ನವಜಾತ ಶಿಶುವಿಗೆ ಆ್ಯಂಟಿಬಯಾಟಿಕ್‌ ನೀಡುವುದು ಎಷ್ಟು ಸುರಕ್ಷಿತ ?

ಔಷಧ ತೆಗೆದುಕೊಳ್ಳಬೇಕು ಮತ್ತು ಸರಿಯಾದ ಸಮಯಕ್ಕೆ ಮಕ್ಕಳಿಗೆ ಔಷಧ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

Team Udayavani, Jul 8, 2021, 11:50 AM IST

ನವಜಾತ ಶಿಶುವಿಗೆ ಆ್ಯಂಟಿಬಯಾಟಿಕ್‌ ನೀಡುವುದು ಎಷ್ಟು ಸುರಕ್ಷಿತ ?

ಚಿಕ್ಕ ಮಕ್ಕಳ ಪಾಲನೆ, ಪೋಷಣೆ ಮಾಡುವುದು ಎಂದರೆ ಸುಲಭದ ಮಾತಲ್ಲ. ಅದರಲ್ಲಿಯೂ ನವ ಜಾತ ಶಿಶುಗಳ ಪಾಲನೆ ತುಂಬಾ ಸೂಕ್ಷ್ಮವಾದದ್ದು. ಎಷ್ಟು ಜಾಗ್ರತೆ ವಹಿಸಿದರೂ ಮಕ್ಕಳ ಆರೋಗ್ಯ ರಕ್ಷಣೆ ತ್ರಾಸದಾಯಕವೇ ಸರಿ. ಇಂತಹ ಸಮಸ್ಯೆಗಳನ್ನು ದೂರ ಮಾಡಲು ಇತ್ತೀಚೆಗೆ ಕಂದಮ್ಮಗಳಿಗೆ ಆ್ಯಂಟಿಬಯಾಟಿಕ್‌ ನೀಡುವುದು ಹೆತ್ತವರಿಗೆ ರೂಢಿಯಾಗುತ್ತಿದೆ. ಮಗುವಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಿದರೂ ಹೆತ್ತವರು ಆ್ಯಂಟಿಬಯಾಟಿಕ್‌ಗೆ ಶರಣಾಗುತ್ತಿದ್ದಾರೆ. ಆದರೆ ನವಜಾತ ಶಿಶು (ಹುಟ್ಟಿದ 15 ದಿನಗಳ ಒಳಗೆ)ಗಳಿಗೆ ಇಂತಹ ಆ್ಯಂಟಿಬಯಾಟಿಕ್ಸ್‌ ನೀಡುವುದರಿಂದ ಅವುಗಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗೆಗಿನ ಅರಿವಿನ ಕೊರತೆ ಹೆತ್ತವರನ್ನು ಕಾಡುತ್ತಿದೆ. ಇದೀಗ ಇಸ್ರೇಲಿನ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ ಜನಿಸಿದ 15 ದಿನಗಳ ಒಳಗಾಗಿ ಮಗುವಿಗೆ ಯಾವುದೇ ಆ್ಯಂಟಿಬಯಾಟಿಕ್‌ ನೀಡಿದಲ್ಲಿ ಅದರ ಬೆಳವಣಿಗೆ 6 ವರ್ಷಗಳ ವರೆಗೆ ನಿಧಾನವಾಗಬಹುದು ಎಂಬುದು ಸಾಬೀತಾಗಿದೆ.

ಯಾವ ರೀತಿಯ ಪರಿಣಾಮ?
ನವಜಾತ ಶಿಶುಗಳಿಗೆ ಆ್ಯಂಟಿ ಬಯಾಟಿಕ್‌ ನೀಡುವುದರಿಂದ ಶಿಶುಗಳ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಲಭಿಸಬಹು ದಾಗಿದೆಯಾದರೂ ಇದು ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ತೂಕ ಮತ್ತು ಎತ್ತರದಲ್ಲಿ ಇನ್ನಿತರ ಮಕ್ಕಳಿಗೆ ಹೋಲಿಸಿದರೆ ಕಡಿಮೆ ಇರಬಹುದು. ಈ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಯಾವುದೇ ತೆರನಾದ ಸೋಂಕು ತಗಲುವ ಸಾಧ್ಯತೆ ಅಧಿಕವಾಗಿರುತ್ತದೆ.

