ಪ್ರಕೃತಿ ಎಂಬ ಬೆಸ್ಟ್‌ ಬ್ಯೂಟಿ ಪಾರ್ಲರ್‌


Team Udayavani, Jun 22, 2019, 5:00 PM IST

19

ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ. ಅಷ್ಟಕ್ಕೂ, ಫೇಸ್‌ವಾಶ್‌, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಆಗಿದೆ

“”ಅಜ್ಜಿ, ನಿಮ್ಮ ಕಾಲದ ಹೆಂಗಸರ ಸೌಂದರ್ಯದ ರಹಸ್ಯವೇನು?” ಅಂತೊಮ್ಮೆ ಅವರ ನ್ನು ಕೇಳಿದ್ದೆ. ಆಗ ಅವರು, “”ಅದರಲ್ಲಿ ರಹಸ್ಯವೇನು ಬಂತು? ಸುತ್ತಮುತ್ತ ಏನು ಸಿಗುತ್ತಿತ್ತೋ, ಅದನ್ನೇ ಎಲ್ಲಾ ಬಳಸುತ್ತಿದ್ವಿ. ಈಗಿನಂತೆ ಬ್ಯೂಟಿ ಪಾರ್ಲರೂ, ಕ್ರೀಮು, ಸೋಪು, ಶ್ಯಾಂಪೂ ಏನೂ ಇರಲಿಲ್ಲ. ಮೈಗೆ ಕಡಲೆಹಿಟ್ಟು, ತಲೆಗೆ ಸೀಗೇಕಾಯಿ, ಮುಖಕ್ಕೆ ಅರಿಶಿನ” ಅಂತ ಹೇಳಿದ್ದರು. ನಮಗೆ ಬೇಕಾದ ಎಲ್ಲ ಸೌಂದರ್ಯವರ್ಧಕಗಳನ್ನು ಈ ಪ್ರಕೃತಿಯೇ ಧಾರಾಳವಾಗಿ ನೀಡಿದೆ ಅನ್ನೋದು ಅಜ್ಜಿ ಯಾವಾಗಲೂ ಹೇಳುತ್ತಿದ್ದ ಮಾತು.

ಆ ಮಾತನ್ನು ಇಂದಿನವರು ಮರೆತಿದ್ದರಿಂದಲೇ ಇರಬೇಕು ಗಲ್ಲಿಗಲ್ಲಿಗಳಲ್ಲೂ ಬ್ಯೂಟಿಪಾರ್ಲರ್ಗಳು ತಲೆ ಎತ್ತಿರುವುದು ಮತ್ತು ಸೌಂದರ್ಯ ಉತ್ಪನ್ನಗಳ ಮಾರುಕಟ್ಟೆ ಹುಲುಸಾಗಿ ಬೆಳೆಯುತ್ತಿರುವುದು. ಅಷ್ಟಕ್ಕೂ ಪಾರ್ಲರ್ನವರು ಏನು ಮಾಡುತ್ತಾರೆ? ನಿಮ್ಮ ವಯಸ್ಸನ್ನು, ಚರ್ಮದ ಮೇಲಿನ ಸುಕ್ಕು-ಕಲೆಗಳನ್ನು ಮರೆಮಾಚಲು ಒಂದಿಷ್ಟು ಫೇಸ್ಕ್ರೀಂ, ಬ್ಲೀಚ್‌, ಲಿಪ್ಸಿಸ್ಟೀಕ್‌ ಅಂತೇನೇನೋ ಬಳಿದು ನಿಮ್ಮನ್ನು ಅಂದವಾಗಿ ಕಾಣುವಂತೆ ಮಾಡುತ್ತಾರೆ. ಆದರೆ, ಈ ಬಣ್ಣಗಳೆಲ್ಲ ಸ್ವಲ್ಪ ದಿನಗಳು ಮಾತ್ರ. ಪುನಃ ನಿಮ್ಮ ಸೌಂದರ್ಯ ಮಾಮೂಲಿಗಿಂತ ಹದಗೆಡುತ್ತದೆ. ಆಗ ನೀವು ಇನ್ನೂ ದುಬಾರಿ ಬೆಲೆಯ ಕೃತಕ ವಸ್ತುಗಳ ಮೊರೆ ಹೋಗುತ್ತೀರಿ. ಇದರಿಂದ ನಿಮ್ಮ ಚರ್ಮದ ಆರೋಗ್ಯಕ್ಕೇ ನಷ್ಟ. ಹಣವೂ ಪೋಲು.

ಅದರ ಬದಲು ನೀವೊಮ್ಮೆ ಪ್ರಕೃತಿಯತ್ತ ಮುಖ ಮಾಡಿ, ಅಲ್ಲಿ ನಿಮ್ಮ ಸೌಂದರ್ಯ ಹೆಚ್ಚಿಸುವ ಎಲ್ಲ ವಸ್ತುಗಳೂ ಲಭ್ಯ. ಅಷ್ಟಕ್ಕೂ, ನಿಮ್ಮ ಫೇಸ್‌ವಾಶ್‌, ಕ್ರೀಮು, ಟೂತ್‌ಪೇಸ್ಟ್‌ಗಳ ಜಾಹೀರಾತಿನಲ್ಲಿ ತೋರಿಸುವ ಲಿಂಬೆ, ಬೇವು, ಅರಿಶಿನ, ಲವಂಗ ಎಲ್ಲವೂ ಪ್ರಕೃತಿದತ್ತವೇ ಅಲ್ಲವೆ? ಅದಕ್ಕೇ ಹೇಳ್ಳೋದು, ಪ್ರಕೃತಿಗಿಂತ ಬೆಸ್ಟ್‌ ಬ್ಯೂಟಿಪಾರ್ಲರ್‌ ಅಂತ.

