ಚಳಿಗಾಲ: ದೇಹದ ತೂಕ ಹೆಚ್ಚುವ ಕಾಲ
ಹೆಚ್ಚು ತಿನ್ನುವುದು, ಕಳಪೆ ಆಹಾರ ಆಯ್ಕೆ ಮಾಡುವುದು, ಉದಾಸೀನತೆ ಉಂಟಾಗುತ್ತದೆ.
Team Udayavani, Dec 29, 2020, 11:35 AM IST
Representative Image
ಚುಮುಚುಮು ಚಳಿಗೆ ಮತ್ತಷ್ಟು ಹೊತ್ತು ಹೊದಿಕೆ ಹೊದ್ದು ಮಲಗುವಾಸೆ, ಸಂಜೆಯಾಗುತ್ತಲೇ ಕುರುಕಲು ತಿಂಡಿಯನ್ನು ಮೆಲ್ಲುವಾಸೆ..ಹತ್ತಿಕ್ಕಲಾಗದ ಬಯಕೆಯ ನಡುವೆ ವ್ಯಾಯಾಮ, ಡಯಟ್ ಚಾರ್ಟ್ ಅನ್ನು ಮರೆತು ಬಿಡುತ್ತೇವೆ. ಇದರಿಂದ ಚಳಿಗಾಲದಲ್ಲಿ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ. ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಇವಿಷ್ಟೇ ಕಾರಣವಲ್ಲ. ಇನ್ನೂ ಹಲವಾರಿದೆ. ಅವುಗಳಲ್ಲಿ ಮುಖ್ಯವಾದುದು.
ಕಡಿಮೆ ವ್ಯಾಯಾಮ
ಬೆಳಗ್ಗೆ ಏಳುವಾಗ ಲೇಟಾಯಿತೆಂದೋ ಅಫೀಸ್ಗೆ ಹೋಗೋ ತರಾತುರಿಯೋ ಅಥವಾ ಮತ್ತಷ್ಟು ಹೊತ್ತು ಮಲಗುವ ಬಯಕೆಯಿಂದಲೋ ಚಳಿಗಾಲದಲ್ಲಿ
ವ್ಯಾಯಾಮ ಕಡಿಮೆಯಾಗಿರುತ್ತದೆ. ಅದರಲ್ಲೂ ಹೊರಗೆ ಹೋಗಿ ವ್ಯಾಯಾಮ ಮಾಡುವ ಮನಸ್ಸಾಗುವುದೇ ಇಲ್ಲ. ಮಾಡಿದರೂ ಆರಂಭದಲ್ಲಿ ಸ್ವಲ್ಪ ಉದಾಸೀನತೆ ತೋರಿ ದೇಹಕ್ಕೆ ಸರಿಯಾದ ಪ್ರಮಾಣದ ವ್ಯಾಯಾಮ ಸಿಗುವುದಿಲ್ಲ. ಇದರಿಂದ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ.
ಸೀಸನಲ್ ಎಫೆಕ್ಟಿವ್ ಡಿಸಾರ್ಡರ್
ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡದೇ ಇರುವುದರಿಂದ ಇದು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ ಎನ್ನಲಾಗುತ್ತದೆ. ಇದು ಒಂದು ರೀತಿಯ ಮಾನಸಿಕ ಖನ್ನತೆಯಾಗಿದೆ. ಇದರಿಂದ ಹೆಚ್ಚು ತಿನ್ನುವುದು, ಕಳಪೆ ಆಹಾರ ಆಯ್ಕೆ ಮಾಡುವುದು, ಉದಾಸೀನತೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲು ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಹೊತ್ತು ಕಳೆಯುವುದು ಅತ್ಯಗತ್ಯ.
ಆಹಾರದ ಆಯ್ಕೆ
ಚಳಿಗಾಲದಲ್ಲಿ ನಾವು ಹೆಚ್ಚಾಗಿ ಕಾರ್ಬ್, ಕೊಬ್ಬು ತುಂಬಿದ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಇದರ ಬದಲು ಕೆನೆ ಸೂಪ್ ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:ಬೆಂಗಳೂರಿಗೂ ಕಾಲಿಡ್ತು ಯುಕೆ ವೈರಸ್! ಹತ್ತು ದಿನವಾದರೂ ಪತ್ತೆಯಾಗಿಲ್ಲ 361 ಪ್ರಯಾಣಿಕರು!
ಕಡಿಮೆ ನೀರು ಸೇವನೆ
ಚಳಿಗಾಲದಲ್ಲಿ ನೀರು ಕಡಿಮೆ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಕೊಬ್ಬು ಸಂಗ್ರಹವಾಗಿ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ.
ಹಾರ್ಮೋನಿನಲ್ಲಿ ಏರುಪೇರು
ಋತುವಿನ ಬದಲಾವಣೆ ಹಾರ್ಮೋನಿನಲ್ಲಿ ಏರುಪೇರು ಉಂಟಾಗುತ್ತದೆ. ಇದು ಮಧುಮೇಹ, ಥೈರಾಯ್ಡ ನಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚು ತಿನ್ನುವ ಬಯಕೆ ಉಂಟಾಗುವುದು ಸಹಜ. ಹೀಗಾಗಿ ಇಂಥವರು ಹಾರ್ಮೋನ್ಗಳು ನಿಯಂತ್ರಣದಲ್ಲಿವೆಯೇ ಎಂಬುದನ್ನು ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