಿಶ್ವಕರ್ಮ, ಅಯ್ಯಣ್ಣ ಗಾಜರಕೋಟ, ಡಾ| ಸಂತೋಷ ಶಹಾಪೂರ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?