ಬಾಯಿಯ ಆರೋಗ್ಯ ಕಳಪೆಯಾಗಿರುವುದರಿಂದ ಕೋವಿಡ್‌ ಅಪಾಯ ಹೆಚ್ಚುತ್ತದೆಯೇ?


Team Udayavani, Nov 15, 2021, 4:35 PM IST

ಬಾಯಿಯ ಆರೋಗ್ಯ ಕಳಪೆಯಾಗಿರುವುದರಿಂದ ಕೋವಿಡ್‌ ಅಪಾಯ ಹೆಚ್ಚುತ್ತದೆಯೇ?

ಕೋವಿಡ್‌-19ನ ಬಹುವಿಧದ ಪರಿಣಾಮಗಳು ಹಾಗೂ ಹಲ್ಲುಗಳು, ವಸಡುಗಳು ಮತ್ತು ಬಾಯಿಯ ಕುಹರದ ಮೇಲೆ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ವೈದ್ಯರು ಮತ್ತು ಸಂಶೋಧಕರು ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾರೆ. ಶ್ವಾಸಾಂಗವನ್ನು ಅಲ್ಪಾವಧಿಯಲ್ಲಿ ತೀವ್ರವಾಗಿ ಕಾಡುವ ಅನಾರೋಗ್ಯವಾಗಿರುವ ಕೋವಿಡ್‌ ವೈರಸ್‌ 2 (ಸಾರ್ -ಕೊವ್‌-2) ಕೊರೊನಾ ವೈರಾಣು 2019 ಕಾಯಿಲೆ (ಕೋವಿಡ್‌-19)ಗೆ ಕಾರಣವಾಗಿದೆ.

ಬಾಯಿಯ ಆರೋಗ್ಯ ಮತ್ತು ಕೋವಿಡ್‌-19 ನಡುವಣ ಸಂಬಂಧಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಸಂಬಂಧ ಇದೆಯೇ?
ಕೋವಿಡ್‌-19ನಿಂದಾಗಿ ಬಾಯಿಯ ಅನಾರೋಗ್ಯಗಳು ಉಂಟಾಗುತ್ತದೆ ಎಂಬುದು ಹೆಚ್ಚು ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದರೆ 2021ರಲ್ಲಿ ನಡೆಸಲಾದ ಒಂದು ಅಧ್ಯಯನವು ಬಾಯಿಯ ಆರೋಗ್ಯವು ಕಳಪೆಯಾಗಿದ್ದರೆ ಅದರಿಂದ ಕೋವಿಡ್‌-19 ಸೋಂಕು ತಗಲುವ ಸಾಧ್ಯತೆ ಹೆಚ್ಚಬಲ್ಲುದು ಎಂದು ಹೇಳಿದೆ.

ಸಾರ್ಸ್‌ -ಕೊವ್‌-2 ವೈರಾಣುಗಳು ದೇಹವನ್ನು ಪ್ರವೇಶಿಸಲು ಬಾಯಿ ಪ್ರವೇಶ ದ್ವಾರ ಆಗಬಹುದು ಎಂಬುದಾಗಿ ಈ ಅಧ್ಯಯನವು ಹೇಳಿದೆ. ಏಕೆಂದರೆ, ನಾಲಗೆ, ವಸಡು ಮತ್ತು ಹಲ್ಲುಗಳಲ್ಲಿ ಆ್ಯಂಜಿಯೊಟೆನ್ಸಿನ್‌ -ಕನ್ವರ್ಟಿಂಗ್‌ ಕಿಣ್ವ-2 (ಎಸಿಇ2)ಗಳು ಇರುತ್ತವೆ. ಇದು ಸಾರ್ಸ್‌ -ಕೊವ್‌-2 ವೈರಾಣು ಅಂಗಾಂಶಗಳಿಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡುವ ಕಿಣ್ವವಾಗಿದೆ. ಬಾಯಿಯ ಆರೋಗ್ಯ ಕಳಪೆಯಾಗಿರುವವರಲ್ಲಿ ಎಸಿಇ2 ರೆಸಿಪ್ಟರ್‌ಗಳು ಹೆಚ್ಚಿರುವುದು ಕಂಡುಬಂದಿದೆ. ಬಾಯಿಯ ನೈರ್ಮಲ್ಯವು ಸರಿಯಿಲ್ಲದೆ ಇದ್ದರೆ ಬ್ಯಾಕ್ಟೀರಿಯಾಗಳು ಬಾಯಿಯಿಂದ ಶ್ವಾಸಕೋಶಕ್ಕೆ ಪ್ರವೇಶಿಸುವ ಸಾಧ್ಯತೆ ಹೆಚ್ಚುತ್ತದೆ ಎಂಬುದಾಗಿ ಇನ್ನೊಂದು ಲೇಖನವು ಹೇಳಿದೆ.