ಜನನವಾದ ಆರಂಭಿಕ ವಾರದಲ್ಲಿ ಬ್ಯಾಕ್ಟೀರಿಯಾ ಗಳಿಂದ ರಕ್ಷಿಸಲು ಈ ಆ್ಯಂಟಿಬಯಾಟಿಕ್ಸ್‌ ನೀಡಲಾಗುತ್ತದೆ. ಇದು ದೇಹಕ್ಕೆ ಅನುಕೂಲವಾಗುವ ಬ್ಯಾಕ್ಟೀರಿಯಾಗಳ ಮೇಲೂ ಪರಿಣಾಮ ಬೀರುತ್ತವೆ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳ ಮೇಲೆ ಹೆಚ್ಚು ಹೆಚ್ಚು ಆ್ಯಂಟಿಬಯಾಟಿಕ್‌ಗಳನ್ನು ಬಳಸುವುದರಿಂದ ಅಂತಹ ಬ್ಯಾಕ್ಟೀರಿಯಾಗಳು ವಿಶೇಷ ರೀತಿಯ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಹೀಗಾದಾಗ ಔಷಧ ಅವುಗಳ ಮೇಲೆ ನಿಷ್ಪರಿಣಾಮಕಾರಿಯಾಗುತ್ತದೆ. ಇದನ್ನು ಆ್ಯಂಟಿಮೈಕ್ರೊಬಿಯಲ್‌ ರೆಸಿಸ್ಟೆನ್ಸ್‌ (ಎಎಂಆರ್‌) ಎಂದು ಕರೆಯಲಾಗುತ್ತದೆ. ಈ ಔಷಧದ ವಿರುದ್ಧ ಬ್ಯಾಕ್ಟೀರಿಯಾಗಳು ತಮ್ಮದೇ ಆದ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿ ಪಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದ್ದು ಅತಂಕಕ್ಕೆ ಕಾರಣವಾಗಿವೆ.

ಆ್ಯಂಟಿಬಯಾಟಿಕ್‌ ಬಳಕೆಯ ತಡೆಗಟ್ಟುವಿಕೆ ಹೇಗೆ?
– ಸಣ್ಣ ಮಕ್ಕಳಿಗೆ ಕೆಮ್ಮು, ಶೀತ ಅಥವಾ ತಲೆನೋವು ಕಾಣಿಸಿಕೊಂಡ ಮೊದಲ ದಿನವೇ ಔಷಧ ನೀಡುವುದನ್ನು ಕಡಿಮೆ ಮಾಡಿ.
– ಮನೆಯಲ್ಲಿರುವ ಔಷಧ ಬಳಸುವ ಮುನ್ನ ವೈದ್ಯಕೀಯ ಸಲಹೆ ಪಡೆಯಿರಿ.
– ಆ್ಯಂಟಿಬಯಾಟಿಕ್‌ಗಳನ್ನು ಬ್ಯಾಕ್ಟೀರಿಯಾಗಳು ನಾಶವಾಗಲು ಮಾತ್ರ ನೀಡುತ್ತಾರೆ. ಸಾಂಕ್ರಾಮಿಕಗಳಿಗಲ್ಲ ಎಂಬುದನ್ನು ಮರೆಯಬೇಡಿ.
– ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳಬೇಕು ಮತ್ತು ಸರಿಯಾದ ಸಮಯಕ್ಕೆ ಮಕ್ಕಳಿಗೆ ಔಷಧ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.