ಬಿಸಗೋಡ ಶಾಲೆಗೆ 75ರ ಸಂಭ್ರಮ

1994ರಲ್ಲಿ ಆರಂಭಗೊಂಡ ಶಾಲೆಸ್ಮಾರ್ಟ್‌ ಕೊಠಡಿ-ಪ್ರವೇಶ ದ್ವಾರ ನಿರ್ಮಾಣ

Team Udayavani, Dec 26, 2019, 5:33 PM IST

26-December-21

ನರಸಿಂಹ ಸಾತೊಡ್ಡಿ

ಯಲ್ಲಾಪುರ: ಗ್ರಾಮದ ಒಬ್ಬರ ಮನೆ ಜಗುಲಿಯಿಂದ 1944 ರಲ್ಲಿ ಆರಂಭವಾದ ಶಾಲೆ ನಂತರ ಸೋಗೆ ಜೋಪಡಿ ಮಣ್ಣಿನ ಗೋಡೆ ಹೊಂದಿ, ಕಾಲಕ್ರಮೇಣ ಕಟ್ಟಡ ಹೊಂದಿ ಈಗ ಅದೇ ಶಾಲೆ 75 ವಸಂತಗಳನ್ನು ಪೂರೈಸಿ ಹಳಬರನ್ನು ಸ್ಮರಿಸುವ ಹೊಸಬರಿಗೆ ಹೊಸತನ ಕೊಡುವತ್ತ ದಾಪುಗಾಲಿಟ್ಟ ಬಿಸಗೋಡಿನ ಸಹಿಪ್ರಾ ಶಾಲೆ ಅಮೃತಹೋತ್ಸವಕ್ಕೆ ಕಾಲಿಟ್ಟಿದೆ.

ಮನೆಯೊಂದರಲ್ಲಿದ್ದ ಶಾಲೆ ಸುತ್ತಲ ಗ್ರಾಮದವರಿಗೆ ಅನುಕೂಲವಾಗುವ ಬಿಸಗೋಡಿಗೆ ಸ್ಥಳಾಂತರಗೊಂಡಿತು. 1946 ರ ಸುಮಾರಿಗೆ ಮಣ್ಣಿನ ಗೋಡೆ ಹಾಕಿ, ಸೋಗೆ ಮುಚ್ಚಿಗೆಯೊಂದಿಗೆ ಶಾಲಾ ನಿರ್ಮಾಣವಾಯಿತು. ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಅಕ್ಷರದ ಬೀಜ ಬಿತ್ತುವ ಕಾರ್ಯಕ್ಕೆ ವೇಗ ಬಂದಿತು. ಹಲವು ವರ್ಷಗಳ ಕಾಲ ಹೀಗೇಯೇ ಶಾಲೆ ಮುಂದುವರಿಯಿತು. 10-15
ಮಕ್ಕಳು ಶಾಲೆಗೆ ಬರತೊಡಗಿದರು. ಊರವರ ಆಶ್ರಯದಲ್ಲಿ ಮಾಸ್ತರರು ಇದ್ದು ಶಾಲೆಗೆ ಬಂದು ಮಕ್ಕಳಿಗೆ ಕಲಿಸುತ್ತಿದ್ದರು.

ನಾಲ್ಕನೇ ತರಗತಿವರೆಗೆ ಶಿಕ್ಷಣದ ವ್ಯವಸ್ಥೆ ಇತ್ತು. ಕುಳಕುಂಡೆ ಮಾಸ್ತರರು, ನಂತರ ರಾಮಚಂದ್ರ ನಾರಾಯಣ ಭಟ್ಟ ಬೆತ್ತಗೇರಿ ಎಂಬ ಮಾಸ್ತರರು, ಕೊಟ್ಟೆ ಚಿದಂಬರ ಭಟ್ಟ, ಬಾರೆ ಮಾಸ್ತರರು ಹೀಗೆ ಶಿಕ್ಷಕರಾಗಿ ಶಾಲೆ ನಡೆಸುತ್ತಾ ಬಂದರು. 1946ರಲ್ಲಿ ಸ್ಕೂಲ್‌ ಬೋರ್ಡ್‌ ವ್ಯವಸ್ಥೆಗೆ ಶಾಲೆ ಸೇರಿ ಊರವರೆಲ್ಲ ಸೇರಿ ಕಟ್ಟಡ ಸಾಮಗ್ರಿ ಸಂಗ್ರಹಿಸಿ ಶಾಲೆಗೊಂದು ಗಟ್ಟಿಯಾದ ಕಟ್ಟಡವೊಂದು ದೊರಕುವಲ್ಲಿ ಶ್ರಮಿಸಿದರು.

ಜೂನ್‌ 1, 1946ರಲ್ಲಿ ಸರಕಾರದಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು. 1948 ರಿಂದ 1976ರ ವರೆಗೆ ಊರವರು ಶ್ರಮದಾನದ ಮೂಲಕ ಕಟ್ಟಿದ್ದ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತ ಬಂದಿತು. ಮಕ್ಕಳ ಸಂಖ್ಯೆ ಹೆಚ್ಚಾಗಿ ಕಟ್ಟಡ ಸಾಲುತ್ತಿರಲಿಲ್ಲ.