ಇದರಿಂದ ಕೋವಿಡ್‌-19ನ ಜತೆಗೆ ಬ್ಯಾಕ್ಟೀರಿಯಾ ಸೋಂಕು ಕೂಡ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಕೋವಿಡ್‌-19 ಮತ್ತು ಜಿಂಜಿವೈಟಿಸ್‌ ಜಿಂಜಿವೈಟಿಸ್‌ ಎಂದರೆ ವಸಡುಗಳ ಉರಿಯೂತ.

ಜಿಂಜಿವೈಟಿಸ್‌ನ ಕೆಲವು ಲಕ್ಷಣಗಳೆಂದರೆ:

  • ವಸಡುಗಳು ಕೆಂಪಾಗಿ ಊದಿಕೊಂಡಿರುವುದು
  • ಹಲ್ಲುಜ್ಜುವಾಗ ಅಥವಾ ಫ್ಲಾಸ್‌ ಮಾಡುವಾಗ ವಸಡುಗಳಿಂದ ರಕ್ತಸ್ರಾವ
  • ಉಸಿರಿನ ದುರ್ವಾಸನೆ
  • ಬಾಯಿಯಲ್ಲಿ ಕೆಟ್ಟ ರುಚಿ

ಬಾಯಿಯ ನೈರ್ಮಲ್ಯ ಚೆನ್ನಾಗಿಲ್ಲದೆ ಇದ್ದರೆ ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಇವು ಹಲ್ಲು ಮತ್ತು ವಸಡುಗಳಿಗೆ ಅಂಟಿಕೊಂಡು ಸಂಗ್ರಹವಾಗುತ್ತವೆ. ಇದು ಜಿಂಜಿವೈಟಿಸ್‌ಗೆ ಸಾಮಾನ್ಯವಾದ ಕಾರಣವಾಗಿದೆ. 2021ರಲ್ಲಿ ವರದಿಯಾದ ಒಂದು ಪ್ರಕರಣದ ಅಧ್ಯಯನಗಾರರು ಕೋವಿಡ್‌-19ನಂತಹ ದಣಿವು ಮತ್ತು ಅಶಕ್ತಿಗೆ ಕಾರಣವಾಗುವ ಕಾಯಿಲೆಗಳಿಗೆ ತುತ್ತಾದವರು ಬಾಯಿಯ ನೈರ್ಮಲ್ಯವನ್ನು ಸರಿಯಾಗಿಟ್ಟುಕೊಳ್ಳದೆ ಇರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿದ್ದಾರೆ.

ಇದರಿಂದ ಹಲ್ಲುಗಳು ಪಾಚಿಕಟ್ಟುವುದು ಹೆಚ್ಚುತ್ತದೆ ಮತ್ತು ಜಿಂಜಿವೈಟಿಸ್‌ ಉಂಟಾಗುವ ಸಾಧ್ಯತೆ ಅಧಿಕವಾಗುತ್ತದೆ. ವಸಡುಗಳಿಂದ ರಕ್ತಸ್ರಾವವಾಗುವುದು ಕೋವಿಡ್‌-19ನ ಒಂದು ಲಕ್ಷಣವಾಗಿರಬಹುದು ಎಂಬುದಾಗಿಯೂ ಅಧ್ಯಯನಗಾರರು ಹೇಳಿದ್ದಾರೆ.

ಕೋವಿಡ್‌-19 ಸೋಂಕು ಕಡಿಮೆಯಾದ ಬಳಿಕ ಜಿಂಜಿವೈಟಿಸ್‌ ಲಕ್ಷಣಗಳು ಕಡಿಮೆಯಾಗಿರುವುದನ್ನು ಅವರು ಗಮನಿಸಿ ವರದಿ ಮಾಡಿದ್ದಾರೆ. ಆದರೆ ಈ ಎಲ್ಲ ವರದಿಗಳಿಂದ ಕಂಡುಕೊಂಡಿರುವ ಅಂಶಗಳು ಕೆಲವೇ ವ್ಯಕ್ತಿಗಳನ್ನು ಆಧರಿಸಿವೆ.

ಇದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡ ವಿಸ್ತೃತ ಅಧ್ಯಯನದ ಅಗತ್ಯವಿದೆ. ಆದರೂ ಕೋವಿಡ್‌-19 ಸಾಂಕ್ರಾಮಿಕ ಇನ್ನೂ ಪೂರ್ಣವಾಗಿ ಮರೆಯಾಗದ ಈ ಕಾಲಘಟ್ಟದಲ್ಲಿ ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ನಿರ್ಲಕ್ಷಿಸದೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಚೆನ್ನಾಗಿಟ್ಟುಕೊಳ್ಳುವುದು ಉತ್ತಮವೂ ಸುರಕ್ಷಿತವೂ ಆಗಿದೆ.

ಡಾ| ಆನಂದದೀಪ್‌ ಶುಕ್ಲಾ
ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ
ಎಂಸಿಒಡಿಎಸ್‌, ಮಾಹೆ, ಮಣಿಪಾಲ

 

ಟಾಪ್ ನ್ಯೂಸ್

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.