ಬಿಸಿಲು ಮರೆಸಲು ತಂಪು ಪಾನೀಯ
Team Udayavani, Aug 8, 2017, 9:02 AM IST
ಲಿಂಬೆ, ಮಾವು, ಬಾಳೆಹಣ್ಣು , ಸೇಬು, ಬೆಲ್ಲ ಸೇವಿಸುವುದರಿಂದ ಬೇಸಿಗೆಯಲ್ಲಿ ದೈಹಿಕ, ಮಾನಸಿಕ ಶಕ್ತಿ ಸಿಗುವುದು. ವಿಟಾಮಿನ್ “ಎ’, “ಸಿ’, “ಡಿ’ ಕೊರತೆ ನೀಗುವುದು.
ಕಾಮಕಸ್ತೂರಿ ಬೀಜ (ತಂಪಿನ ಬೀಜ)ದ ಪಾನಕ
ಬೇಕಾಗುವ ಸಾಮಗ್ರಿ:
ಕಾಮಕಸ್ತೂರಿ ಬೀಜ- 4 ಚಮಚ, ಪುದೀನಾ ಎಲೆ/ತುಳಸಿ ಎಲೆ- 5-6, ನಿಂಬೆರಸ-2 ಚಮಚ, ಬೆಲ್ಲ ಅಥವಾ ಸಕ್ಕರೆ ಸ್ವಲ್ಪ , ನೀರು- 4 ಕಪ್.
ತಯಾರಿಸುವ ವಿಧಾನ:
ಕಾಮಕಸ್ತೂರಿ ಬೀಜವನ್ನು ನೀರಿಗೆ ಹಾಕಿ ಬೆಲ್ಲ/ಸಕ್ಕರೆ ಹಾಕಿ ಕದಡಿ. ಲಿಂಬೆರಸ ಹಾಕಿ ಚೆನ್ನಾಗಿ ಬೆರೆಸಿ ಪುದೀನಾ ಎಲೆ ಅಥವಾ ತುಳಸಿ ಎಲೆ ಹಾಕಿ ಕುಡಿಯಿರಿ. ಆಗಾಗ ಸ್ವಲ್ಪ ಸ್ವಲ್ಪ ಕುಡಿದರೆ ಹೊಟ್ಟೆ ತಂಪಾಗುವುದು.
ಒಣ ಶುಂಠಿ, ಮಜ್ಜಿಗೆ ಸೊಪ್ಪಿನ ಪಾನಕ
ಬೇಕಾಗುವ ಸಾಮಗ್ರಿ:
ಕಾಳುಮೆಣಸು 7-8, ಶುಂಠಿ-1 ಇಂಚು, ಮಜ್ಜಿಗೆಸೊಪ್ಪು 4-5, ಬೆಲ್ಲ- 50 ಗ್ರಾಂ, ಲಿಂಬೆ-1/2 ಹೋಳು, ನೀರು 5-6 ಕಪ್.
ತಯಾರಿಸುವ ವಿಧಾನ:
ನೀರಿಗೆ ಬೆಲ್ಲ ಹಾಕಿ ಕುದಿಸಿರಿ. ಒಣ ಶುಂಠಿ, ಕಾಳುಮೆಣಸು ಚೆನ್ನಾಗಿ ಹುಡಿಮಾಡಿ ಕುದಿಸಿದ ನೀರಿಗೆ ಹಾಕಿ ಮಜ್ಜಿಗೆಸೊಪ್ಪು ಹಾಕಿ ಕುದಿಸಿ ತಣಿಸಿ, ಲಿಂಬೆರಸ ಹಾಕಿ ಮುಚ್ಚಿಡಿ. ಈ ಪಾನಕವನ್ನು ಬಿಸಿಯಾಗಿಯೂ ಸೇವಿಸಬಹುದು. ತಣಿದ ಮೇಲೂ ಸೇವಿಸಿದರೆ ಆರೋಗ್ಯದಾಯಕವಾಗುತ್ತದೆ.
ಒಣಶುಂಠಿಯ ಬದಲು ಹಸಿ ಶುಂಠಿ ಉಪಯೋಗಿಸಬಹುದು.
ಎಸ್. ಜಯಶ್ರೀ ಶೆಣೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?