ಜೀವನ್ಮುಖಿ: ಬದುಕಿನಲ್ಲಿ ಭರವಸೆಯ ಬೆಳಕಿಗೆ ಕಾಯುವವರು ನಾವು!


Team Udayavani, Aug 30, 2019, 5:30 AM IST

Positive-726

ಸಾಗರದ ಕಥೆಯೊಂದಿದೆ…
ಒಮ್ಮೆ ಒಂದು ಮಗು ಬಂದು ಸಾಗರ ತೀರದಲ್ಲಿ ನಿಂತು ನೋಡುತ್ತಿತ್ತಂತೆ. ಎಷ್ಟು ಹೊತ್ತಾದರೂ ನೀರಿಗೆ ಇಳಿಯಲು ಏಕೋ ಹಿಂಜರಿಕೆ. ನೀರಿಗೆ ಇಳಿಯಲೇ ಇಲ್ಲ. ಸಮುದ್ರಕ್ಕೂ ಕಂಡು ಬೇಸರವಾಗತೊಡಗಿತು. ಎಷ್ಟು ಮುದ್ದಾದ ಮಗು, ನನ್ನಲ್ಲಿ ಆಡುತ್ತಿಲ್ಲವಲ್ಲ ಎಂದು ಮೆಲ್ಲಗೆ ಶಾಂತವಾಗತೊಡಗಿತು. ಬಳಿಕ, ಮಗುವಲ್ಲಿ ಬಂದು ಸಮುದ್ರ ಕೇಳಿತಂತೆ, ‘ಯಾಕೋ ಮಗು, ಬರುವುದಿಲ್ಲವೇ?’ ಎಂದು. ಅದಕ್ಕೆ ಮಗು, ’ಇಲ್ಲ’ ಎಂದು ಸ್ಪಷ್ಟವಾಗಿ ಹೇಳಿದ. ಮತ್ತೆ ಸಮುದ್ರ, ’ಹಾಗಾದರೆ ನಿನಗೆ ನೀರು ಇಷ್ಟವಿಲ್ಲವೇ?’ ಎಂದು ಕೇಳಿತು. ಅದಕ್ಕೂ ಮಗು, ’ಇದೆ, ಆದರೆ  ಇದಲ್ಲ’ ಎಂದಿತು.

ಸಮುದ್ರಕ್ಕೆ ಅಚ್ಚರಿಯಾಯಿತು. ‘ನೀರಿಗ್ಯಾವ ವ್ಯತ್ಯಾಸವಿದೆ? ಅಲ್ಲಿಯದು, ಇಲ್ಲಿಯದು ಅಂತ. ಆ ನೀರು, ಈ ನೀರು ಅಂತ. ಎಲ್ಲ ಒಂದೇ. ಬಾ, ಒಮ್ಮೆ ಆಡು ನಿನಗೆ ಗೊತ್ತಾಗುತ್ತೆ’ ಎಂದು ಹೇಳಿತಂತೆ. ಅದರೂ ಮಗು ತನ್ನ ನಿರ್ಧಾರ ಬದಲಿಸಲಿಲ್ಲ. ಸಮುದ್ರಕ್ಕೇಕೋ ಅನುಮಾನ ಮೂಡಿತು. ’ನನ್ನನ್ನು ಕಂಡರೆ ‘ಯವೇ?’ ಎಂದು ಕೇಳಿದಾಗ ಮೆಲ್ಲನೆ ಮಗು, ಹೌದೋ ಅಲ್ಲವೋ ಎಂಬಂತೆ ತಲೆಯಾಡಿಸಿತು.

ತತ್ ಕ್ಷಣ ಸಮುದ್ರ, ’ಅದಕ್ಕೇನೂ ಭಯ ಪಡಬೇಡ. ಏನೂ ಆಗದು. ನಾನೇ ಆ ಸಮುದ್ರ. ನಿನಗೇನೂ ಆಗುವುದಿಲ್ಲ’ ಎಂದು ಹೇಳಿ ಭರವಸೆ ಕೊಟ್ಟ ತಕ್ಷಣ ಮಗುವಿನ ಮುಖದಲ್ಲಿ ನಗೆ ಅರಳಿತು. ಪುಟ್ಟ ಪಾದಗಳೊಡನೆ ಓಡಿ ಹೋಗಿ ಸಮುದ್ರಕ್ಕೆ ಬಿತ್ತು.

