ಪೆರಿ-ಪ್ರೋಸ್ಥೆಟಿಕ್‌ ಸೋಂಕು – ನೀವು ತಿಳಿಯಬೇಕಾದದ್ದು


Team Udayavani, Nov 13, 2022, 3:13 PM IST

14

ವಿವಿಧ ಅನಾರೋಗ್ಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಶಸ್ತ್ರಚಿಕಿತ್ಸಾ ವಿಧಾನಗಳು ಸುಲಭಲಭ್ಯವಿರುವ ಈ ಕಾಲಘಟ್ಟದಲ್ಲಿ ಅಂತರ್ನಿವೇಶಕ ಸಲಕರಣೆ (ಇಂಪ್ಲಾಂಟೆಡ್‌ ಮೆಟೀರಿಯಲ್ಸ್‌) ಗಳನ್ನು ಬಹು ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿದೆ – ಹೃದಯದ ಕವಾಟಗಳು, ಆ್ಯಂಜಿಯೊಪ್ಲಾಸ್ಟಿ ಸಾಮಗ್ರಿಗಳಿಂದ ತೊಡಗಿ ಮೂಳೆ ಮುರಿತಗಳಿಗಾಗಿ ಆರ್ಥೋಪೆಡಿಕ್‌ ಅಂತರ್ನಿವೇಶಕಗಳು ಮತ್ತು ಸಂಧಿ ಬದಲಾವಣೆ ಸಾಮಗ್ರಿಗಳ ವರೆಗೆ ಇವು ಬಳಕೆಯಲ್ಲಿವೆ.

ವೈದ್ಯಕೀಯ ಸಾಮಗ್ರಿಗಳು ಮತ್ತು ಔಷಧಗಳಲ್ಲಿ ಆಗಿರುವ ಅಭಿವೃದ್ಧಿಯಿಂದಾಗಿ ಈ ಅಂತರ್ನಿವೇಶಕಗಳಿಗೆ ದೇಹದಲ್ಲಿ ಉಂಟಾಗುವ ತಿರಸ್ಕಾರ ಮತ್ತು ಅಲರ್ಜಿ ಪರಿಣಾಮಗಳನ್ನು ಪರಿಹರಿಸಿಕೊಳ್ಳುವುದು ನಮಗೆ ಸಾಧ್ಯವಾಗಿದೆ. ಆದರೆ ದೇಹದ ಒಳಗಿರುವ ಪರವಸ್ತುಗಳನ್ನು ದೇಹದ ರೋಗ ನಿರೋಧಕ ಶಕ್ತಿಯು ರಕ್ಷಿಸುವುದಿಲ್ಲ. ಹೀಗಾಗಿ ಇವು ದೇಹವನ್ನು ಪ್ರವೇಶಿಸುವ ಸೂಕ್ಷ್ಮಜೀವಿಗಳ ದಾಳಿಗೆ ತುತ್ತಾಗುವುದು ಸಾಧ್ಯ. ಇಂತಹ ಕೃತಕಾವಯವ ಸಂಬಂಧಿ ಸೋಂಕು (ಪೆರಿ-ಪ್ರೋಸ್ಥೆಟಿಕ್‌ ಇನ್‌ಫೆಕ್ಷನ್‌) ಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡುವುದು ಸಾಧ್ಯ.

ಇಂತಹವುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂಥವು ಎಲುಬು ಸಂಬಂಧಿ ಅಂತರ್ನಿವೇಶಕ ಸೋಂಕುಗಳಾಗಿದ್ದು, ಅವುಗಳನ್ನು ಈ ಕೆಳಗೆ ಚರ್ಚಿಸಲಾಗಿದೆ. ಕೃತಕ ಅಂಗಗಳಿಂದ (ಪ್ರೋಸ್ಥೆಸೆಸ್‌) ಸೋಂಕುಗಳು (ಶೇ. 75) ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಸೋಂಕುನಾಶಕ ಮುನ್ನೆಚ್ಚರಿಕೆಗಳಲ್ಲಿ ಉಂಟಾದ ಕೊರತೆಯಿಂದ ಕಾಣಿಸಿಕೊಳ್ಳುತ್ತವೆ.

