ತೂಕ ಇಳಿಸುವ ಬಿಲ್ವ ಜ್ಯೂಸ್
Team Udayavani, Jun 14, 2019, 4:02 PM IST
ದೇವರ ಪೂಜೆಗೆ ಅದರಲ್ಲೂ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿದೆ. ಇದು ಕೇವಲ ಪೂಜೆಗೆ ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಬಿಲ್ವಪತ್ರೆ ಮರ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ್ದ ಮಾನವನ ಆರೋಗ್ಯಕ್ಕೆ ಪೂರಕವಾಗಿದೆ. ಬಿಲ್ವ ಮರದ ಹಣ್ಣಿನಲ್ಲೂ ಆರೋಗ್ಯವರ್ಧಕ ಅಂಶಗಳಿವೆ. ಇಂಗ್ಲಿಷ್ನಲ್ಲಿ ವುಡ್ ಆ್ಯಪಲ್ ಎಂದು ಕರೆಯುವ ಬಿಲ್ವ ಹಣ್ಣಿನ ಆರೋಗ್ಯ ಪ್ರಯೋಜನಗಳ ಕುರಿತು ಸಾಕಷ್ಟು ಮಂದಿಗೆ ತಿಳಿದಿಲ್ಲ. ಈ ಔಷಧೀಯ ಮರದ ಪ್ರಮುಖ ಗುಣವೆಂದರೆ ತೂಕ ಇಳಿಕೆಗೆ ನೆರವಾಗುವುದು. ಬಿಲ್ವ ಹಣ್ಣಿನ ರಸದಿಂದ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ಓದಿ.
ಜೀರ್ಣಕ್ರಿಯೆಗೆ ಸಹಕಾರಿ
ಈ ಹಣ್ಣಿನಲ್ಲಿ ಫೈಬರ್ ಹೇರಳವಾಗಿದ್ದು ಕರುಳುಗಳ ಮೂಲಕ ತ್ಯಾಜ್ಯದ ಮೃದುವಾದ ಚಲನೆಗೆ ಸಹಕಾರಿಯಾಗಿದೆ. ಮಲಬದ್ಧತೆ ತಡೆಯುವಲ್ಲಿ ಸಹಾಯ ಮಾಡುತ್ತದೆ. ಸಂಶೋಧನೆಗಳು ಫೈಬರ್ ಸೇವನೆ ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಸಾಬೀತು ಪಡಿಸಿವೆ.
ನೈಸರ್ಗಿಕ ಸಿಹಿಯ ಅಂಶ
ಬೇಸಗೆ ಶಾಖದಿಂದ ದೇಹ ತಂಪಾಗಿಸಲು ಪರಿಪೂರ್ಣ ಪಾನೀಯವಲ್ಲದಿದ್ದರೂ ನೈಸರ್ಗಿಕ ಸಿಹಿ ಅಂಶವನ್ನು ಹೊಂದಿದೆ. ತೂಕ ಕಳೆದುಕೊಳ್ಳಲು ಇದು ಸೂಕ್ತ. ರುಚಿ ಹೆಚ್ಚಿಸಲು ರಸಕ್ಕೆ ಹೆಚ್ಚುವರಿ ಸಕ್ಕರೆಯನ್ನು ಸೇರಿಸುವ ಅಗತ್ಯವಿಲ್ಲ. ತೂಕ ಇಳಿಕೆಗೆ ಹೆಚ್ಚು ಸಕ್ಕರೆ ಎಂದಿಗೂ ಪೂರಕವಲ್ಲ.
ಕ್ಯಾಲೋರಿಗೆ ಗುಡ್ಬೈ
ವ್ಯಾಯಾಮದ ಅನಂತರ ಎನರ್ಜಿ ಪಾನೀಯಕ್ಕಾಗಿ ಉತ್ತಮ ನೈಸರ್ಗಿಕ ಪಾನೀಯ ಹುಡುಕುತ್ತಿದ್ದರೇ ಈ ಹಣ್ಣಿನ ರಸವನ್ನು ಆಯ್ದುಕೊಳ್ಳಿ. ಫೈಬರ್ ಅಂಶವಿರುವ ಈ ಹಣ್ಣಿನ ರಸ ಕ್ಯಾಲೋರಿ ತಗ್ಗಿಸುತ್ತದೆ.ದೇಹದಲ್ಲಿನ ಆರಂಭಿಕ ನೀರಿನ ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. 250 ಎಂಎಲ್ ನಷ್ಟು ರಸ ಸುಮಾರು 140-150 ಕ್ಯಾಲೋರಿ ಹೊಂದಿದೆ. ಶಕ್ತಿ ಹೆಚ್ಚಳ ಒಂದು ಲೋಟದಷ್ಟು ಬಿಲ್ವ ಹಣ್ಣಿನ ರಸ ಟ್ಯಾನಿನ್, ಕ್ಯಾಲ್ಸಿಯಮ್, ಪಾಸ್ಫರಸ್, ಪ್ರೊಟೀನ್, ವಿಟಮಿನ್ ಸಿ ಹಾಗೂ ಕಬ್ಬಿಣದಂತ ಪೋಷಕಾಂಶಗಳಿಂದ ಕೂಡಿರುವುದರಿಂದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಣ್ಣಿನ ರಸ ಹೊಟ್ಟೆ ಪೂರ್ಣವಾಗಿರುವ ಅನುಭವವನ್ನು ನೀಡುತ್ತದೆ.
- ಆರ್.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!