ಕೆಸುವು ಅಂದ್ರೆ ಹಸಿವು!


Team Udayavani, Aug 16, 2017, 2:35 PM IST

16-AVALU-5.jpg

ಮಳೆಗಾಲ ಬಂತೆಂದರೆ ಸಾಕು, ಎಲ್ಲಿ ನೀರು ಅಧಿಕವಾಗಿರುತ್ತದೋ ಅಲ್ಲೆಲ್ಲಾ ಕೆಸುವಿನ ಗಿಡಗಳು ಅಣಬೆಯಂತೆ ತಲೆಯೆತ್ತಿ ನಿಲ್ಲುತ್ತವೆ. ಇವುಗಳಿಂದ ಕೆಲವು ಅಪರೂಪದ ಅಡುಗೆಗಳನ್ನು ತಯಾರಿಸಬಹುದು. ಎಲೆಗಳಿಂದಷ್ಟೇ ಅಲ್ಲದೇ, ಅದರ ದಂಟುಗಳೂ ಉಪಯೋಗಕ್ಕೆ ಬರುತ್ತವೆ…

ಕೆಸುವಿನ ಕಾಲಿನ ಬೋಳುಹುಳಿ
ಬೇಕಾಗುವ ಸಾಮಗ್ರಿ: 20ರಿಂದ 25 ಕೆಸುವಿನ ದಂಟು, ಹುಣಸೆಹಣ್ಣು – 2 ಲಿಂಬೆಗಾತ್ರ, ಬೆಲ್ಲ- ಸ್ವಲ್ಪ, ಉಪ್ಪು – ರುಚಿಗೆ, ಇಂಗು- ಸಣ್ಣ ಉಂಡೆ, ತೊಗರಿಬೇಳೆ- 1 ಹಿಡಿ, ಹಸಿಮೆಣಸಿನಕಾಯಿ -5, ಎಣ್ಣೆ- ಒಗ್ಗರಣೆಗೆ, ಕೆಂಪು ಮೆಣಸಿನಕಾಯಿ – 1, ಸಾಸಿವೆ – 1 ಚಮಚ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ, ಅರಿಶಿನ – 1 ಚಿಟಿಕೆ.

ಮಾಡುವ ವಿಧಾನ : ಕೆಸುವಿನ ದಂಟಿನ ಮೇಲಿನ ಸಿಪ್ಪೆ ತೆಗೆದು, ತೊಳೆದು, ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೊಗರಿಬೇಳೆಯನ್ನೂ ಚೆನ್ನಾಗಿ ಬೇಯಿಸಿಡಿ. ಕೆಸುವಿನ ದಂಟನ್ನು ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿ. ಅದಕ್ಕೆ ಚಿಟಿಕೆ ಅರಿಶಿನ ಪುಡಿ, ಹುಣಸೆರಸ, ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಬೇಯುವಾಗಲೇ ಹಸಿರು ಮೆಣಸಿನಕಾಯಿಯನ್ನು ಉದ್ದಕ್ಕೆ ಕತ್ತರಿಸಿ ಅದಕ್ಕೆ ಹಾಕಿ. ಈಗ ಬೆಂದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊತ್ತಂಬರಿ ಸೊಪ್ಪು, ಇಂಗನ್ನು ನೆನೆಸಿದ ನೀರನ್ನು ಸೇರಿಸಿ. ಎಣ್ಣೆ, ಮೆಣಸಿನ ಕಾಯಿ, ಸಾಸಿವೆ, ಕರಿಬೇವಿನ ಒಗ್ಗರಣೆಯೊಂದಿಗೆ ಹುಳಿಯನ್ನು ಕೆಳಗಿಳಿಸಿ. ಈ ಹುಳಿಯು ತುಂಬಾ ನೀರಾಗಿರದೆ ಗಟ್ಟಿಯಾಗಿ ಗೊಜ್ಜಿನ ರೀತಿ ಇದ್ದರೆ ರುಚಿಯಾಗಿರುತ್ತದೆ.    

