ನಾವು ಮುಖ ಕವಚವನ್ನು ಏಕೆ ಧರಿಸಬೇಕು?


Team Udayavani, May 25, 2021, 2:48 PM IST

cats

1 ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೆ ಕೋವಿಡ್‌ ಬಂದಿದೆ, ಯಾರಿಗೆ ಕೋವಿಡ್‌ ಬಂದಿಲ್ಲ ಮತ್ತು ಯಾರಿಗೆ ಕೋವಿಡ್‌ ಲಸಿಕೆಯಾಗಿದೆ, ಆಗಿಲ್ಲ ಎಂದು ಎಲ್ಲರಿಗೂ ಗೊತ್ತಾಗುವುದಿಲ್ಲ. ಆದ್ದರಿಂದ ಸಾರ್ವತ್ರಿಕ ಮಾಸ್ಕ್ ಧಾರಣೆ ಕೊರೋನಾ ರೋಗದ ಸೋಂಕನ್ನು ತಡೆಯಲು ಸಹಾಯಮಾಡುತ್ತದೆ ಎಂದು ಪರಿಣಿತರು ಸಲಹೆ ಮಾಡಿದ್ದಾರೆ.

2 ಒಬ್ಬ ವ್ಯಕ್ತಿ ನನಗೆ ಕೋವಿಡ್‌ ಬಂದು ಹೋಗಿಯಾಗಿದೆ, ನಾನು ಮಾಸ್ಕ್ ಧರಿಸುವುದಿಲ್ಲ ಹೇಳಿದಲ್ಲಿ ಆತ/ಆಕೆಗೆ ನಾವು ಪರವಾಗಿಲ್ಲ, ಮಾಸ್ಕ್ ಧರಿಸುವುದು ಬೇಡ ಎಂದು ಹೇಳಿ ಸಹಕರಿಸಿದಲ್ಲಿ ಅದೇ ರೀತಿ ಇನ್ನೂ ಹತ್ತೋ ನೂರೋ ಜನರು ನಮಗೂ ಕೋವಿಡ್‌ ಬಂದಾಗಿದೆ- ನಾವೂ ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದಲ್ಲಿ, ಎಲ್ಲರಿಗೂ ಕೋವಿಡ್‌ ಬಂದು ಹೋಗಿದೆ ಎಂದು ಪರಿಶೀಲಿಸುವುದಾದರೂ ಹೇಗೆ?

3 ಒಮ್ಮೆ ಕೋವಿಡ್‌ ಬಂದವರಿಗೆ ಮತ್ತೂಮ್ಮೆ ಬರುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜವಲ್ಲ. ಇದರ ಸಂಭವನೀಯತೆ ಕಮ್ಮಿ ಇದ್ದರೂ ಯಾರಿಗೆ ಮತ್ತೆ ಬರಬಹುದು,ಯಾರಿಗೆಬರಲಾರದುಎಂದುಹೇಳಲಿಕ್ಕೆ, ಊಹಿಸಲಿಕ್ಕೆ ನಮ್ಮಲ್ಲಿ ಪರಿಕರವಿಲ್ಲ.

4 ಕೋವಿಡ್‌ ಲಸಿಕೆ ತೀವ್ರತರವಾದ ಕೋವಿಡ್‌ ಬರುವುದನ್ನು ಮಾತ್ರ ತಡೆಗಟ್ಟುತ್ತದೆ. ಎಲ್ಲಪ್ರಮುಖ ಆರೋಗ್ಯ ಸಂಸ್ಥೆಗಳ ಮಾರ್ಗಸೂಚಿಗಳ ಪ್ರಕಾರ, ಕೋವಿಡ್‌ ಲಸಿಕೆಯ ನಂತರ ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಬಳಸುವುದು ಒಳ್ಳೆಯದು. ಮಾಸ್ಕ್ ಈ ಬಗೆಯ ಸುರಕ್ಷಾ ಕ್ರಮ.

5 ನಮಗೆ ಕೋವಿಡ್‌ ಬಂದಿರಲಿ ಅಥವಾ ನಾವು ಕೋವಿಡ್‌ ಲಸಿಕೆ ತೆಗೆದುಕೊಂಡಿರಲಿ, ನಾವು ಸೋಂಕನ್ನು ಇನ್ನೊಬ್ಬರಿಗೆ ಹರಡುತ್ತೀವೋ ಇಲ್ಲವೋ ಅನ್ನುವುದು ಇನ್ನೂ ವಿವಾದಾಸ್ಪದ ವಿಷಯ. ಈ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಪ್ರಮಾಣ ಕಮ್ಮಿಯಿರಬಹುದು. ಆದರೆ, ಯಾರಿಂದ ಯಾರಿಗೆ ಸೋಂಕು ಹರಡುತ್ತದೆ ಎಂದು ಹೇಳಲಾಗುವುದಿಲ್ಲ.