ಮೈ ಕಾಂತಿಗೆ ಮ್ಯಾಜಿಕ್‌
ಮೈ ಬಣ್ಣ ಬಿಳಿಯಾಗಿಸಲು ಸಾವಿರಾರು ರೂ. ಖರ್ಚು ಮಾಡುವಿರೇಕೆ? ಲಿಂಬೆರಸಕ್ಕೆ, ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ, ಈ ಮಿಶ್ರಣಕ್ಕೆ ಒಂದು ಟೀ ಚಮಚ ಸೌತೆಕಾಯಿ ರಸವನ್ನು ಹಾಕಿ ಚೆನ್ನಾಗಿ ಬೆರೆಸಿ, ಮುಖ- ಕುತ್ತಿಗೆ ಭಾಗಗಳಿಗೆ ಮಸಾಜ್‌ ಮಾಡಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯುವುದು, ಪಾರ್ಲರ್‌ನಲ್ಲಿ ಒಂದು ಗಂಟೆ ಮುಖಕ್ಕೆ ಕೆಮಿಕಲ್‌ ಉಜ್ಜಿಸಿಕೊಳ್ಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ.

ಒಡವೆಗೆ ತೊಡಕು ಮೊಡವೆ
ಒಂದು ತುಂಡು ಶ್ರೀಗಂಧವನ್ನು, ಸ್ವಲ್ಪ ಸೌತೆಕಾಯಿ ರಸ ಅಥವಾ ಗುಲಾಬಿ ನೀರಿನೊಂದಿಗೆ ಸ್ವತfವಾದ ಕಲ್ಲಿನಲ್ಲಿ ತೇಯ್ದು, ಆ ಮಿಶ್ರಣವನ್ನು ದಿನಕ್ಕೊಂದು ಬಾರಿ ಮುಖಕ್ಕೆ ಲೇಪಿಸಬೇಕು.

ಪಾದಗಳಿಗೆ ಲಿಂಬೆಸ್ನಾನ
ಅಂಗೈ, ಅಂಗಾಲು ಒಡೆದಿದ್ದರೆ ಪೆಡಿರ್ಕ್ನೂ ಮಾಡಿಕೊಳ್ಳಬೇಕಿಲ್ಲ. ಅಂಗಾಲಿಗೆ ಲಿಂಬೆರಸವನ್ನು ತಿಕ್ಕಿ ಸ್ವಲ್ಪ ಸಮಯ ಬಿಟ್ಟು ತೊಳೆದು, ಬೆಣ್ಣೆ ಅಥವಾ ಹಾಲಿನ ಕೆನೆಯನ್ನು ಹಾಕಿ ತಿಕ್ಕಿದರೆ, ಚರ್ಮ ನುಣುಪಾಗುತ್ತದೆ.

ಹುಬ್ಬಿಗೆ ಕೊಬ್ಬರಿ ಎಣ್ಣೆ ಕುಡಿಸಿ
ಕಣ್ಣಿನ ಹುಬ್ಬುಗಳನ್ನು ಕಪ್ಪಾಗುವಂತೆ ಮಾಡಲು ದಿನವೂ ಸ್ವಲ್ಪ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಮೃದುವಾಗಿ ಹಚ್ಚಿ. ಅಂದವಾದ ತುಟಿಯ ರಹಸ್ಯ ಎಲ್ಲಿ ಅಡಗಿದೆ ಗೊತ್ತಾ?

ಅಧರಂ ಮಧುರಂ
ತಾವರೆಯ ಮೊಗ್ಗಿನೊಳಗೆ ಕೇಸರದ ಬಳಿಯಿರುವ ಸಣ್ಣ ದಳಗಳನ್ನು ಲಿಂಬೆರಸದಲ್ಲಿ ಅದ್ದಿ ತುಟಿಗೆ ತಿಕ್ಕುವುದರಿಂದ ಕಪ್ಪಾದ ತುಟಿಗಳು ಗುಲಾಬಿ ಬಣ್ಣ ಪಡೆಯುತ್ತವೆ.

ನ್ಯಾಚುರಲ್‌ ಫೇಸ್‌ಪ್ಯಾಕ್‌
ಮುಖದ ಸೌಂದರ್ಯಕ್ಕೆ ಸೌತೆಕಾಯಿ ರಸವನ್ನು ಹತ್ತಿಯಲ್ಲಿ ಅದ್ದಿ ಮುಖದ ಮೇಲೆ ಮೃದುವಾಗಿ ಉಜ್ಜಿ. ಬಳಲಿದ ಚರ್ಮಕ್ಕೆ ಆರೈಕೆ ಸಿಗುತ್ತದೆ. ಕ್ಯಾರೆಟ್‌ ಅನ್ನು ತುರಿದು, ಆದರ ರಸವನ್ನು ಮುಖಕ್ಕೆ ಲೇಪಿಸಿ, ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ.

ವೇದಾವತಿ ಎಚ್‌. ಎಸ್‌.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

8

Measles: ದಡಾರ

4-health

Tooth Health: ನಿಮ್ಮ ದವಡೆ ಸಂಧಿಯ ಆರೋಗ್ಯವೂ ಬಹಳ ಮುಖ್ಯ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.