ಉಸಿರಾಟದ ಮೇಲೂ ಗಮನವಿರಲಿ…ಬೆಳಗ್ಗೆದ್ದು ಓಡುವ ಮುನ್ನ ತಿಳಿದುಕೊಳ್ಳಿ
ಬೆಳಗ್ಗೆದ್ದು ಓಡುವವರು ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ.
Team Udayavani, Dec 8, 2020, 10:42 AM IST
Representative Image
ಬೆಳಗ್ಗೆದ್ದು ಜಾಗಿಂಗ್, ರನ್ನಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸರಿಯಾದ ಕ್ರಮದಲ್ಲಿ ಇದನ್ನು ಮಾಡದೆ ಇದ್ದರೆ ಅದು ಆರೋಗ್ಯಕರವಲ್ಲ. ಮುಖ್ಯವಾಗಿ ದೇಹದ ತೂಕ ಇಳಿಸಿ, ಸದೃಢವಾಗಿರಲು ಬಯಸುವವರು ಬೆಳಗ್ಗೆದ್ದು ರನ್ನಿಂಗ್ ಮಾಡುತ್ತೀರಾದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರುವುದು ಅತೀ ಮುಖ್ಯ.
ಶೂಗಳು
ಓಟಕ್ಕೆ ಹೊಸಬರಾಗಿದ್ದರೆ ಗಾಯಗಳಾಗದಂತೆ ಶೂ ಧರಿಸುವುದು ಅತ್ಯಗತ್ಯ. ಹೀಗಾಗಿ ಉತ್ತಮ ಗುಣಮಟ್ಟದ ಮತ್ತು ನಿಮ್ಮ ಕಾಲಿಗೆ ಸೂಕ್ತವಾದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.
ವೇಗದ ಓಟ
ಆರಂಭದಲ್ಲೇ ವೇಗವಾಗಿ ಓಡುವುದರಿಂದ ಅಂತಿಮ ಸಮಯದಲ್ಲಿ ಸುಸ್ತು ಆವರಿಸುತ್ತದೆ. ಹೀಗಾಗಿ ಪ್ರಾರಂಭದಲ್ಲಿ ನಿಧಾನವಾಗಿ ಸಮಯ ಕಳೆದಂತೆ ವೇಗವನ್ನು
ಹೆಚ್ಚಿಸಿಕೊಂಡು ಓಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ದೊರೆಯುವುದು. ವೇಗವಾಗಿ ಓಡುವಾಗ ಪಾದ ಸರಿಯಾಗಿ ನೆಲ ಮುಟ್ಟುವಂತೆ ಓಡಬೇಕು. ಕೇವಲ ಮುಮ್ಮಡಿಯನ್ನು ನೆಲಕ್ಕೆ ತಾಗಿಸಿ ಓಡಿದರೆ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬಟ್ಟೆಗಳು
ಓಡುವಾಗ ಆರಾಮದಾಯಕ ಬಟ್ಟೆಗಳನ್ನು ಧರಿಸಬೇಕು. ಹೆಚ್ಚು ದಪ್ಪದ ಬಟ್ಟೆಗಳು ಓಡುವಾಗ ಸೆಖೆಯ ಅನುಭವ ಕೊಡುತ್ತವೆ. ಜತೆಗೆ ಹೆಚ್ಚು ತೆಳ್ಳಗಿನ ಬಟ್ಟೆಗಳು ಚಳಿಯಿಂದ ಮೈ ಕೊರೆಯುವಂತೆ ಮಾಡುತ್ತವೆ. ಹೀಗಾಗಿ ದೇಹದ ತಾಪಮಾನ ಕಾಪಾಡುವ ಬಟ್ಟೆಗಳ ಆಯ್ಕೆ ಉತ್ತಮ.
ಭಂಗಿ
ಓಡುವಾಗ ದೇಹದ ಭಂಗಿಯತ್ತಲ ಗಮನಹರಿಸಬೇಕು. ಮುಖ್ಯವಾಗಿ ತೋಳುಗಳು ಹಿಂದೆ, ಮುಂದೆ ಸುಲಭವಾಗಿ ಸ್ವಿಂಗ್ ಆಗಬೇಕು. ಈ ಬಗ್ಗೆ ತಜ್ಞರಿಂದ ಕೇಳಿ ತಿಳಿಯುವುದು ಉತ್ತಮ.
ಉಸಿರಾಟ
ಓಡುವಾಗ ಉಸಿರಾಟದ ಮೇಲೂ ಗಮನವಿರಲಿ. ಬಾಯಿ ಮತ್ತು ಮೂಗಿನ ಮೂಲಕ ಉಸಿರಾಟ ನಡೆಸುತ್ತಿರಬೇಕು. ಹೀಗೆ ಮಾಡಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತದೆ. ಇದರಿಂದ ಬೇಗನೆ ಸುಸ್ತಾಗುವುದಿಲ್ಲ.
ನೀರು ಸೇವನೆ
ಬೆಳಗ್ಗೆದ್ದು ಓಡುವವರು ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇಲ್ಲವಾದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