6 ಮಾಸ್ಕ್ ಧರಿಸಬೇಕೇ ಬೇಡವೇ ಅನ್ನುವುದು ಈ ಪ್ಯಾಂಡೆಮಿಕ್‌ ಶುರುವಾದಾಗಿನಿಂದ ಬಹುಚರ್ಚೆಗೆ ಒಳಗಾದ ವಿಷಯ. ನಮಗೆ ಬೇಕಾದ ಹೈಪಾಥಿಸಿಸ್‌ಗೆ ತಕ್ಕಹಾಗೆ ವೈದ್ಯಕೀಯ ಜರ್ನಲ್‌ ಗಳು ಪೂರಕವಾದ ಸಾಕ್ಷಿಯನ್ನು ಒದಗಿಸಬಹುದು. ಇಂಥ ಸಮಯದಲ್ಲಿ ನಮಗಿರುವ ಆಧಾರ ಪರಿಣಿತ ಸಮಿತಿಗಳು ಆಗಾಗ್ಗೆ ಒದಗಿಸುವ ಮಾರ್ಗಸೂಚಿಗಳು. ಈ ಎಲ್ಲ ಮಾರ್ಗಸೂಚಿಗಳನ್ನು ನಾವು ಆದಷ್ಟೂ ಅನುಸರಿಸಲು ಪ್ರಯತ್ನ ಪಡಬೇಕು ಎಂದು ನಮ್ಮ ಅನಿಸಿಕೆ.

7 ಅಮೆರಿಕಾದಲ್ಲಿ ಮಾಸ್ಕ್ ಕಡ್ಡಾಯವನ್ನು ಸಡಿಲಗೊಳಿಸಿರುವುದು ಬಹಳಷ್ಟು ಜನಕ್ಕೆಕೋವಿಡ್‌ ಸೋಂಕು ತಗುಲಿದೆ, ಹಾಗಾಗಿ ಅವರು ಸುರಕ್ಷಿತರು ಎಂಬ ಆಧಾರದ ಮೇಲೆ ಅಲ್ಲ. ಸಾಕಷ್ಟು ಜನ ಲಸಿಕೆ ತೆಗೆದುಕೊಂಡಿದ್ದಾರೆ ಎಂಬ ಅಂಶದಿಂದ.

8 ಅಮೇರಿಕಾದಲ್ಲಿ ಮಾಸ್ಕ್ ಕಡ್ಡಾಯ ಸಡಿಲ ಗೊಂಡಿದ್ದರೂ ವೈದ್ಯಕೀಯ ಸಿಬ್ಬಂದಿ, ವಿಮಾನ ನಿಲ್ದಾಣ ಮತ್ತು ವಿಮಾನಗಳು, ಶಾಲೆಗಳು, ಜೈಲು, ನಿರಾಶ್ರೀತರ ತಾಣಗಳು ಇತರೇ ಜಾಗದಲ್ಲಿಇನ್ನೂಮಾಸ್ಕ್ ಹಾಕಬೇಕೆಂಬ ನಿಯಮವಿದೆ.

9 ಈ ಮಾಸ್ಕ್ ಕಡ್ಡಾಯ ಸಡಿಲಗೊಂಡದ್ದು ಅಮೆರಿಕಾದಲ್ಲಿ ನಡೆದ ಸಂಶೋಧನೆಗಳಿಂದ. ಅಂದರೆ ಫೈಜರ್‌ ಮತ್ತು ಮಡರ್ನಾ ಲಸಿಕೆ ತೆಗೆದುಕೊಂಡವರ ಮೇಲೆ ನಡೆದ ಸಂಶೋಧನೆಗಳಿಂದ. ಭಾರತದ ಲಸಿಕೆಗಳಾದ ಕೋವಿಶೀಲ್ಡ… ಮತ್ತು ಕೋವ್ಯಾಕ್ಸಿನ್‌ ತೆಗೆದುಕೊಂಡವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. 10ಆದ್ದರಿಂದ ಎಲ್ಲ ವೈಜ್ಞಾನಿಕ ವರದಿಗಳೂ, ನಿಮಗೆ ಕೋವಿಡ್‌ ಬಂದು ಗುಣವಾಗಿದ್ದರೂ, ಕೋವಿಡ್‌ ಲಸಿಕೆ ತೆಗೆದುಕೊಂಡಿದ್ದರೂ ನೀವು ಸಾರ್ವತ್ರಿಕ ಸುರಕ್ಷಾ ಕ್ರಮಗಳನ್ನು ಪಾಲಿಸಿ ಎಂದೇ ಹೇಳುತ್ತವೆ.

ಡಾಕ್ಟ್ರ ಸಲಹೆ : ಡಾ. ಗುರುಪ್ರಸಾದ ಕಾಗಿನೆಲೆ 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.