ಎಳರಾಮೆ ಪ್ರಥಮ ನುಡಿತೇರು ಎಳೆಯುವವರು ಯಾರು?


Team Udayavani, Aug 14, 2019, 10:01 AM IST

Udayavani Kannada Newspaper

ಸಂತೋಷ ನವಲಗುಂದ
ಯಡ್ರಾಮಿ:
ನೂತನ ಯಡ್ರಾಮಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ರಚನೆಯಾದ ಬಳಿಕ ಅದ್ಧೂರಿ ಉದ್ಘಾಟನೆಗೆ ಅನೇಕ ತೊಡಕುಗಳು ಉಂಟಾದವು. ವರುಷ ಕಳೆದರೂ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸಲು ಆಗಲಿಲ್ಲ. ಒಂದರ ಮೇಲೊಂದು ಚುನಾವಣೆ, ಸ್ಥಳೀಯ ಜಾತ್ರಾ, ಉತ್ಸವಗಳು ಹೀಗೆ ಅನೇಕ ಸಂಗತಿಗಳು ಕಾರಣವಾಗಿರಬಹುದು. ಈ ಬಾರಿಯಾದರೂ ಪ್ರಥಮ ಸಾಹಿತ್ಯ ಸಮ್ಮೇಳನ ನಡೆಸಲೇಬೇಕು ಎಂಬ ತಾಲೂಕು ಸಾಹಿತ್ಯ ಪರಿಷತ್‌ ನಿರ್ಧಾರದಿಂದ ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗಳು ನಡೆದಿವೆ.

ತಾಲೂಕು ಕೇಂದ್ರ ಯಡ್ರಾಮಿ, ಅರಳಗುಂಡಗಿ ಹಾಗೂ ಇಜೇರಿ ಒಳಗೊಂಡಂತೆ ಮೂರು ಜಿಪಂ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಈಗ ನಡೆಸಲಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಆಯ್ಕೆ ಮಾಡುವುದು ಪರಿಷತ್‌ನ ಅತಿ ದೊಡ್ಡ ಜವಾಬ್ದಾರಿಯಾಗಿದೆ. ಯಾವುದೇ ಜಾತಿ, ಮತ, ಕುಲ, ಧರ್ಮ ಎನ್ನದೇ ಸೂಕ್ತವಾದ ವ್ಯಕ್ತಿ ಆಯ್ಕೆ ಮಾಡಿದರೆ ಪರಿಷತ್ತಿನ ಮೌಲ್ಯ ಹೆಚ್ಚಾಗುತ್ತದೆ ಎಂದು ತಾಲೂಕಿನ ಅನೇಕ ಸಾಹಿತ್ಯಾಸಕ್ತರ ಅಭಿಪ್ರಾಯವಾಗಿದೆ. ಕನ್ನಡ ನುಡಿ ತೇರನ್ನೆಳೆಯುವವರು ಯಾರು ಎಂಬ ಕುತೂಹಲವಂತೂ ಸಾಹಿತ್ಯ ಪ್ರೇಮಿಗಳಲ್ಲಿ ಕಾಣಬರುತ್ತಿದೆ.

ಅರಳಗುಂಡಗಿ ವಲಯದಲ್ಲಿ ಶರಣ ಸಾಹಿತಿ ಭೀಮರಾಯಗೌಡ, ಇಜೇರಿ ವಲಯದಲ್ಲಿ ಪ್ರೊ| ಪ್ರಭಾಕರ ಸಾಥಖೇಡ, ಯಡ್ರಾಮಿ ವಲಯದಲ್ಲಿ ಮಲ್ಲಿಕಾರ್ಜುನ ಕಡಕೋಳ ಹಾಗೂ ಎಸ್‌.ಕೆ. ಬಿರಾದಾರ, ಮಳ್ಳಿ ವಲಯದಲ್ಲಿ ಡಾ| ಪ್ರಧಾನೆಪ್ಪ ಕೊಕಟನೂರ, ಡಾ| ಶಾಂತಪ್ಪ ಡಂಬಳ, ಮಡಿವಾಳಪ್ಪ ನಾಗರಹಳ್ಳಿ, ಅಮೃತ ದೊಡಮನಿ ಹಾಗೂ ಕೆ.ಕೆ. ದೇಸಾಯಿ ಹೀಗೆ ಅನೇಕ ಸಾಹಿತಿಗಳ ಪಟ್ಟಿಯೇ ಸಿಗುತ್ತದೆ. ಮುಖ್ಯವಾಗಿ ನಾಟಕಕಾರ, ಸಾಹಿತಿ, ಹಿರಿಯ ಕಲಾವಿದ ಪ್ರೊ| ಪ್ರಭಾಕರ ಸಾಥಖೇಡ ಅವರು ಅವಿಭಜಿತ ಜೇವರಗಿ ತಾಲೂಕು ಸಮ್ಮೇಳನಗಳಲ್ಲಿನ ಸರ್ವಾಧ್ಯಕ್ಷತೆಗಾಗಿ ಮುಂಚೂಣಿಯಲ್ಲಿ ಚರ್ಚೆಗೊಳಪಟ್ಟು ಅಲ್ಲಿನ ಪರಿಷತ್ತಿನ ಏಕಮುಖ ನಿರ್ಧಾರದಿಂದ ವಂಚಿತರಾದರು. ಈಗ ಯಡ್ರಾಮಿ ತಾಲೂಕು ಆಗಿರುವುದರಿಂದ ಅವರನ್ನು ಇಲ್ಲಿ ನಡೆಯುವ ಸಮ್ಮೇಳನದಲ್ಲಿಯಾದರು ಆಯ್ಕೆ ಮಾಡಬೇಕು ಎಂಬುದು ಕೆಲವರ ಅಭಿಪ್ರಾಯ. ಪ್ರಗತಿಪರ ಚಿಂತಕ, ಸಾಹಿತಿ, ದಾವಣಗೆರೆ ರಂಗಾಯಣ ಸದಸ್ಯ, ಮಲ್ಲಿಕಾರ್ಜುನ ಕಡಕೋಳ ಆಗಬೇಕು ಎಂಬ ಕೂಗು ಕೆಲವರದ್ದಾಗಿದೆ. ಜತೆಗೆ ಶಿಕ್ಷಕ ಅಮೃತ ದೊಡಮನಿ ಆಗಲಿ ಎಂಬ ಅಭಿಪ್ರಾಯಗಳು ಸಹ ಇವೆ. ಏನೇ ಇರಲಿ ಹಿರಿತನ, ಸಾಹಿತ್ಯಕೃಷಿ ಹಾಗೂ ವಿವಿಧ ರಂಗಗಳಲ್ಲಿ ಅವರು ಸಲ್ಲಿಸಿದ ಅನುಪಮ ಸೇವೆ ಹಾಗೂ ಈ ನೆಲದ ಜನರೊಂದಿಗಿನ ಒಡನಾಟ ಪರಿಗಣಿಸಿ ಎಲ್ಲರ ಒಮ್ಮತದ ಮೇರೆಗೆ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬುದು ಈ ಭಾಗದ ಸಾಹಿತ್ಯಾಭಿಮಾನಿಗಳ ಒತ್ತಾಸೆಯಾಗಿದೆ.

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.