ಕೋವಿಡ್ ನಿರ್ಮೂಲನೆಗೆ ರೋಗನಿರೋಧಕ ಪಾನ್ ಲಡ್ಡು
Team Udayavani, Mar 28, 2021, 7:19 PM IST
ಕೋವಿಡ್ ಆರಂಭದ ನಂತರ ಹೊರಗಡೆ ಯಾವುದೇ ತಿನಿಸುಗಳನ್ನು ತಿನ್ನಲು ಎಲ್ಲರೂ ಭಯ ಪಡುತ್ತಿದ್ದು ಆದಷ್ಟು ಮನೆಗಳಲ್ಲಿಯೇ ತಯಾರಿಸಿದ ತಿನಿಸುಗಳನ್ನು ಸೇವಿಸುತ್ತಿದ್ದಾರೆ. ಈ ನಡುವೆ ಹೆಚ್ಚಿನ ಜನರು ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಖಾದ್ಯಗಳನ್ನು ಬಿಟ್ಟು ಕಷಾಯದ ಕಡೆ ಮುಖಮಾಡಿದ್ದಾರೆ. ಆದರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಬಾಯಿಗೂ ರುಚಿ ನೀಡಬಲ್ಲ ಪಾನ್ ಲಡ್ಡು ಕೋವಿಡ್ ಕಾಲದಲ್ಲಿ ಬರುವ ಹಬ್ಬಗಳಲ್ಲಿ ಬಹಳಾ ಉಪಯುಕ್ತವಾಗುತ್ತದೆ.
ಪಾನ್ ಲಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳೇನು?
- ತೆಂಗಿನ ಕಾಯಿ- ಇದರಲ್ಲಿ ಲಾರಿಕ್ ಆಮ್ಲ ಹಾಗೂ ಮೊನೊಲೌರಿನ್ ಎಂಬ ಅಂಶವಿದ್ದು ಇದು ದೇಹಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳು ವೈರಲ್ ಸೋಂಕಿನ ವಿರುದ್ಧ ಹೋರಾಡುತ್ತವೆ.
- ವೀಳ್ಯದೆಲೆ : ಇದರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಪೂರಕ ಅಂಶಗಳನ್ನು ಒಳಗೊಂಡಿದ್ದು, ಆಯುರ್ವೇದದ ಪ್ರಕಾರ ಇದಕ್ಕೆ ದೇಹದಲ್ಲಿರುವ ವಾತ, ಪಿತ್ತ, ಹಾಗೂ ಕಫ ವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ
- ತುಪ್ಪ
- ಹಾಲು
ಇದನ್ನೂ ಓದಿ:ಮಿಲನಾ ಈಗ ‘ಮಿಲಿ’: ಸ್ವಿಮ್ಮಿಂಗ್ ಸುತ್ತ ಸಿನಿಮಾ
ಪಾನ್ ಲಡ್ಡು ತಯಾರಿಸುವುದು ಹೇಗೆ?
-ಪಾನ್ ಲಡ್ಡನ್ನು ಅತ್ಯಂತ ಸುಲಭವಾಗಿ ತಯಾರಿಸಬಹುದು, ಮೊದಲು ವೀಳ್ಯದೆಲೆಯನ್ನು ಹಾಲಿನೊಂದಿಗೆ ಸೇರಿಸಿ ರುಬ್ಬಿಕೊಂಡು ಮಿಶ್ರಣ ಮಾಡಿಕೊಳ್ಳಿ. ನಂತರ ಒಂದು ಕಪ್ ತೆಂಗಿನ ತುರಿಯನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಿ.
– ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಹಾಕಿ ಬಿಸಿಮಾಡಿಕೊಳ್ಳಿ. ಬಿಸಿಯಾದ ತುಪ್ಪಕ್ಕೆ ತೆಂಗಿನ ಕಾಯಿ ತುರಿಯನ್ನು ಸೇರಿಸಿ ಮಂದಬೆಂಕಿಯ ಮೂಲಕ ಹುರಿದುಕೊಳ್ಳಿ ( ತೆಂಗಿನ ಕಾಯಿ ತುರಿಯ ಬಣ್ಣ ಬದಲಾಗುವವರೆಗೆ)
-ಬಿಸಿ ಮಾಡಿದ ತೆಂಗಿನ ಕಾಯಿ ತುರಿಗೆ ರುಬ್ಬಿಕೊಂಡ ವೀಳ್ಯದೆಲೆ ಹಾಗೂ ಹಾಲಿನ ಮಿಶ್ರಣವನ್ನು ಸೇರಿಸಿ ವಿಶ್ರಣ ಹಿಟ್ಟಿನ ರೂಪಕ್ಕೆ ಬರುವವರೆಗೆ ಮಂದಬೆಂಕಿಯಲ್ಲಿ ಬಿಸಿಮಾಡಿ.
-ಬಳಿಕ ಮಿಶ್ರಣವನ್ನು ಸ್ಪಲ್ಪ ಸಮಯದ ವರೆಗೆ ತಣ್ಣಗಾಗಿಲು ಬಿಟ್ಟು, ನಂತರ ಉಂಡೆಯನ್ನಾಗಿ ಮಾಡಿ ತೆಂಗಿನ ತುರಿಯ ಪುಡಿಯೊಂದಿಗೆ ಹೊರಳಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