ಬದುಕಲ್ಲೂ ಅಷ್ಟೇ. ಒಂದು ಭರವಸೆಗೆ ಕಾಯುತ್ತಿರುತ್ತೇವೆ. ಅದು ಸಿಕ್ಕರೆ ಎಷ್ಟು ದೂರವಾದರೂ ನಡೆದು ಹೋಗುತ್ತೇವೆ. ಇದು ಖಂಡಿತಾ ಸುರಕ್ಷತೆಯ ನೆಲೆಯಲ್ಲ, ಭರವಸೆಯದ್ದು. ಮತ್ತೊಂದು ಪುಟ್ಟ ಮಗು ಹೀಗೆ ಹೊರಗೆ ಸುರಿಯುತ್ತಿರುವ ಮಳೆ ಕಂಡು, ಅಂಗಳದಲ್ಲಿ ಹರಿದು ಹೋಗುವ ನೀರಿನಲ್ಲಿ ತೇಲಿಬಿಡಲು ಕಾಗದದ ದೋಣಿ ಹಿಡಿದು ಸಜ್ಜಾಗಿದ್ದಾನೆ.

ಆದರೆ ಅವನು ನೋಡುತ್ತಿರುವುದು ಮತ್ತ್ಯಾವುದೋ ಗಾಳಿ ಬಂದು ನನ್ನ ದೋಣಿಯನ್ನು ಎತ್ತಿಕೊಂಡು ಹೋದರೆ ಎಂಬ ಆತಂಕದಿಂದ ಆಕಾಶದತ್ತ ನೋಡುತ್ತಾನೆ. ಅಂಥದ್ದೇನೂ ಇಲ್ಲ ಎಂಬ ಗ್ಯಾರಂಟಿ ಸಿಕ್ಕ ಮೇಲೆ ದೋಣಿಯನ್ನು ತೇಲಿ ಬಿಡುತ್ತಾನೆ.

ಬದುಕು ಹಾಗೆಯೇ. ಸಮುದ್ರ ಥರವೂ ಹೌದು, ಗಾಳಿ ಥರವೂ ಹೌದು. ಅದೇ ಹೊತ್ತಿನಲ್ಲಿ ಶಾಂತವೂ ಹೌದು. ಹಾಗಾಗಿಯೇ ಭರವಸೆ ಹುಡುಕುವುದು ತಪ್ಪಲ್ಲ, ಅದು ಯಾವ ರೂಪದಲ್ಲಾದರೂ ಬರಬಹುದು. ಆದರೆ ಗ್ರಹಿಸಿ ಗುರುತಿಸುವ ಸಾಮರ್ಥ್ಯ ಇರಬೇಕು. ಇಲ್ಲದಿದ್ದರೆ ನಾವು ಮಹತ್ವದ್ದನ್ನು ಕಳೆದುಕೊಳ್ಳುತ್ತೇವೆ.

ಸಂದರ್ಭದ ಮುಖಾಮುಖಿಯಾಗುವುದು ಅತ್ಯಂತ ಅಗತ್ಯ. ಅದಾಗದೇ ಏನೂ ಸಿಗದು. ಯಾಕೆಂದರೆ ಹಲವು ಬಾರಿ ಸಂದರ್ಭಗಳು – ಸನ್ನಿವೇಶಗಳು ನಿರ್ಧಾರಗಳನ್ನು ಕೈಗೊಳ್ಳುತ್ತೇವೆಯೇ ಹೊರತು ನಮ್ಮ ಬುದ್ಧಿಯಲ್ಲ!

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

ಬ್ಯಾಂಕ್‌ ಅಧಿಕಾರಿ ಹುದ್ದೆಗಳ ನೇಮಕಾತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.