ದೇಹದ ಅಂಗಾಂಗಗಳಿಗೆ ಶಕ್ತಿ ತುಂಬುವ ವೀರಭದ್ರಾಸನ

ಯೋಧನ ಭಂಗಿಯಲ್ಲಿ ನಿಲ್ಲಬೇಕು. ಎರಡೂ ಬದಿಯಿಂದ ಕೈಗಳನ್ನು ಕೆಳಗೆ ತಂದು ಉಸಿರು ಬಿಡಿ

Team Udayavani, Jan 18, 2021, 1:40 PM IST

ದೇಹದ ಅಂಗಾಂಗಗಳಿಗೆ ಶಕ್ತಿ ತುಂಬುವ ವೀರಭದ್ರಾಸನ

ಯೋಗದ ಪ್ರತಿಯೊಂದು ಆಸನವು ದೇಹದಲ್ಲಿರುವ ವಿವಿಧ ಅಂಗಾಂಗಗಳಿಗೆ ಶಕ್ತಿಯನ್ನು ತುಂಬುತ್ತದೆ. ಅದೇ ರೀತಿ ವೀರಭದ್ರಾಸನವು ಮುಖ್ಯವಾಗಿ ಕೈಗಳು, ಭುಜ, ತೊಡೆ, ಸ್ನಾಯುಗಳನ್ನು ಬಲಪಡಿಸುತ್ತದೆ. ವೀರಭದ್ರಾಸನವು ಆಕರ್ಷಕ ಯೋಗ ಭಂಗಿಯಾಗಿದ್ದು, ಇದು ದೇಹಕ್ಕೆ ಸೌಂದರ್ಯ ಮತ್ತು ಆಕರ್ಷಣೆಯನ್ನು ಒದಗಿಸುತ್ತದೆ. ಇದಕ್ಕಾಗಿ ಕಾಲುಗಳನ್ನು ಮೂರು ನಾಲ್ಕು ಅಡಿ ಅಗಲವಾಗಿ ನೇರವಾಗಿ ನಿಲ್ಲಬೇಕು. ಬಲ ಕಾಲನ್ನು 90 ಡಿಗ್ರಿ ಮತ್ತು ಎಡ ಕಾಲನ್ನು 15 ಡಿಗ್ರಿಯಲ್ಲಿಟ್ಟು ಬಲಕಾಲಿನ ಹಿಂಗಾಲು ಎಡಕಾಲಿನ ಪಾದದ ಮಧ್ಯೆ ನೇರವಾಗಿರಬೇಕು. ಅಂಗೈ ಪರಸ್ಪರ ಎದುರಾಗುವಂತೆ ಎರಡೂ ಕೈಗಳನ್ನು
ಮೇಲೆತ್ತಿಕೊಂಡಿರಬೇಕು.

ಉಸಿರನ್ನು ಬಿಡುತ್ತ ಮೊಣಕಾಲನ್ನು ಬಗ್ಗಿಸಿ. ಮೊಣಕಾಲುಗಳು ಹಿಂಗಾಲನ್ನು ಹಿಂದಿಕ್ಕಿ ಹೋಗಬಾರದು. ತಲೆಯನ್ನು ನೇರವಾಗಿ ಬಲಕ್ಕೆ ತಿರುಗಿಸಿ ಕೈಗಳನ್ನು ಎಳೆದುಕೊಳ್ಳಿ. ಶ್ರೋಣಿಯನ್ನು ಕೆಳಗೆ ಒತ್ತಲು ಪ್ರಯತ್ನಿಸಿ. ಯೋಧನ ಭಂಗಿಯಲ್ಲಿ ನಿಲ್ಲಬೇಕು. ಎರಡೂ ಬದಿಯಿಂದ ಕೈಗಳನ್ನು ಕೆಳಗೆ ತಂದು ಉಸಿರು ಬಿಡಿ. ಇದೇ ರೀತಿ ಎಡ ಬದಿಯಿಂದಲೂ ಮಾಡಿ. ವೀರಭದ್ರಾಸನದಿಂದ ಹಲವು ಲಾಭಗಳಿವೆ.

*ಇದು ಕೈಗಳು, ಕಾಲುಗಳು, ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

*ದೇಹದಲ್ಲಿ ಸಮತೋಲನ ಸುಧಾರಿಸುತ್ತದೆ ಮತ್ತು ಶಕ್ತಿ ಹೆಚ್ಚಿಸುತ್ತದೆ.

ಇದನ್ನೂ ಓದಿ:ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

*ಜಡತ್ವ ನಿವಾರಣೆಗೆ, ಕುಳಿತು ಕೆಲಸ ಮಾಡುವವರಿಗೆ ಅತ್ಯುತ್ತಮ ಯೋಗ ಭಂಗಿಯಾಗಿದೆ.

*ಭುಜದ ಮೇಲೆ ನೋವಿದ್ದರೆ ಶಮನವಾಗುವುದು. ಧೈರ್ಯ ಹೆಚ್ಚಿಸುತ್ತದೆ, ಮನಸ್ಸಿನ ಶಾಂತಿ ಕಾಪಾಡುತ್ತದೆ.

ಅತಿಸಾರ, ಬೆನ್ನಿನ ಸಮಸ್ಯೆ, ದೀರ್ಘ‌ಕಾಲದ ಅನಾರೋಗ್ಯಕ್ಕೆ ಒಳಗಾದವರು ಈ ಯೋಗ ಭಂಗಿಯನ್ನು ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯುತ್ತಮ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇದನ್ನು ಮಾಡಬಾರದು.

ಇದನ್ನೂ ಓದಿ:ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಎರಡು ಮತ್ತು ಮೂರನೇ ತ್ತೈಮಾಸಿಕದಲ್ಲಿರುವ ಗರ್ಭಿಣಿಯರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಗೋಡೆಗೆ ಸಮೀಪ ನಿಂತು ಮಾಡುವುದು
ಉತ್ತಮ. ಪ್ರಾರಂಭಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಮೊಣಕಾಲು ನೋವು, ಸಂಧಿವಾತ ಇರುವವರು ವೈದ್ಯರ ಸಲಹೆ ಪಡೆದು
ಈ ಭಂಗಿಯನ್ನು ಮಾಡಬಹುದು ಆದರೆ ಬಲಕ್ಕಾಗಿ ಏನನ್ನಾದರೂ ಉಪಯೋಗಿಸುವುದು ಉತ್ತಮ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.