ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ

ಖನಿಜಾಂಶ , ವಿಟಮಿನ್‌ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.

Team Udayavani, Jul 23, 2022, 10:52 AM IST

ನಾಲಗೆಗೆ ಕಹಿ ಆರೋಗ್ಯಕ್ಕೆ ಸಿಹಿ ಹಾಗಲಕಾಯಿ: ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ

ಹಾಗಲಕಾಯಿ ಈ ತರಕಾರಿಯ ಹೆಸರು ಕೇಳಿದರೆ ಸಾಕು. ಇಷ್ಟಪಡುವವರಿಗಿಂತ ಮುಖ ತಿರುಗಿಸುವವರೇ ಹೆಚ್ಚು .ಅದಕ್ಕೆ ಕಾರಣವೂ ಇದೆ. ಈ ತರಕಾರಿಯಲ್ಲಿನ ಕಹಿ ಅಂಶ. ಆದರೆ ಸತ್ಯದ ಸಂಗತಿಯೆಂದರೆ ಇದು ನಾಲಿಗೆಗೆ ಕಹಿಯಾಗಿರಬಹುದು ಆದರೆ ಉದರಕ್ಕಲ್ಲ, ಅಂದರೆ ಆರೋಗ್ಯಕ್ಕಲ್ಲ ! ಈ ತರಕಾರಿಯಲ್ಲಿರುವ ಫೈಟೋಕೆಮಿಕಲ್‌ ಕಂಪೌಂಡ್‌ ಎನ್ನುವ ಅಂಶ ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತದೆ.

ಆದ ಕಾರಣವೇ ಹಲವು ರೋಗ ರುಜಿನಗಳಿಗೆ ಮದ್ದಾಗಿ ಬಳಸಲಾಗುತ್ತದೆ ಹಾಗಲಕಾಯಿ. ಕುಕುರ್ಬಿಟಿ ಏಸಿಯಾ ಎನ್ನುವ ಬೊಟಾನಿಕಲ್‌ ಕುಟುಂಬಕ್ಕೆ ಸೇರಿದ ಈ ತರಕಾರಿ ಕಲ್ಲಂಗಡಿ ಹಣ್ಣಿನ ಜಾತಿಗೆ ಸೇರುವಂಥದ್ದು. ಇದರ ವೈಜ್ಞಾನಿಕ ಹೆಸರು ಮೊಮರ್ಡಿಕಾ ಚರಂಟಿಯ . ಕಲ್ಲಂಗಡಿ ಎಷ್ಟು ಸಿಹಿಯಲ್ಲವೇ, ಅಷ್ಟೇ ಕಹಿ ಈ ಹಾಗಲಕಾಯಿ. ಒಂದೇ ಕುಟುಂಬದವರಾಗಿದ್ದರೂ ತದ್ವಿರುದ್ಧವಾದ ಗುಣ. ಇದರ ಆರೋಗ್ಯಕರ ಗುಣಗಳು ಹಾಗಲಕಾಯಿಯಲ್ಲಿ ಕ್ಯಾಲರಿ ಅಂಶ ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ , ಖನಿಜಾಂಶ , ವಿಟಮಿನ್‌ ಮತ್ತು ಆ್ಯಂಟಿಆಕ್ಸಿಡೆಂಟ್‌ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.

ಇದರಲ್ಲಿರುವ ಪೊಲಿಪೆಪ್ಟಿಟೈಡ್‌ ಪಿ ಎನ್ನುವಂತಹ ಫೈಟೋ ನ್ಯೂಟ್ರಿಯಂಟ್‌ ಒಂದು ಪ್ಲ್ರಾಂಟ್‌ ಇನ್ಸುಲಿನ್‌ ಆಗಿದ್ದು ದೇಹದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪೊಲೇಟ್‌ ಅಂಶ ಹೇರಳವಾಗಿ ದೊರೆಯುತ್ತದೆ. ಇದನ್ನು ಗರ್ಭಿಣಿಯರು ಬಳಸುವುದರಿಂದ ಭ್ರೂಣದಲ್ಲಿ ನ್ಯೂರಲ್‌ ಟ್ಯೂಬ್‌ ದೋಷ ತೋರಿಬರುವ ಸಾಧ್ಯತೆ ಬಹಳ ಕಡಿಮೆ ಎಂದು ಸಂಶೋಧನೆಯಲ್ಲಿ ದೃಢ ಪಟ್ಟಿದೆ . ಆದರೆ ಇದನ್ನೂ ಮನಸ್ಸಿಗೆ ಬಂದಷ್ಟು ತೆಗೆದುಕೊಳ್ಳುವುದಲ್ಲ ಹಾಗೂ ಸೇವಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ. ಪ್ರತಿ 100ಗ್ರಾಂ ನಲ್ಲಿ 84 ಮಿಲಿಗ್ರಾಂ ನಷ್ಟು ವಿಟಮಿನ್‌ ಸಿ ಇದರಲ್ಲಿ ಸಿಗುತ್ತದೆ.

