ವಾಹನ ನೋಂದಣಿಗೆ ಮುಗಿಬಿದ್ದ ಜನ
ಮಾರ್ಚ್ 15ರ ವರೆಗೆ 2 ಸಾವಿರ ದ್ವಿಚಕ್ರ-120 ಕಾರು-334 ಸಾರಿಗೆ ವಾಹನ ನೋಂದಣಿ
Team Udayavani, Mar 20, 2020, 12:28 PM IST
ಯಾದಗಿರಿ: ಬಿಎಸ್-4 ಮಾದರಿ ದ್ವಿಚಕ್ರ ವಾಹನಗಳ ನೋಂದಣಿಗೆ ಮಾರ್ಚ್
31ಕ್ಕೆ ಗಡುವು ನೀಡಲಾಗಿದ್ದು, ಕೊರೊನಾ ಭೀತಿ ಮದ್ಯೆಯೂ ಸಾರಿಗೆ ಇಲಾಖೆಯಲ್ಲಿ ಹೊಸ ವಾಹನಗಳ ನೋಂದಣಿಗೆ ಜನರು ಮುಗಿಬಿದ್ದಿದ್ದಾರೆ.
ಈ ಹಿಂದೆಯೇ ವಾಹನ ಖರೀದಿಸಿ ನೋಂದಾಯಿಸದೆ ಇರುವ ವಾಹನಗಳು ಹಾಗೂ ಹೊಸ ವಾಹನಗಳನ್ನು ಖರೀದಿಸಿ ಇದುವರೆಗೂ ನೋಂದಣಿ ಮಾಡಿಸದೆ ವಾಹನ ಚಾಲನೆ ಮಾಡುತ್ತಿರುವ ಬಿಎಸ್-4 ವಾಹನ ಮಾಲೀಕರು ಅವಶ್ಯಕ ಶುಲ್ಕ, ತೆರಿಗೆ ಪಾವತಿ ಮಾಡಿ ಸಂಬಂಧಿಸಿದ ದಾಖಲಾತಿಗಳೊಂದಿಗೆ ತಮ್ಮ ವಾಹನ ಹಾಜರುಪಡಿಸಿ ನೋಂದಾಯಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಏಪ್ರಿಲ್ 1ರಿಂದ ದೇಶದಲ್ಲಿ ಭಾರತ್ ಸ್ಟೇಜ್-4 ಮಾಪನದ ವಾಹನಗಳನ್ನು ಮಾರಾಟ ಅಥವಾ ನೋಂದಣಿ ಮಾಡಿಸುವಂತಿಲ್ಲ. ಏಪ್ರಿಲ್ 1ರಿಂದ ಬಿಎಸ್-6 ವಾಹನಗಳ ನೋಂದಣಿ ಆರಂಭಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ 2020ರ ಫೆ.1ರಿಂದ ಮಾರ್ಚ್ 15ರ ವರೆಗೆ ಜಿಲ್ಲೆಯಲ್ಲಿ 2 ಸಾವಿರ ದ್ವಿಚಕ್ರ ವಾಹನಗಳ ನೋಂದಣಿಯಾಗಿದೆ. 120 ಕಾರು, 334 ಸಾರಿಗೆ ವಾಹನ (ಗೂಡ್ಸ್, ಬಸ್ ಇತರೆ) ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಭೀತಿಯಿಂದಾಗಿ ಜನರು ಮನೆ ಬಿಟ್ಟು ಹೊರಬಾರದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಮುನ್ನೆಚ್ಚರಿಕೆಯಾಗಿ ಶಾಲೆ, ಕಾಲೇಜು, ಸಾರ್ವಜನಿಕರು ಸೇರುವ ಮಾಲ್, ಸಿನಿಮಾ ಮಂದಿರ ಮುಚ್ಚಲು ಆದೇಶಿಸಿದೆ. ಆದರೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಆತಂಕದ ಮಧ್ಯೆಯೂ ಸಿಬ್ಬಂದಿ ಮಾಸ್ಕ್ ಧರಿಸಿ ಎಚ್ಚರದಿಂದ ನಿತ್ಯದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಸಾರ್ವಜನಿಕರನ್ನು ಹೆಚ್ಚಿನ ಸಮಯ ಕಾಯಲು ಬಿಡದೇ ಅಧಿಕಾರಿಗಳು ತಕ್ಷಣವೇ ವಾಹನಗಳನ್ನು ಪರಿಶೀಲಿಸಿ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದಾರೆ. ಜಗತ್ತಿನೆಲ್ಲೆಡೆ ಕೊರೊನಾ ಭೀತಿಯಿರುವ ಹಿನ್ನೆಲೆಯಲ್ಲಿ ಬಿಎಸ್4 ವಾಹನಗಳ ನೋಂದಣಿಗೆ ಹೆಚ್ಚಿನ ಕಾಲಾವಕಾಶ ಕೊಡಬೇಕು ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬಿಎಸ್ 4 ವಾಹನಗಳನ್ನು ಮಾರ್ಚ್ 31ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಬಳಿಕ ಅಂತಹ ವಾಹನಗಳ ನೋಂದಣಿ ಸಾಧ್ಯವಾಗಲ್ಲ. ಏಪ್ರಿಲ್ 1ರಿಂದ ಬಿಎಸ್ 6
ಮಾದರಿ ವಾಹನಗಳ ನೋಂದಣಿ ಆರಂಭವಾಗಲಿದೆ.
ವಸಂತ ಚವ್ಹಾಣ,
ಪ್ರಾದೇಶಿಕ ಸಾರಿಗೆ ಅಧಿಕಾರಿ
ಮಾರ್ಚ್ 31ರೊಳಗೆ ಬಿಎಸ್-4 ವಾಹನ ನೋಂದಣಿ ಮಾಡಿಸಿಕೊಳ್ಳಬೇಕು. ಈಗ ಯುಗಾದಿ ಹಬ್ಬವೂ ಹತ್ತಿರದಲ್ಲಿಯೇ ಇದೆ. ಆಗ ಸಾಕಷ್ಟು ಜನರು ಹೊಸ ವಾಹನ ಖರೀದಿಸುತ್ತಾರೆ. ಮೇಲಾಗಿ ಕೊರೊನಾ ಆತಂಕದಿಂದ ಜನರು ಹೊರಗಡೆ ಬರಲು ಹೆದರುವಂತಾಗಿದೆ.ಆದ್ದರಿಂದ ನೋಂದಣಿಗೆ ಹೆಚ್ಚಿನ ಸಮಯಾವಕಾಶ ನೀಡಿದರೆ ಅನುಕೂಲವಾಗುತ್ತದೆ.
ಸಾಯಬಣ್ಣ,
ವಾಹನ ಮಾಲೀಕ
ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್ ನಿವಾಸಕ್ಕೆ ಬಂದ ಜಾಧವ್!
Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Tragedy: ಹೋಳಿ ಆಚರಣೆ ಬಳಿಕ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು
Yadagiri; ಒಂದೇ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ತಾಯಿ-ಮಗ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