ಮಳೆಗಾಲದ ಕೇಶವಿನ್ಯಾಸ
Team Udayavani, Jul 24, 2019, 12:57 PM IST
ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಸ್ವಲ್ಪ ತ್ರಾಸದಾಯಕ. ಒದ್ದೆ ಕೂದಲು ಬೇಗ ಒಣಗದೆ, ಯಾವ ಹೇರ್ಸ್ಟೈಲ್ ಮಾಡುವುದಪ್ಪಾ ಅಂತ ಹುಡುಗಿಯರು ತಲೆಕೆಡಿಸಿಕೊಳ್ಳುವ ಕಾಲವಿದು. ಹಾಗಾಗಿಯೇ, ಮಳೆಗಾಲದ ಕೇಶವಿನ್ಯಾಸದ ಮಾಹಿತಿ ನಿಮಗಾಗಿ.
ಕ್ರೌನ್ ಬ್ರೈಡೆಡ್ ಬನ್
ಮೊದಲಿಗೆ ಕೂದಲನ್ನು ಬಾಚಿ, ಹೈಪೋನಿ ಕಟ್ಟಿಕೊಳ್ಳಬೇಕು. ಅದಾದ ಮೇಲೆ ಕೂದಲನ್ನು ಮೂರು ಸಮ ಭಾಗಗಾಗಿ ವಿಂಗಡಿಸಿ, ಜಡೆ ಹೆಣೆದುಕೊಳ್ಳಿ. ಆ ಜಡೆಯನ್ನು ಹಣೆಗೆ ಒಂದು ಸುತ್ತು ಸುತ್ತಿ, ಹೈಪೋನಿ ಕಟ್ಟಿಕೊಂಡಲ್ಲಿ ಹೇರ್ಪಿನ್ ಸಹಾಯದಿಂದ ಪಿನ್ ಮಾಡಿ. ಈ ವಿನ್ಯಾಸ, ಉದ್ದ ಕೂದಲಿಗೆ ಹೆಚ್ಚು ಸೂಕ್ತ.
ಬ್ಯಾಲೆರಿನಾ ಬನ್
ಕೂದಲನ್ನು ಚೆನ್ನಾಗಿ ಬಾಚಿ, ಪೂರ್ತಿ ಕೂದಲನ್ನು ಒಟ್ಟುಗೂಡಿಸಿ ಮೂರು ಅಥವಾ ನಾಲ್ಕು ಸುತ್ತು ಸುತ್ತಿಕೊಂಡು, ಕುತ್ತಿಗೆಯ ಸ್ವಲ್ಪವೇ ಮೇಲೆ, ಎರಡೂ ಕಿವಿಗಳ ಮಧ್ಯದಲ್ಲಿ ಸಮನಾಗಿ ಕ್ಲಿಪ್ಗ್ಳ ಸಹಾಯದಿಂದ ಬನ್ ಶೇಪ್ನಲ್ಲಿ ಟಕ್ ಮಾಡುವ ಈ ಸ್ಟೈಲ್ ಮಳೆಗಾಲಕ್ಕೆ ಸೂಕ್ತ.
ಸೈಡ್ ಫ್ರೆಂಚ್ ಪ್ಲೀಟೆಡ್ ಬನ್
ಕೂದಲನ್ನು ಸೈಡ್ನಲ್ಲಿ ಭಾಗ ಮಾಡಿಕೊಂಡು, ಹೆಚ್ಚು ಕೂದಲಿರುವ ಭಾಗದಲ್ಲಿ ಮತ್ತೆ ಮೂರು ಭಾಗ ಮಾಡಿ, ಫ್ರೆಂಚ್ ಪ್ಲೇಟ್ ಹಾಕಿ ರಬ್ಬರ್ ಬ್ಯಾಂಡ್ನಿಂದ ಕಟ್ಟಿ. ಉಳಿದ ಕೂದಲನ್ನು ಅದೇ ಸೈಡ್ ಬಾಚಿಕೊಂಡು ಬನ್ ಹಾಕಿಕೊಳ್ಳಿ.
ಡಬಲ್ ಪ್ಲೀಟೆಡ್ ಬನ್
ಕೂದಲನ್ನು ಚೆನ್ನಾಗಿ ಬಾಚಿಕೊಂಡು, ತಲೆಯ ಕೆಳಭಾಗದಿಂದ ಸರಿಯಾಗಿ ಎರಡು ಭಾಗ ಮಾಡಿಕೊಂಡು, ಎರಡು ಜಡೆ ಹಾಕಿಕೊಳ್ಳಿ. ಈ ಜಡೆಗಳಿಂದ ತಲೆಯ ನಡುಭಾಗದಲ್ಲಿ ಬಿಗಿಯಾಗಿ ಗಂಟು ಹಾಕಿಕೊಳ್ಳಿ. ಈ ಗಂಟು ಗಟ್ಟಿಯಾಗಿರಲು ಹೇರ್ಪಿನ್ ಅನ್ನು ಹಾಕಿ. ಉಳಿದ ಕೂದಲನ್ನು ಗಂಟು ಹಾಕಿಕೊಂಡ ಕೂದಲಿಗೆ ಕ್ಲಾಕ್ವೆçಸ್ ಆಗಿ ಜೋಡಿಸಿಕೊಳ್ಳಬೇಕು. ಎಲ್ಲ ಕೂದಲನ್ನು ಜೋಡಿಸಿಕೊಂಡ ನಂತರ ಹೇರ್ಪಿನ್ನಿಂದ ಭದ್ರಗೊಳಿಸಿ.
ಪ್ರಟ್ಜೆಲ್ ಬನ್
ಕೂದಲನ್ನು ಬಾಚಿಕೊಂಡು, ಎರಡರಿಂದ ಮೂರು ಸುತ್ತು ಸುತ್ತಿ, ಕಿವಿಯ ಹತ್ತಿರ ಒಂದು ಬದಿಯಲ್ಲಿ ಲೂಸ್/ಮೆಸ್ಸಿಯಾಗಿ ಬನ್ ಹಾಕಿಕೊಳ್ಳಬೇಕು. ಹಣೆಯಿಂದ/ಕೆನ್ನೆಯ ಬದಿಯಿಂದ ಒಂದೊಂದು ಕೂದಲನ್ನು ಕರ್ಲ್ ಮಾಡಿಕೊಂಡು ಟೈ ಮಾಡದೆ ಹಾಗೇ ಬಿಡಬೇಕು.
ಟ್ರೈ ಟ್ವಿಟ್ಟೆಡ್ ಪೋನಿ ಬನ್
ಕೂದಲನ್ನು ಮೂರು ಪಾಲು ಮಾಡಿ. ಮೂರು ಪಾಲನ್ನೂ ಟ್ವಿಸ್ಟ್ ಮಾಡಿ ಹೇರ್ಪಿನ್ ಸಹಾಯದಿಂದ ಮೂರು ಸ್ಟೆಪ್ ಜಡೆ ಹೆಣೆದು, ಪೋನಿಟೇಲ್ ಹಾಕಿಕೊಳ್ಳಬೇಕು. ನಂತರ ಅದೇ ಪೋನಿಯನ್ನು ಬನ್ ಮಾಡಿಕೊಳ್ಳಬೇಕು.
– ಮೇಘನಾ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