ಕಿವಿಯೊಳಗೆ ನೀರು ಹೋದರೆ ಕಡೆಗಣಿಸದಿರಿ…

ದೀರ್ಘಾವಧಿ ಕಡೆಗಣಿಸಿ ಬಿಟ್ಟರೆ ಸೋಂಕು ಉಂಟಾಗುವ ಸಾಧ್ಯತೆ ಇದೆ

Team Udayavani, Sep 1, 2021, 1:20 PM IST

ಆಕಳಿಸಿದಾಗ ಕಿವಿ ಹಿಗ್ಗಿದಂತಾಗಿ ನೀರು ಹೊರಬರುವ ಸಾಧ್ಯತೆ ಇರುತ್ತದೆ.

ಸ್ನಾನಕ್ಕೆ ಹೋಗಿದ್ದಿರಿ. ಕಿವಿಯೊಳಗೆ ನೀರು ಹೋಯಿತು. “ಗೊಯ್‌’ ಎಂಬ ಶಬ್ದ. ನಡೆಯುವಾಗ “ಧನ್‌..ಧನ್‌’ ಎಂದಂತೆ.. ಏನೋ ಕಿರಿಕಿರಿ! ಕುಣಿಯುತ್ತಲೇ ಬಚ್ಚಲು ಮನೆಯಿಂದ ಹೊರಗೆ ಬಂದಿರಿ. ಆದರೆ ನೀರು ಕಿವಿಯಿಂದ ಹೊರಗೆ ಬರಲಿಲ್ಲ!

ಸಾಮಾನ್ಯವಾಗಿ ಸ್ನಾನ ಮಾಡುವಾಗ, ಸ್ವಿಮ್ಮಿಂಗ್‌ ಮಾಡಿದ ಅನಂತರ ಈ ಸ್ಥಿತಿ ಉಂಟಾಗುತ್ತದೆ. ಹೀಗೆ ಹೊಕ್ಕ ನೀರು ಒಂದು ದಿನ, ಕಡೆಗಣಿಸಿದರೆ ಐದು ದಿನಗಳವರೆಗೆ, ವಾರಗಟ್ಟಲೆ, ತಿಂಗಳುಗಟ್ಟಲೆ ಕೂಡ ಇರಬಲ್ಲದು. ದೀರ್ಘಾವಧಿ ಕಡೆಗಣಿಸಿ ಬಿಟ್ಟರೆ ಸೋಂಕು ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಕಿವಿಯೊಳಗೆ ಕಿಲ್ಬಿಷ (ಇಯರ್‌ ವ್ಯಾಕ್ಸ್‌) ತುಂಬಿಕೊಂಡಿದ್ದರಂತೂ ಅಪಾಯ ಖಚಿತ.

ನೀರು ಹೊಕ್ಕಿದ್ದರೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಸೋಂಕಾದರೆ ತಲೆನೋವು, ದವಡೆ ನೋವು, ತುರಿಕೆ, ತಲೆಸುತ್ತು ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಇನ್ನೂ ಮುಂದುವರಿದು ಕಿವಿಯಲ್ಲಿ ತೇವಾಂಶ ಹೆಚ್ಚಿ, ಕಿವಿ ತಮಟೆ ದುರ್ಬಲ ಗೊಳ್ಳಬಹುದು. ಹಾಗಾಗಿ ನೀರು ಹೊಕ್ಕ ತತ್‌ಕ್ಷಣ ಹೊರತೆಗೆಯಬೇಕು ಎಂಬುದು ತಜ್ಞರ ಸಲಹೆ.

ಏನು ಪರಿಹಾರ?
ನೀರೇನೋ ಕಿವಿಯೊಳಗೆ ಸಲೀಸಾಗಿ ಹೋಗುತ್ತದೆ. ಆದರೆ ಹೊರಬರುವುದು ನಿಧಾನ. ಪ್ರಿವೆನ್ಶ ನ್‌ ಈಸ್‌ ಬೆಟರ್‌ ದ್ಯಾನ್‌ ಕ್ಯೂರ್‌ ಎಂಬಂತೆ ಕಿವಿಯೊಳಗೆ ನೀರು ಹೋಗದಂತೆ ನೋಡಿಕೊಳ್ಳುವುದು ಉತ್ತಮ. ಆದರೂ ಒಂದೊಮ್ಮೆ ಹೊಕ್ಕಾಗ ಕೆಲವೊಂದು ವಿಧಾನಗಳು ಪ್ರಯೋಜನಕಾರಿ.

