ಯಾದಗಿರಿ: ಸೋಂಕಿತರ ಸಂಖ್ಯೆ 515ಕ್ಕೆ ಏರಿಕೆ
ರವಿವಾರ ಐವರು ಮಕ್ಕಳು ಸೇರಿ 39 ಮಂದಿಗೆ ಕೋವಿಡ್ ದೃಢ ಇದುವರೆಗೆ 70 ಜನ ಗುಣಮುಖ
Team Udayavani, Jun 8, 2020, 12:40 PM IST
ಸಾಂದರ್ಭಿಕ ಚಿತ್ರ
ಯಾದಗಿರಿ: ಜಿಲ್ಲೆಯಲ್ಲಿ ರವಿವಾರ 10 ವರ್ಷದೊಳಗಿನ 5 ಮಕ್ಕಳು ಸೇರಿದಂತೆ ಒಟ್ಟು 39 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 515 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಯಾದಗಿರಿ ತಾಲೂಕಿನ ರಾಯನಕಲ್ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-5269) ಸೇರಿದಂತೆ ಹತ್ತಿಕುಣಿ ತಾಂಡಾದ 32 ವರ್ಷದ ಪುರುಷ (ಪಿ-5260), 30 ವರ್ಷದ ಮಹಿಳೆ (ಪಿ-5261), ವಿಶ್ವಾಸಪುರದ 20 ವರ್ಷದ ಪುರುಷ (ಪಿ-5262), ಶಹಾಪುರ ತಾಲೂಕಿನ ಸಗರದ 20 ವರ್ಷದ ಪುರುಷ (ಪಿ-5263), 45 ವರ್ಷದ ಮಹಿಳೆ (ಪಿ-5264), ಸುರಪುರ ತಾಲೂಕಿನ ನಾರಾಯಣಪುರದ 55 ವರ್ಷದ ಮಹಿಳೆ (ಪಿ-5265), 55 ವರ್ಷದ ಪುರುಷ (ಪಿ-5266), ಬದ್ದೇಪಲ್ಲಿ ತಾಂಡಾದ 19 ವರ್ಷದ ಯುವತಿ (ಪಿ-5267), ಏವೂರು ಭೀಮಾ ತಾಂಡಾದ 55 ವರ್ಷದ ಪುರುಷ (ಪಿ-5268), ರಾಯನಕಲ್ ತಾಂಡಾದ 20 ವರ್ಷದ ಮಹಿಳೆ (ಪಿ-5270), 10 ವರ್ಷದ ಬಾಲಕಿ (ಪಿ-5271), ಹತ್ತಿಕುಣಿ ತಾಂಡಾದ 6 ವರ್ಷದ ಬಾಲಕ (ಪಿ-5272), ಗಾಜರಕೋಟ್ನ 60 ವರ್ಷದ ಪುರುಷ (ಪಿ-5273), ಯಾದಗಿರಿ ನಗರದ 20 ವರ್ಷದ ಪುರುಷ (ಪಿ-5274) ಮತ್ತು 25 ವರ್ಷದ ಪುರುಷ (ಪಿ-5275), 21 ವರ್ಷದ ಮಹಿಳೆ (ಪಿ-5276) ಹಾಗೂ 35 ವರ್ಷದ ಮಹಿಳೆ (ಪಿ-5277), ಯಾದಗಿರಿ ತಾಲೂಕಿನ ವಿಶ್ವಾಸಪುರದ 25 ವರ್ಷದ ಪುರುಷ (ಪಿ-5278) ಅದೇ ಗ್ರಾಮದ 20 ವರ್ಷದ ಮಹಿಳೆ (ಪಿ-5279)ಹಾಗೂ 28 ವರ್ಷದ ಪುರುಷ (ಪಿ-5280), ಯಾದಗಿರಿ ನಗರದ 18 ವರ್ಷದ ಯುವತಿ (ಪಿ-5281), ಅರಕೇರಾ ತಾಂಡಾದ 12 ವರ್ಷದ ಬಾಲಕ (ಪಿ-5282), 9 ವರ್ಷದ ಬಾಲಕ (ಪಿ-5283), ಪಸಪೂಲ್ ತಾಂಡಾದ 25 ವರ್ಷದ ಮಹಿಳೆ (ಪಿ-5284), ಆರ್.ಹೊಸಳ್ಳಿ ತಾಂಡಾದ 10 ವರ್ಷದ ಬಾಲಕಿ (ಪಿ-5285), ಅರಕೇರಾ ಬಸವನ ತಾಂಡಾದ 20 ವರ್ಷದ ಪುರುಷ (ಪಿ-5286) ಅದೇ ತಾಂಡಾದ 35 ವರ್ಷದ ಮಹಿಳೆ (ಪಿ-5287), 18 ವರ್ಷದ ಯುವತಿ (ಪಿ-5288) ಹಾಗೂ 40 ವರ್ಷದ ಪುರುಷ (ಪಿ-5289), 13 ವರ್ಷದ ಬಾಲಕಿ (ಪಿ-5290), ಗುರುಮಠಕಲ್ನ 25 ವರ್ಷದ ಪುರುಷ (ಪಿ-5291), ಅಲ್ಲಿಪುರವಾರಿ ತಾಂಡಾದ 25 ವರ್ಷದ ಮಹಿಳೆ (ಪಿ-5292), ಮಗದಂಪುರ ತಾಂಡಾದ 52 ವರ್ಷದ ಪುರುಷ (ಪಿ-5293), ಸೌದಾಗರ ತಾಂಡಾದ 20 ವರ್ಷದ ಪುರುಷ (ಪಿ-5294), ಅದೇ ತಾಂಡಾದ 18 ವರ್ಷದ ಯುವಕ (ಪಿ-5295), ಹತ್ತಿಕುಣಿ ಸಮಲಪುರದ 30 ವರ್ಷದ ಮಹಿಳೆ (ಪಿ-5296), ಚಿನ್ನಾಕರದ 32 ವರ್ಷದ ಪುರುಷ (ಪಿ-5297), ಬೆಳಗೇರಾದ 29 ವರ್ಷದ ಪುರುಷ (ಪಿ-5298) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 39 ಜನ ಸೋಂಕಿತರಲ್ಲಿ 18 ಮಹಿಳೆಯರು, 21 ಪುರುಷರಿದ್ದು, ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಪ್ರಕರಣ ಸಂಖ್ಯೆ ಪಿ-5263, ಪಿ-5264ರ ವ್ಯಕ್ತಿಗಳು ಗುಜರಾತ್ನ ಅಹ್ಮದಾಬಾದ್ನಿಂದ ಮತ್ತು ಉಳಿದ 37 ಜನ ಮಹಾರಾಷ್ಟ್ರದ ಮುಂಬಯಿನಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದ್ದಾರೆಂದು ಜಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ
Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