ಆರೋಗ್ಯಕ್ಕೆ ಉಪಯುಕ್ತವಾದ ಕ್ಯಾಲೋಟಿನ್‌, ಲುಟೀನ್‌ ಮತ್ತು ಝಿಯ-ಕ್ಷಂತಿನ್‌ ಜೊತೆಗೆ ವಿಟಮಿನ್‌ ಎ ಯನ್ನೂ ಇದು ಒದಗಿಸುತ್ತದೆ. ಹಾಗಲಕಾಯಿಯನ್ನು ದಿನನಿತ್ಯದ ಆಹಾರಕ್ರಮದಲ್ಲಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿರುವುದಲ್ಲದೇ, ಮಲಬದ್ದತೆ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹೊಟ್ಟೆಯಲ್ಲಿ ಹುಳಗಳ ಸಂಖ್ಯೆ ಜಾಸ್ತಿಯಾದಾಗ ಗುದದ್ವಾರದಲ್ಲಿ ನೋವಿರುತ್ತದೆ.

ಇಂಥ ಸಂದರ್ಭದಲ್ಲಿ ಹಾಗಲಕಾಯಿಯ ಎಲೆಗಳನ್ನು ಸ್ವಲ್ಪ ಹಸಿಮೆಣಸಿನೊಂದಿಗೆ ಅರೆದು ಬೆಟ್ಟದ ನೆಲ್ಲಿಕಾಯಿಯಷ್ಟು ಉಂಡೆ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸಾಯುತ್ತವೆ. ಇತ್ತೀಚೆಗೆ ನಡೆದ ಇದರ ಬಗೆಗಿನ ಪ್ರಾಥಮಿಕ ಸಂಶೋಧನೆಯಲ್ಲಿ ಇದರಲ್ಲಿರುವ ಪೈಟೋ ಕೆಮಿಕಲ್‌ ಕಂಪೌಂಡ್‌ ಎನ್ನವ ಅಂಶ ಎಚ್‌. ಐ. ವಿ. ಕಾಯಿಲೆಗೂ ಮದ್ದಾಗುತ್ತದೆ ಎಂದು ತಿಳಿದು ಬಂದಿದೆ. ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಂಡು ತುರಿಕೆಯಂಥ ತೊಂದರೆ ನಿವಾರಣೆಯಾಗುತ್ತದೆ.

ಇದರಲ್ಲಿರುವ ಕಿಣ್ವಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರಿಂದ, ಕ್ಯಾನ್ಸರ್‌ ಸೆಲ್‌ ಗಳ ಬೆಳವಣಿಗೆಯನ್ನು ತಡೆಯಬಲ್ಲದು. ಕಾಲರಾ ಆರಂಭದ ಹಂತದಲ್ಲಿದ್ದರೆ, ಹಾಗಲಕಾಯಿ ಎಲೆಯ ರಸವನ್ನು (ಎರಡು ಚಮಚ) ಎರಡು ಚಮಚ ಬಿಳಿ ಈರುಳ್ಳಿ ರಸ ಹಾಗೂ ಒಂದು ಚಮಚ ನಿಂಬೆ ರಸದೊಂದಿಗೆ ಸೇವಿಸುವ ಪದ್ಧತಿ ಇದೆ. ನಿತ್ಯವೂ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಲಿದೆ. ಕಣ್ಣಿನ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳಿಗೂ ಇದು ಔಷಧವಾಗಬಲ್ಲದು. ಇದಲ್ಲದೇ, ಇನ್ನೂ ಹತ್ತು ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ. ಅದರ ಎಲೆಯಿಂದ ಹಿಡಿದು ಕಾಯಿಯವರೆಗೂ ಬಳಕೆಗೆ ಬರುವಂಥದ್ದು.

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.