ಕುಪ್ಪಳಿಸುವುದು
ಒಂಟಿ ಕಾಲಿನಲ್ಲಿ ನಿಂತು ಯಾವ ಕಿವಿಗೆ ನೀರು ಹೊಕ್ಕಿದೆಯೋ ಆ ಕಡೆ ತಲೆ ಓರೆಯಾಗಿಸಿ (ಆ ಕಿವಿ ನೆಲದ ಕಡೆಗೆ ಇರುವಂತೆ) ಕುಪ್ಪಳಿಸಬೇಕು. ಕುಪ್ಪಳಿಸುವುದು ಸಾಧ್ಯವಿಲ್ಲ ಎನ್ನುವವರು ನೀರು ಹೊಕ್ಕ ಕಿವಿಯ ವಿರುದ್ಧ ದಿಕ್ಕಿನಿಂದ ತಲೆಯ ಭಾಗಕ್ಕೆ ಅಂಗೈಯಿಂದ ಮೆಲ್ಲಗೆ ತಟ್ಟಬೇಕು (ನೀರು ಹೊಕ್ಕ ಕಿವಿ ನೆಲದ ಕಡೆಗಿರಬೇಕು). ಸಾಮಾನ್ಯವಾಗಿ ಈ ವಿಧಾನ ಪ್ರಯೋಜನಕಾರಿ.

ಮಲಗಿಕೊಳ್ಳುವುದು
ಯಾವ ಕಿವಿಗೆ ನೀರು ಹೊಕ್ಕಿದೆಯೋ ಆ ಕಿವಿ ನೆಲದ ಕಡೆಗಿರುವಂತೆ ಮಲಗಿ ಕೊಂಡು ನೀರು ಇಳಿದು ಹೋಗುವಂತೆ ಮಾಡಬಹುದು.

ವ್ಯಾಕ್ಯೂಮ್‌
ಹೀಗೇ ಮಲಗಿಕೊಂಡು ಅಂಗೈಯಿಂದ ಕಿವಿಯನ್ನು ಮುಚ್ಚಿ ನಿರ್ವಾತ ಉಂಟುಮಾಡಿ ಮತ್ತೆ ಅಂಗೈ ತೆಗೆದು ನೀರು ಹೊರ ಬರುವಂತೆ ಮಾಡಬಹುದು.

ಆಕಳಿಸುವುದು
ಆಕಳಿಸಿದಾಗ ಕಿವಿ ಹಿಗ್ಗಿದಂತಾಗಿ ನೀರು ಹೊರಬರುವ ಸಾಧ್ಯತೆ ಇರುತ್ತದೆ.

ವಲ್ಸಾಲ್ವಾ ಮ್ಯಾನ್ಯೂವರ್‌
ಒಂದು ದೀರ್ಘ‌ ಉಸಿರು ಎಳೆದುಕೊಂಡು, ಬಾಯಿ ಮುಚ್ಚಿ, ಮೂಗನ್ನು ಕೈಯಿಂದ ಮುಚ್ಚಿ ಹಿಡಿದುಕೊಂಡು ಕಿವಿಗಳ ಮೂಲಕ ಗಾಳಿಯನ್ನು ಹೊರ ಬಿಡಲು ಪ್ರಯತ್ನಿಸಬೇಕು. ಬಹುತೇಕ ಸಂದರ್ಭ ಈ ವಿಧಾನದಲ್ಲಿ ಅಂತಿಮವಾಗಿ ಸಮಸ್ಯೆಗೆ ಪರಿಹಾರ ದೊರಕಬಹುದು. ಕಿವಿಯಲ್ಲಿ ವ್ಯಾಕ್ಸ್‌ ಇದ್ದರೆ ನೀರು ಸುಲಭವಾಗಿ ಹೊರಬರಲು ಕಷ್ಟವಾಗಬಹುದು. ಹಾಗೆಂದು ಕಿವಿಗೆ ಕೀ, ಪೆನ್‌, ಬೆರಳು ಇತ್ಯಾದಿ ಹಾಕಿ ಕೊಳ್ಳಬಾರದು.

ಹಾಗಾದಾಗ, ಕಿವಿಯ ಮೂಳೆಗೆ ಗಾಯವಾಗಿ ವೃಣವಾಗಿ ಮತ್ತಷ್ಟು ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ. ಆಗ ಮೊದಲು ಆ ಗಾಯ ಗುಣಪಡಿಸಿ ಅನಂತರ ವ್ಯಾಕ್ಸ್‌, ಅಥವಾ ಅದರಿಂದ ಉಂಟಾದ ಸೋಂಕಿಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಅದಷ್ಟು ಮುಗಿಯುವರೆಗೆ ನಿಮ್ಮ ಸುಖ ನಿದ್ದೆ ದೂರವಾಗಬಹುದು. ಸಮಸ್ಯೆ ಆ ಮಟ್ಟದ್ದು ಎಂದಾದರೆ ಶೀಘ್ರ ವೈದ್ಯರನ್ನು ಕಾಣುವುದು ಅಗತ್ಯ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.