ಯಾರೇ ನೀ, ಟಿಯಾರಾ?: ಕಿರೀಟ ತೊಟ್ಟ ಕಿನ್ನರಿಯ ವೈಯ್ನಾರ


Team Udayavani, Nov 8, 2020, 11:22 AM IST

23-AVALU-6.jpg

ನೋಡಿದ ತಕ್ಷಣ ಕಿರೀಟದಂತೆ ಕಾಣುವ ಟಿಯಾರ, ಇತ್ತೀಚಿನ ಟ್ರೆಂಡಿ ಫ್ಯಾಶನ್‌. ಹೇರ್‌ಬ್ಯಾಂಡ್‌ನ‌ಂತೆ ಇರುವ ಈ ಟಿಯಾರಗಳನ್ನು ಧರಿಸಿ ನೀವು ರಾಜಕುಮಾರಿಯಂತೆ ಕಂಗೊಳಿಸಬಹುದು. ಹಣೆ ಮತ್ತು ಕಣ್ಣಿನ ಮೇಲೆ ಆಗಾಗ್ಗೆ ಕೂದಲು ಬೀಳುವುದನ್ನೂ ತಡೆಯಬಹುದು… 

ಮಳೆಗಾಲದಲ್ಲಿ ಹೇರ್‌ ಸ್ಟ್ರೇಟ್ನಿಂಗ್‌ ಮಾಡಿಸಿದರೆ, ತಲೆಕೂದಲು ಒದ್ದೆ ಆಗದಂತೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ಕೂದಲು ಒ¨ªೆ ಆಗಿಬಿಟ್ಟರೆ ಮತ್ತೆ ತನ್ನ ಮೂಲ ಸ್ವರೂಪಕ್ಕೆ ಮರಳುತ್ತದೆ, ಸ್ಟ್ರೇಟ್ನಿಂಗ್‌ ಮಾಡಿಸಿದ್ದು ವ್ಯರ್ಥವಾಗುತ್ತದೆ. ಹೇರ್‌ಸ್ಟೈಲ್‌ ಹೆಸರಿನಲ್ಲಿ ಸ್ಟ್ರೇಟ್ನಿಂಗ್‌ ಮಾಡಿಸುವ ಬದಲು ಭಿನ್ನ ಭಿನ್ನವಾದ ಹೇರ್‌ ಆಕ್ಸೆಸರೀಸ್‌ಗಳನ್ನು ಬಳಸುವುದು ಉತ್ತಮ ಉಪಾಯ.

ಕ್ಲಿಪ್‌, ಬ್ಯಾಂಡ್‌, ರಿಬ್ಬನ್‌ ಅಷ್ಟೇ ಅಲ್ಲ!
ಹೇರ್‌ ಆಕ್ಸೆಸರೀಸ್‌ ಅಂದಾಗ ಕಣ್ಮುಂದೆ ಬರುವುದು ಹೇರ್‌ ಕ್ಲಿಪ್‌, ಹೇರ್‌ ಬ್ಯಾಂಡ್‌ ಅಥವಾ ರಿಬ್ಬನ್‌ಗಳು. ಆದರೆ, ಫ್ಯಾಶನ್‌ ಜಗತ್ತು ಇವೆಲ್ಲವನ್ನೂ ದಾಟಿ ಮುಂದಕ್ಕೆ ಹೋಗಿದೆ. ಟಿಯಾರ, ಡಯಡೆಮ… ಮತ್ತು ಕ್ರೌನ್‌ (ಕಿರೀಟ) ನಂಥ ಆಯ್ಕೆಗಳಿಂದ ತುರುಬು ವಿನ್ಯಾಸ (ಬನ್‌ ಹೇರ್‌ಸ್ಟೈಲ್‌) ಮತ್ತಷ್ಟು ಮೆರುಗು ಪಡೆದಿದೆ. ಇವು ಕೇವಲ ತುರುಬಿಗೆ ಸೀಮಿತವಾಗದೆ, ಜಡೆ, ಜುಟ್ಟು ಅಥವಾ ಗಾಳಿಗೆ ಬಿಟ್ಟ ಉದ್ದ ಕೂದಲಿನ ವಿನ್ಯಾಸಕ್ಕೂ ಬಳಸಬಹುದು. ಅಷ್ಟೇ ಅಲ್ಲ! ಹೆಡ್‌ ಸ್ಕಾಫ್ì ಮೇಲೂ ಬಳಸಬಹುದು.

ಕಿರೀಟವಲ್ಲ, ಇದು ಟಿಯಾರ
ಕಿರೀಟವನ್ನು ಹೋಲುವ ಟಿಯಾರಗಳು ಚಿಕ್ಕದಾಗಿ, ಚೊಕ್ಕವಾಗಿರುತ್ತವೆ. ಪ್ರಾಚೀನ ಗ್ರೀಕ್‌ ಮತ್ತು ರೋಮನ್ನರು ತೊಡುತ್ತಿದ್ದ ಈ ಟಿಯಾರ ನಂತರ ರಷ್ಯನ್ನರ ಕೋಕುಶನಿಕ…ಗೂ ಪ್ರೇರಣೆಯಾಯಿತು. ಮುತ್ತು, ರತ್ನ, ಹಕ್ಕಿ ಪುಕ್ಕ, ಹೂವು… ಮುತ್ತಿನ ಮಣಿಗಳು, ಅಮೂಲ್ಯ ರತ್ನಗಳನ್ನು ಹೋಲುವ ಕಲ್ಲುಗಳು, ಚಿನ್ನ- ಬೆಳ್ಳಿಯಂತೆ ಮಿನುಗುವ ವಸ್ತುಗಳು, ಪುಕ್ಕಗಳು, ಗರಿಗಳು, ದಾರ, ಹೂವು ಅಥವಾ ಹೂವನ್ನು ಹೋಲುವ ಆಕೃತಿಗಳಿಂದ ಪೋಣಿಸಿದ ಟಿಯಾರಗಳು ಮಾರ್ಕೆಟ್‌ನಲ್ಲಿ ಲಭ್ಯ. ಮಾಲೆಯಂತೆ ಅಥವಾ ಹೇರ್‌ ಬ್ಯಾಂಡ್‌ನ‌ಂತೆ ಇರುವ ಈ ಟಿಯಾರಗಳನ್ನು ಕಿರೀಟದಂತೆ ತೊಡಲಾಗುತ್ತದೆ.

