ಹತ್ತಿ ಬೆಳೆಗೂ ತಪಿಲ್ಲ ಕೋವಿಡ್ ಸಂಕಷ್ಟ
Team Udayavani, Apr 16, 2020, 1:52 PM IST
ವಡಗೇರಾ: ಗ್ರಾಮದಲ್ಲಿ ರೈತ ಸಂಗ್ರಹಿಸಿಟ್ಟ ಹತ್ತಿ ಬೆಳೆ
ವಡಗೇರಾ: ಕೊರೋನಾ ವೈರಸ್ ತಡೆಗೆ ಏ.14ರ ವರೆಗೂ ಲಾಕ್ಡೌನ್ ಘೋಷಿಸಲಾಗಿದ್ದು, ಈ ಹಿಂದೆಯೇ ಕಟಾವು ಮಾಡಿಟ್ಟ ಹತ್ತಿ ಬೆಳೆ ಸಾಗಿಸಲಾಗದೇ ಕೊರೊನಾ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ವಡಗೇರಾ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಹತ್ತಿ ಬೆಲೆ ಕುಸಿತದ ಪರಿಣಾಮ ಸಂಗ್ರಹಿಸಿಟ್ಟಿದ್ದಾರೆ. ಆದರೆ ಇದೀಗ ಲಾಕ್ಡೌನ್ ಆದೇಶವೇ ರೈತರಿಗೆ ತುಂಬ ತೊಂದರೆಯನ್ನುಂಟು ಮಾಡಿದೆ. ಪ್ರತಿ ಎಕರೆಗೆ 35 ರಿಂದ 40 ಸಾವಿರ ಖರ್ಚು ಮಾಡಿ ಹತ್ತಿ ಬೆಳೆಯಲಾಗಿದ್ದು, ಒಂದೆಡೆ ರೈತರು ಕೊರೊನಾ ಹೊಡೆತಕ್ಕೆ ನಲುಗಿದ್ದರೆ ಇನ್ನೊಂದೆಡೆ ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆ ರೈತರ ಆಸೆಗೆ ತಣ್ಣೀರೆರಚಿದೆ. ಹೀಗಾಗಿ ಮಳೆಯಿಂದ ಹತ್ತಿ ಹಾಳಾಗುವ ಭಯದಲ್ಲಿ ರೈತರಿದ್ದಾರೆ.
ಉತ್ತಮ ಬೆಲೆ ಸಿಗುತ್ತದೆನ್ನುವ ನಿರೀಕ್ಷೆಯಲ್ಲಿ ಹತ್ತಿ ಬೆಳೆ ಸಂಗ್ರಹಿಸಿಟ್ಟ ರೈತರು ಮಾರಾಟ ಮಾಡುಲಿಕ್ಕಾಗದೇ ಇತ್ತ ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಸಾಲದ ಸುಳಿಗೆ ಸಿಲುಕಿದ್ದಾರೆ.
ಪ್ರವಾಹದ ಹಿನ್ನೀರಿನಿಂದ ಐದು ಎಕರೆ ಜಮೀನು ಜಲಾವೃತಗೊಂಡಿತ್ತು. ಆದರೆ ಬೇರೆ ಮೂರು ಎಕರೆ ಹೊಲದಲ್ಲಿ ಹತ್ತಿ ಬೆಳೆದಿದ್ದೆ. ಬೆಳದ ಹತ್ತಿಯನ್ನು ಮಾರಿ ಕೈಗಡ ಸಾಲ, ಬ್ಯಾಂಕ್ ಸಾಲ ಕಟ್ಟಿ ಸಮಸ್ಯೆ ಬಗೆಹರಿಸಿಕೊಳ್ಳುವ ಯೋಚನೆ ಇತ್ತು. ಇದೀಗ ಎಲ್ಲ ಬುಡಮೇಲಾಗಿದೆ.
ಮಂಜು ಕಾಮಣ್ಣೋರ್,
ರೈತ, ಹಯ್ನಾಳ ಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