ಬ್ಲ್ಯಾಕ್‌ & ಬ್ಯೂಟಿಫ‌ುಲ್‌

ಬಬಲ್‌- ಈ ಸಲ ಕಪ್ಪು ನಿಮ್ದೇ!

Team Udayavani, Nov 4, 2020, 9:00 AM IST

4

ನಮ್ಮಲ್ಲಿ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ.

ಹಿಂದೆಲ್ಲ ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ – ಮುಂಜಿ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ದಿರಿಸಿನ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ ಕಾರಣವಾಗಿದೆ.

ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು
ಕಪ್ಪು ಬಣ್ಣದ ಲಂಗ – ರವಿಕೆ – ದುಪಟ್ಟಾ, ಉದ್ದ ಲಂಗ, ಲಂಗ ದಾವಣಿ, ಸೀರೆ, ಘಾಗ್ರಾ ಚೋಲಿ, ಗೌನ್‌ಗಳು, ಅನಾರ್ಕಲಿ, ಚೂಡಿದಾರ, ಹೀಗೆ ಬಗೆಬಗೆಯ ಉಡುಪಿನಲ್ಲಿ ಹಿಂದಿ ಚಿತ್ರ ನಟಿಯರಾದ ಶ್ರದ್ಧಾ ಕಪೂರ್‌, ಡಯಾನಾ ಪೆಂಟಿ, ಕಿಯಾರ ಅಡ್ವಾಣಿ, ಕೃತಿ ಸನೋನ್‌, ಆಲಿಯಾ ಭಟ್‌, ಸಾರ ಅಲಿ ಖಾನ್‌, ಕರೀನಾ ಕಪೂರ್‌, ಕತ್ರಿನಾ ಕೈಫ್, ಕಾಜೋಲ…, ವಿಶ್ವ ಸುಂದರಿ ಮಾನುಷಿ ಶಿಲ್ಲರ್‌ ಸೇರಿದಂತೆ ಅನೇಕ ನಟಿಯರು, ಗಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿರುವುದನ್ನು ಅನೇಕರು ನೋಡಿರಬಹುದು.

ಅದ್ಧೂರಿ ಕಾರ್ಯಕ್ರಮಗಳಿಗೆ ಬೆಸ್ಟು
ರೆಡ್‌ ಕಾರ್ಪೆಟ್‌ ಇವೆಂಟ್‌, ಅವಾರ್ಡ್‌ ಫ‌ಂಕ್ಷನ್‌, ಪಾರ್ಟಿ, ಸಿನಿಮಾ ಪ್ರಮೋಷನ್‌, ಫ್ಯಾಷನ್‌ ಶೋ, ರಾಂಪ್‌ ವಾಕ್‌, ಹೀಗೆ ಎಲ್ಲೆಲ್ಲೂ ಬ್ಲಾಕ್‌ ಬ್ಯೂಟಿಗಳು ರಾರಾಜಿಸುತ್ತಿದ್ದಾರೆ. ತೊಟ್ಟ ಉಡುಗೆಯೇ ಇಷ್ಟು ಗ್ರಾಂಡ್‌ ಆಗಿದ್ದ ಮೇಲೆ ಪ್ರತ್ಯೇಕವಾಗಿ ಜಗಮಗಿಸುವ ಆಭರಣಗಳು, ಆಕ್ಸೆಸರೀಸ್‌ ಮತ್ತು ಬ್ರೈಟ್‌ ಮೇಕಪ್‌ ಮಾಡಬೇಕಾಗಿಲ್ಲ. ಸರಳವಾದ ಕೇಶ ವಿನ್ಯಾಸ, ಕಡಿಮೆ ಆಕ್ಸೆಸರೀಸ್‌, ಲೈಟ್‌ ಮೇಕಪ್‌ ಮತ್ತು ಸಿಂಪಲ್‌ ಆಭರಣಗಳನ್ನು ತೊಟ್ಟರೆ ಸಾಕು.

ಇವುಗಳಲ್ಲಿ ಸ್ಲಿವ್‌ಲೆಸ್‌ (ತೋಳುಗಳು ಇಲ್ಲದ), ಕ್ರಾಪ್‌ ಟಾಪ್‌ (ಹೊಟ್ಟೆ ಕಾಣುವಂತಹ), ಅಥವಾ ಬ್ಯಾಕ್‌ಲೆಸ್‌ (ಬೆನ್ನು ಕಾಣುವಂತಹ) ರವಿಕೆಗಳ ಆಯ್ಕೆಗಳೂ ಇವೆ. ಲಂಗಗಳಲ್ಲಿ ಸೈಡ್‌ ಸ್ಲಿಟ…, ಸೆಮಿ ಟ್ರಾನ್ಸ್‌ಪರೆಂಟ್‌ (ತುಸು ಪಾರದರ್ಶಕವಾಗಿರುವ), ಫಿಶ್‌ ಕಟ್‌ (ಮೀನಿನ ಮೈ ಆಕಾರದ), ಡಬಲ್‌ ಲೇಯರ್ಡ್‌ (ಒಂದರ ಮೇಲೊಂದು ಲಂಗದಂತೆ ಕಾಣುವ), ಹೀಗೆ ವೈವಿಧ್ಯಮಯ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಕಪ್ಪೆಂದರೆ ಪೂರ್ತಿ ಕಪ್ಪಲ್ಲ
ಕಪ್ಪು ಎಂದಾಕ್ಷಣ, ಈ ಬ್ಲಾಕ್‌ ಬ್ಯೂಟಿಗಳು ತಲೆಯಿಂದ ಕಾಲವರೆಗೆ ಬರೀ ಕಪ್ಪು ಬಣ್ಣದ ಒನ್‌ ಪೀಸ್‌ ಅಥವಾ ಟೂ ಪೀಸ್‌ ಡ್ರೆಸ್‌ ತೊಟ್ಟಿರುತ್ತಾರೆ ಎಂದು ಯೋಚಿಸಬೇಡಿ. ಸಂಪೂರ್ಣವಾಗಿ ಕಪ್ಪು ಬಣ್ಣದ ಬಟ್ಟೆಯಿಂದ ಉಡುಗೆ ಹೊಲಿದಿದ್ದರೂ ಅದರಲ್ಲಿ ಸ್ವರ್ಣದ ಬಣ್ಣದ ಕಸೂತಿ, ಮುತ್ತು-ರತ್ನ-ಗಾಜು-ಕನ್ನಡಿ ಅಥವಾ ಇನ್ನಿತರ ಹೊಳೆಯುವಂಥ ವಸ್ತುಗಳು, ಬಣ್ಣಗಳ ಚಿತ್ತಾರ, ಪಟ್ಟಿ ಅಥವಾ ಚಿಕ್ಕ-ಪುಟ್ಟ ಚಿಹ್ನೆಗಳು, ಮುಂತಾದವುಗಳನ್ನು ಮೂಡಿಸಿರುವ ಉಡುಗೆಯಾಗಿರುತ್ತದೆ.

-ಅದಿತಿಮಾನಸ. ಟಿ. ಎಸ್‌.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.