1962ರಲ್ಲಿ ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮ್ಯಾಂಗನೀಸ್‌ ಅದಿರು ತೆಗೆಯಲು ಬಿಸಗೋಡಿಗೆ ಪ್ರವೇಶಮಾಡಿತು. ಕಾರ್ಮಿಕರ ಮಕ್ಕಳೆಲ್ಲ ಇದೇ ಶಾಲೆಗೆ ಸೇರತೊಡಗಿದರು. 1977-78 ರಲ್ಲಿ ಆರು ಏಳನೇ ತರಗತಿ
ಆರಂಭಗೊಂಡಿದ್ದು ಈ ಭಾಗದ ಮಕ್ಕಳಿಗೆ ಅನುಕೂಲವಾಯಿತು. ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಕಂಪೆನಿಗೆ ಶಾಲೆಗೆ ಕೊಠಡಿ ಅವಶ್ಯಕತೆ ತೀವ್ರವಾಗಿ ಕಂಡು ಬಂದು ಮೂರು ಕೊಠಡಿಗಳನ್ನು ತಾನೇ ನಿರ್ಮಿಸಿಕೊಟ್ಟಿತು. ದಿನೇ ದಿನೇ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಕಾಯಕ ಈ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತ ಸಾಗಿತು.

ಈ ಹಿನ್ನೆಲೆಯಲ್ಲಿ ಎಂಎಂಎಲ್‌ ಸಂಸ್ಥೆ ಹಿರಿಯ ಅಧಿಕಾರಿಗಳಾಗಿದ್ದ ದಿ| ಎ.ಎಸ್‌. ಗಿರಿರಾವ್‌ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಗಳನ್ನು ಈ ಭಾಗದ ಜನ ಮರೆಯುವಂತಿಲ್ಲ. ಈವರೆಗೆ ಈ ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಉದ್ಯೋಗಗಳಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಸಾಗಿದ್ದಾರೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರನ್ನು, ಮಕ್ಕಳನ್ನು, ಶಾಲೆಗಾಗಿ ಹೆಗಲುಕೊಟ್ಟು ದುಡಿದವರನ್ನು ಸ್ಮರಿಸಲು ಅಮೃತಮಹೋತ್ಸವ ಹಮ್ಮಿಕೊಂಡಿದೆ.

ಅಮೃತ ಮಹೋತ್ಸವದಲ್ಲಿ ಹತ್ತಾರು ದಾನಿಗಳ ಕೊಡುಗೆ ಪಡೆದು ಸ್ಮಾರ್‌r ಕೊಠಡಿ, ಪ್ರವೇಶದ್ವಾರ, ಶಾಲೆಗೆ ಸುಣ್ಣಬಣ್ಣ ಅಲಂಕಾರ, ಆವರಣಗೋಡೆ, ಶೌಚಾಲಯ, ನೂತನ ಕಟ್ಟಡ, ಕಟ್ಟಡದ ಜೀಣೋದ್ಧಾರ ಹೀಗೆ ಒಂದಿಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಂಡಿದೆ.

ಡಿ.27 ಮತ್ತು 28ರಂದು ವಿವಿಧ ಕಾರ್ಯಕ್ರಮದ ಮೂಲಕ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಸುರೇಶಕುಮಾರ್‌,
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಶಾಸಕರು ವಿವಿಧ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಮಹೋತ್ಸವ ವಿಶೇಷ ಮೆರಗನ್ನು ಪಡೆದುಕೊಳ್ಳುತ್ತಿದೆ.

ಯಕ್ಷಗಾನ ಪ್ರದರ್ಶನ, ಕುಂಚ ನರ್ತನ, ಯಕ್ಷದೃಶ್ಯ ಮಕ್ಕಳ ಮನರಂಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಎರಡು ದಿನ ಹಬ್ಬವನ್ನು ಬಿಸಗೋಡ ಭಾಗದ ಜನತೆಗೆ ಈ ಅಮೃತ ಮಹೋತ್ಸವ ಉಣಬಡಿಸುತ್ತಿದೆ.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

Kumta: ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು: ಡಿ.ಕೆ.ಶಿವಕುಮಾರ್

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

Karnataka Politics: ಜೆಡಿಎಸ್ ಸರ್ವನಾಶ, ಒಡೆದು ಮನೆಯಂತಾದ ಬಿಜೆಪಿ : ಡಿ.ಕೆ ಶಿವಕುಮಾರ್

ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ವಾಪಸ್ಸಾಗುತ್ತಿರುವ ವಾಹನ ಸವಾರರು

Google Map: ಪೂರ್ಣಗೊಳ್ಳದ ಸೇತುವೆ… ಗೂಗಲ್ ಮ್ಯಾಪ್ ನಂಬಿ ಪರದಾಡಿದ ವಾಹನ ಸವಾರರು

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

Sirsi Marikamba: ಗದ್ದುಗೆಯಿಂದ ಎದ್ದು, ಜಾತ್ರಾ ಚಪ್ಪರ ಬಿಟ್ಟು ಹೊರ ನಡೆಯುತ್ತಿರುವ ದೇವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.