ಉಲ್ಲಾಸ ಭರಿತ ಜೀವನಕ್ಕೆ ಯೋಗ
ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಉಲ್ಲಾಸ ನೀಡುವ ಯೋಗಾಸನವು ನಮ್ಮನ್ನು ಸದೃಢಗೊಳಿಸುತ್ತದೆ
Team Udayavani, Jun 28, 2021, 8:34 AM IST
ಆರೋಗ್ಯವಾಗಿರಲು ಕೇವಲ ಧ್ಯಾನ, ಪ್ರಾಣಾಯಾಮ ಮಾಡಿದರೆ ಸಾಕಾಗೋದಿಲ್ಲ. ಇದರೊಂದಿಗೆ ಜೀವನ ಕ್ರಮವನ್ನು ಶುದ್ಧವಾಗಿರಿಸಿ ಕೊಳ್ಳುವುದು ಬಹುಮುಖ್ಯ. ಈಗೀನ ಜೀವನ ಶೈಲಿ ನಮ್ಮ ದೇಹವನ್ನು ಮಾತ್ರವಲ್ಲ ಮನಸ್ಸಿನ ಆರೋಗ್ಯವನ್ನೂ ಕೆಡಿಸುತ್ತದೆ. ಒಂದು ಕಡೆ ವರ್ಕ್ಫÅಮ್ ಹೋಮ್, ಇನ್ನೊಂದು ಕಡೆ ಮನೆಯಲ್ಲೇ ಸಿಗುವ ಬಿಸಿಬಿಸಿ ತಿನಿಸುಗಳೊಂದಿಗೆ ಯಾವುದೇ ಆಯಾಸವಿಲ್ಲದ ಜೀವನಕ್ರಮ ದೇಹ ಮತ್ತು ಮನಸ್ಸಿಗೆ ಜಡತ್ವ ತಂದುಕೊಟ್ಟಿದೆ.
ಇದರಿಂದ ದಿನೇದಿನೇ ದೇಹದ ತೂಕ ಹೆಚ್ಚಾಗುತ್ತಿದೆ. ದೇಹದ ತೂಕ ಹೆಚ್ಚಾದರೆ ಮನಸ್ಸು ಮಾತ್ರವಲ್ಲ ದೇಹದ ಮೇಲೂ ಗಂಭೀರ ಪರಿಣಾಮ ಬೀರುವುದು. ಹೀಗಾಗಿ ನಿತ್ಯ ಜೀವನದಲ್ಲಿ ಯೋಗಾಭ್ಯಾಸ ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ.
ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಉಲ್ಲಾಸ ನೀಡುವ ಯೋಗಾಸನವು ನಮ್ಮನ್ನು ಸದೃಢಗೊಳಿಸುತ್ತದೆ. ಯೋಗವು ದೇಹದ ಅಧಿಕ ತೂಕವನ್ನು ಇಳಿಸಿ ಆರೋಗ್ಯವನ್ನು ಸುವ್ಯವಸ್ಥಿತವಾಗಿ ಇರಿಸುವಲ್ಲಿ ಪರಿಣಾಮಕಾರಿಯಾಗಿದೆ.
ನಿರಂತರ ಯೋಗಾಭ್ಯಾಸದಿಂದ ಹೃದಯ ಬಡಿತ ಸಾಮಾನ್ಯ ಸ್ಥಿತಿ ತಲುಪಿ ರಕ್ತ ಪರಿಚಲನೆ ಉತ್ತಮಗೊಳ್ಳುವುದು. ಹೃದಯ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತದೆ. ದೇಹದ ತಪಾಮಾನ ಕ್ರಿಯಾಶೀಲವಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಜೀರ್ಣಾಂಗ ವ್ಯೂಹದ ಕಾರ್ಯವನ್ನು ಸಮರ್ಪಕಗೊಳಿಸುತ್ತದೆ. ಈ ಮೂಲಕ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಆರೋಗ್ಯಕ್ಕೆ ಬೇಕಾದ ಸಂಪೂರ್ಣ ಪೋಷಣೆ ದೊರೆಯಲು ಸಾಧ್ಯವಾಗುವುದು.
ಯೋಗವು ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅದರಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕರುಳನ್ನು ಸ್ವಚ್ಛಗೊಳಿಸುತ್ತದೆ. ಈ ಮೂಲಕ ದೇಹಕ್ಕೆ ರೋಗಗಳ ವಿರುದ್ಧ ಹೋರಾಡಲು ಬೇಕಾದ ಚೈತನ್ಯ ಸಿಗುವುದು.
ಮೂಳೆ, ಸ್ನಾಯುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ದೇಹಕ್ಕೆ ಶಕ್ತಿ ದೊರೆತು ಬಳಲಿಕೆ, ಸುಸ್ತು ದೂರವಾಗುವುದು.
ಥೈರಾಯ್ಡ ಸಮಸ್ಯೆ ನಿವಾರಣೆ ಯಾಗುವುದು.
ದೇಹದ ಅಧಿಕ ಕೊಬ್ಬು ಕಡಿಮೆ ಯಾಗಿ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮಗೊಳ್ಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