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ಅದಾದ ತತ್‌ ಕ್ಷಣ ಅವು ಕಾಣಿಸಿಕೊಳ್ಳಲಾರವು, ಆದರೆ ದೇಹ ಪ್ರವೇಶಿಸಿದ ಸೂಕ್ಷ್ಮಜೀವಿ ಮತ್ತು ಸೋಂಕಿನ ತೀವ್ರತೆಯನ್ನು ಆಧರಿಸಿ ಅದು ವಿಳಂಬವಾಗಿಯೂ ಕಾಣಿಸಿಕೊಳ್ಳಬಹುದು. ನಾಲ್ಕನೇ ಒಂದರಷ್ಟು ಪ್ರಮಾಣದ ಪ್ರಕರಣಗಳಲ್ಲಿ ಮೂತ್ರಾಂಗ/ ಎದೆ (ನ್ಯುಮೋನಿಯಾ)ಯಂತಹ ಗಂಭೀರ – ಚಿಕಿತ್ಸೆಗೊಳಪಡದ ಸೋಂಕುಗಳು ಅಥವಾ ದಂತವೈದ್ಯಕೀಯದಂತಹ ಲಘು ಸ್ವರೂಪದ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ದೇಹ ಪ್ರವೇಶಿಸಿದ ಬ್ಯಾಕ್ಟೀರಿಯಾಗಳು ರಕ್ತಪ್ರವಾಹದ ಮೂಲಕ ಸಂಚರಿಸಿ ಲೋಹೀಯ ಕೃತಕ ಅಂಗಾಂಗಗಳ ಮೇಲೆ ಶೇಖರಗೊಂಡು ಕಾಲಕ್ರಮದಲ್ಲಿ ಹಾನಿಯನ್ನು ಉಂಟುಮಾಡಬಹುದು.

ಹಲವು ಬಗೆಯ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಲೋಹೀಯ ಕೃತಕ ಅಂಗಾಂಗಗಳಿಗೆ ಅಂಟಿಕೊಂಡು ಅವುಗಳ ಮೇಲೆ ದೇಹದ ರೋಗ ನಿರೋಧಕ ಶಕ್ತಿ ಅಥವಾ ಔಷಧವಾಗಿ ನೀಡಲಾದ ಆ್ಯಂಟಿಬಯಾಟಿಕ್‌ಗಳಿಂದ ನಿವಾರಿಸಲಾಗದ ಭಿತ್ತಿಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆದ್ದರಿಂದ ಅವು ಹಾಗೆಯೇ ಉಳಿದುಕೊಂಡು ಸುತ್ತಲಿನ ಅಂಗಾಂಶಗಳನ್ನು ನಾಶ ಮಾಡುವ ಮೂಲಕ ಕೃತಕ ಅವಯವ ಜೋಡಣೆ ಸಡಿಲಗೊಳ್ಳಲು ಅಥವಾ ಕಾಲಕ್ರಮೇಣ ಕೀವು ಉಂಟಾಗಲು ಕಾರಣವಾಗಬಹುದು.

ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘ‌ಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು ರೋಗ ನಿರೋಧಕ ಶಕ್ತಿ ಅಥವಾ ಔಷಧವಾಗಿ ನೀಡಲಾದ ಆ್ಯಂಟಿಬಯಾಟಿಕ್‌ಗಳಿಂದ ನಿವಾರಿಸಲಾಗದ ಭಿತ್ತಿಯನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಆದ್ದರಿಂದ ಅವು ಹಾಗೆಯೇ ಉಳಿದುಕೊಂಡು ಸುತ್ತಲಿನ ಅಂಗಾಂಶಗಳನ್ನು ನಾಶ ಮಾಡುವ ಮೂಲಕ ಕೃತಕ ಅವಯವ ಜೋಡಣೆ ಸಡಿಲಗೊಳ್ಳಲು ಅಥವಾ ಕಾಲಕ್ರಮೇಣ ಕೀವು ಉಂಟಾಗಲು ಕಾರಣವಾಗಬಹುದು. ಅಳವಡಿಸಲಾದ ಕೃತಕ ಅವಯವಗಳನ್ನು ತೆಗೆದುಹಾಕದ ವಿನಾ ಈ ಸೋಂಕು ನಿವಾರಣೆಯಾಗದು. ಮೂಳೆಮುರಿತಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೃತಕ ಅವಯವಗಳನ್ನು ಜೋಡಿಸಲಾದ ಸಂದರ್ಭದಲ್ಲಿ, ಅವುಗಳ ಪಾತ್ರವು ಮುರಿದ ಮೂಳೆಗಳು ಮರುಜೋಡಣೆಗೊಳ್ಳುವವರೆಗೆ ಮಾತ್ರವಿರುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಲೋಹೀಯ ಕೃತಕ ಅವಯವವನ್ನು ತೆಗೆದುಹಾಕಿದ ಬಳಿಕ ಹೆಚ್ಚು ತೀವ್ರವಲ್ಲದ ಸೋಂಕು ದೀರ್ಘ‌ಕಾಲಿಕ ಪರಿಣಾಮ ಇಲ್ಲದೆ ಬಗೆಹರಿಯಬಹುದು

ಡಾ| ಯೋಗೀಶ್‌ ಕಾಮತ್‌, ಕನ್ಸಲ್ಟಂಟ್‌ ಸ್ಪೆಶಲಿಸ್ಟ್‌, ಹಿಪ್‌ ಮತ್ತು ನೀ ಆರ್ಥೋಪೆಡಿಕ್‌ ಸರ್ಜನ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್‌ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.