ಜೀವನ್ಮುಖಿ: ಇರುವೆಗಳಿಗಿರುವ ಆದ್ಯತೆ ನಮಗೂ ಇರಲಿ


Team Udayavani, Aug 28, 2019, 7:15 AM IST

B-Positivee—Ants

ಇರುವೆಗಳ ಸಭೆ ನಡೆಯುತ್ತಿತ್ತು. ಕಪ್ಪಿರುವೆ, ಕಟ್ಟಿರುವೆ, ದೇವರ ಇರುವೆ, ಕೆಂಪಿರುವೆ ಎಲ್ಲವೂ ಸೇರಿದ್ದವು. ಒಟ್ಟೂ ಇರುವೆ ಸಮುದಾಯದ ವಾರ್ಷಿಕ ಸಭೆ. ಇರುವೆಯ ನಾಯಕ ಮಾತನಾಡುತ್ತಿದ್ದ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ, ತಮ್ಮ ಆಹಾರಗಳಿಗೆ ಕುತ್ತು ಬರುತ್ತಿರುವ ಬಗ್ಗೆ, ಮನುಷ್ಯರು ನಮ್ಮನ್ನು ಕೊಲ್ಲಲು/ದೂರವಿಡಲು ಬಳಸುತ್ತಿರುವ ನಾನಾ ಮಾರ್ಗಗಳ ಬಗ್ಗೆ ಹೀಗೆ ಎಲ್ಲದರ ಬಗ್ಗೆಯೂ ಅವನು ಮಾಹಿತಿ ನೀಡುತ್ತಿದ್ದ. ಎಲ್ಲ ಇರುವೆಗಳೂ ಭಾಷಣವನ್ನು ಕೇಳುತ್ತಿದ್ದವು. ಹಾಗಾಗಿ, ಬೇರೆ ಯಾವ ಭಾಗದಲ್ಲೂ ಇರುವೆಗಳು ಇರಲಿಲ್ಲ.

ಅಷ್ಟರಲ್ಲಿ ಒಂದು ಇರುವೆ ಬಡಬಡನೆ ಓಡೋಡಿ ಬಂದಿತು. ಸಭೆಗೆ ತಡವಾಗಿದ್ದರಿಂದ ಇದು ಓಡೋಡಿ ಬರುತ್ತಿದೆ ಎಂದು ಎಲ್ಲರೂ ಅಂದುಕೊಂಡರು. ಆದರೆ, ಅದು ಯಾವುದೋ ಸುದ್ದಿಯನ್ನು ಹೊತ್ತು ತಂದಿತ್ತು. ಹಿಂದಿನ ಸಾಲಿಗೆ ಬಂದ ಆ ಇರುವೆ ತನ್ನ ಗೆಳೆಯನಲ್ಲಿ, ‘ಅಲ್ಲೊಂದು ಮನೆಯ ಗೋದಾಮಿನಲ್ಲಿ ಸಕ್ಕರೆ ರಾಶಿ ಇದೆ.  ಇಲ್ಲಿರುವ ನಮಗೆಲ್ಲರಿಗೂ ಸಾಕಾಗುವಷ್ಟು ಇದೆ. ಏನು ಮಾಡೋದು’ ಎಂದು ಕೇಳಿತು. ಅದಕ್ಕೆ ‘ಸದ್ಯಕ್ಕೆ ಸುಮ್ಮನಿರು. ಸಭೆ ನಡೆಯುತ್ತಿದೆ’ ಎಂದು ಹೇಳಿದ ಗೆಳೆಯ.

ಇದಕ್ಕೇಕೋ ಸಮಾಧಾನವಾಗಲಿಲ್ಲ. ಮುಂದಿನ ಸಾಲಿನಲ್ಲಿ ಮತ್ತೊಬ್ಬ ಗೆಳೆಯನಿಗೆ ಅದೇ ವಿಷಯ ತಿಳಿಸಿತು. ಅಲ್ಲೂ ಸಿಕ್ಕ ಉತ್ತರವೆಂದರೆ, ‘ಹತ್ತು ನಿಮಿಷ, ಸಭೆ ಮುಗಿದ ಕೂಡಲೇ ಹೊರಡೋಣ’ . ಮತ್ತೂ ಬೇಸರವಾಯಿತು ಅದಕ್ಕೆ. ಮತ್ತೆ ಮುಂದಿನ ಸಾಲಿಗೆ ಹೋಯಿತಾದರೂ ಯಾರೂ ಕಿವಿಗೊಡಲಿಲ್ಲ. ಹಾಗೆಂದು ಇದು ಉತ್ಸಾಹ ಕಳೆದುಕೊಳ್ಳಲಿಲ್ಲ.

ಮತ್ತೆ ಮುಂದಿನ ಸಾಲಿಗೆ ಹೋಗಿ ಒಬ್ಬ ಹಿರಿಯನನ್ನು ಹುಡುಕಿ, ‘ಅಜ್ಜ, ಅಲ್ಲೊಂದು ಮನೆಯ ಗೋದಾಮಿನಲ್ಲಿ ಸಾಕಷ್ಟು ಸಕ್ಕರೆ ಇದೆ. ಇಲ್ಲಿರುವವರಿಗೆಲ್ಲಾ ಸಾಕಾಗುವಷ್ಟು ಇದೆ. ಈಗಲೇ ಬಂದರೆ ತರಬಹುದು’ ಎಂದು ವಿವರಿಸಿತು. ಅಜ್ಜ ಎರಡು ಕ್ಷಣ ಯೋಚಿಸಿದ. ಬಳಿಕ ಎದ್ದು ನಿಂತು ತನ್ನ ಮುಖಂಡನನ್ನು ಕುರಿತು, ‘ಸ್ವಾಮಿ, ನನ್ನ ಮೊಮ್ಮಗಳು ಒಂದು ಸುದ್ದಿ ತಂದಿದ್ದಾಳೆ’ ಎಂದು ವಿಷಯ ತಿಳಿಸಿತು.

ಕೂಡಲೇ ನಾಯಕ ಮಾತನಾಡುತ್ತಿದ್ದುದನ್ನು ನಿಲ್ಲಿಸಿ, ‘ಎಲ್ಲರೂ ಈಗಲೇ ಹೊರಡಬೇಕು. ನಾವು ನಂತರ ಮಾತನಾಡೋಣ. ಈಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳೋಣ. ಎಲ್ಲರೂ ಸಾಲಾಗಿ ಅವಳನ್ನು ಹಿಂಬಾಲಿಸಿ. ಎಲ್ಲರೂ ಹೋಗಿ ಸಕ್ಕರೆ ಮೂಟೆಯನ್ನು ತರೋಣ’ ಎಂದು ಸೂಚಿಸಿದ. ಎಲ್ಲರೂ ಸಾಲಾಗಿ ಹೊರಟರು ಸಕ್ಕರೆ ಗೋದಾಮಿಗೆ.

ಬದುಕಿನಲ್ಲಿ ಎಲ್ಲದಕ್ಕೂ ಆದ್ಯತೆ ಎಂಬುದಿರುತ್ತದೆ. ಅದನ್ನು ಸರಿಯಾಗಿ ಗಮನಿಸಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಯಶಸ್ಸು.

– ಮಿಲರೇಪ

ಟಾಪ್ ನ್ಯೂಸ್

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.