ಸೋಮಾರಿಗಳಿಗೆ ಟಿಯಾರ ವರ
ಇದನ್ನು ತಲೆಯ ಮೇಲ್ಭಾಗದಲ್ಲೇ ಧರಿಸಬೇಕೆಂದೇನಿಲ್ಲ. ಕಿವಿಯ ಹಿಂಬದಿ ಟಿಯಾರಾದ ಮುದ್ರೆ ಕಾಣುವಂತೆ ಅಥವಾ ಜುಟ್ಟಿನ ಮೇಲೆ, ಜುಟ್ಟಿನ ಕೆಳಗೆ, ಎಲ್ಲೂ ಕಟ್ಟಿಕೊಳ್ಳಬಹುದು. ಟಿಯಾರ ಧರಿಸಿದರೆ ಮಾಮೂಲಿ ಜಡೆ, ಜುಟ್ಟು, ತುರುಬಿಗೂ ಹೊಸ ಮೆರುಗು ಸಿಗುತ್ತದೆ. ತಲೆ ಬಾಚಿಕೊಳ್ಳಲು ಸಮಯವೇ ಇಲ್ಲದಿದ್ದರೆ ಅಥವಾ ಮನಸ್ಸಿಲ್ಲದಿದ್ದರೆ ಟಿಯಾರ ಧರಿಸಿ ತಲೆ ಕೂದಲಿನ ಅಂದ ಹೆಚ್ಚಿಸಬಹುದು.

ಸರಳ, ಸುಂದರ…
ತಲೆಗೆ ಟಿಯಾರಗಳನ್ನು ತೊಡುವುದರಿಂದ ಹಣೆ ಮತ್ತು ಕಣ್ಣ ಮೇಲೆ ಆಗಾಗ್ಗೆ ಕೂದಲು ಬೀಳುವುದನ್ನು ತಡೆಯಬಹುದು. ಕೇಶ ವಿನ್ಯಾಸ ಸರಳವಾಗಿದ್ದರೂ, ಎಲ್ಲರ ಗಮನ ಸೆಳೆಯಬಲ್ಲ ಟಿಯಾರ ನೀವು ಉಟ್ಟ ಉಡುಪಿನ ಸೊಬಗನ್ನೂ ಹೆಚ್ಚಿಸುತ್ತದೆ. ಎಲ್ಲಕ್ಕಿಂತ ದೊಡ್ಡ ಲಾಭ ಏನೆಂದರೆ, ಟಿಯಾರು ಧರಿಸಿದಾಗ ಟ್ರೆಂಡಿ ಮತ್ತು ಸ್ಟೈಲಿಶ್‌ ಆಗಿ ಕಾಣಿಸುತ್ತೀರಿ.

ನಟಿಯರ ಫೇವರಿಟ್‌
ಥೀಮ… ಪಾರ್ಟಿ, ಫ್ಯಾನ್ಸಿ ಡ್ರೆಸ್‌ ಅಥವಾ ಫ್ಯಾಷನ್‌ ಶೋನಲ್ಲಿ ಈ ರೀತಿ ಟಿಯಾರಗಳನ್ನು ತೊಟ್ಟು ಶೋಸ್‌ ಟಾಪರ್‌ನಂತೆ ಮಿಂಚಬಹುದು. ಈಗ ಮುತ್ತು ರತ್ನಗಳಿಂದ ಹೆಣೆದ ಟಿಯಾರಗಳಿಗೆ ಬಹಳ ಬೇಡಿಕೆ ಇದೆ. ಹ್ಯಾಟ್‌ ತಯಾರಕರು ಮತ್ತು ವಿನ್ಯಾಸಕರಾದ ಮೆಸೋನ್‌ ಮಿಶೆಲ… ಅವರ ಸ್ಕಾಫ್ì ಟಿಯಾರಗಳೂ ಪ್ರಸಿದ್ಧಿ ಪಡೆದಿವೆ. ಇವುಗಳನ್ನು ಹಾಲಿವುಡ್‌, ಬಾಲಿವುಡ್‌ ನಟಿಯರು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ಸಿನಿಮಾದ ಪ್ರಮೋಷನ್‌ಗಳಲ್ಲಿ ತೊಡುವ ಮೂಲಕ ಅಭಿಮಾನಿಗಳಲ್ಲಿ ಟಿಯಾರ ಹುಚ್ಚು ಹೆಚ್ಚಿಸಿ¨ªಾರೆ. ನೀವು ಕೂಡ ಟಿಯಾರ ತೊಟ್ಟು ರಾಜಕುಮಾರಿಯಂತೆ ಮೆರೆಯಿರಿ.

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.