ಕೆಸುವಿನ ದಂಟಿನ ರಾಯತ
ಬೇಕಾಗುವ ಸಾಮಗ್ರಿ: ಕೆಸುವಿನ ದಂಟು -10ರಿಂದ 15, ತೆಂಗಿನ ತುರಿ – ಒಂದು ಬಟ್ಟಲು, ಕೆಂಪು ಮೆಣಸಿನಕಾಯಿ – 3, ಸಾಸಿವೆ-2 ಚಮಚ, ಉಪ್ಪು – ರುಚಿಗೆ, ಮೊಸರು – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆಗಾತ್ರ, ಒಗ್ಗರಣೆಗೆ – ಸಾಸಿವೆ, ಮೆಣಸಿನಕಾಯಿ, ತುಪ್ಪ, ಕರಿಬೇವು.

 ಮಾಡುವ ವಿಧಾನ : ನಾರು ತೆಗೆದ ಕೆಸುವಿನ ದಂಟನ್ನು ಸಣ್ಣಗೆ ಕತ್ತರಿಸಿ ಚೆನ್ನಾಗಿ ಬೇಯಿಸಿ. ಒಂದು ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ಮೆಣಸಿನಕಾಯಿ, ಸಾಸಿವೆ 1 ಚಮಚ, ಉಪ್ಪು, ಹುಣಸೆಹಣ್ಣು ಹಾಕಿ ಮೊಸರಿನೊಂದಿಗೆ ರುಬ್ಬಿಕೊಳ್ಳಿ. ಬೆಂದ ಮಿಶ್ರಣಕ್ಕೆ ರುಬ್ಬಿದ್ದ ಮಿಶ್ರಣ ಸೇರಿಸಿ ಒಂದು ಕುದಿ ಬರಿಸಿ ಕೆಳಗಿಡಿ. ಒಂದು ಚಮಚ ತುಪ್ಪಕ್ಕೆ ಸಾಸಿವೆ, ಕರಿಬೇವಿನೊಂದಿಗೆ ಒಗ್ಗರಣೆ ಕೊಡಿ.

ಕೆಸುವಿನ ಎಲೆಯ ಚಟ್ನಿ
ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ (ದೊಡ್ಡದಾಗಿದ್ದರೆ 2 ಎಲೆ), ತೆಂಗಿನತುರಿ – 1 ಬಟ್ಟಲು, ಹುಣಸೆಹಣ್ಣು – ಸಣ್ಣ ಲಿಂಬೆ ಗಾತ್ರ, ಇಂಗು- ಸ್ವಲ್ಪ, ಕೆಂಪು ಮೆಣಸಿನಕಾಯಿ -3, ಬೆಳ್ಳುಳ್ಳಿ- 5 ಎಸಳು, ಉದ್ದಿನಬೇಳೆ- 2 ಟೀ ಚಮಚ, ಧನಿಯ – 1/2 ಚಮಚ, ಕರಿಬೇವು, ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಹುಳುಕಿರದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿ ಒಂದು ಬಾಣಲೆಗೆ ಹಾಕಿ. ಅದಕ್ಕೆ ಸ್ವಲ್ಪ ನೀರು ಹಾಕಿ ಅರಿಶಿನ ಪುಡಿ, ಹುಣಸೆಹಣ್ಣು, ಉಪ್ಪನ್ನು ಹಾಕಿ ಚೆನ್ನಾಗಿ ಬೇಯಿಸಿ. ಬೇರೊಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕೆಂಪು ಮೆಣಸಿನಕಾಯಿ, ಧನಿಯಾ, ಉದ್ದಿನಬೇಳೆ, ಬೆಳ್ಳುಳ್ಳಿ, ಕರಿಬೇವನ್ನು ಹಾಕಿ ಕೆಂಪಗೆ ಹುರಿಯಿರಿ. ಈಗ ಬೇಯಿಸಿದ ಕೆಸುವಿನ ಎಲೆಯ ಮಿಶ್ರಣವನ್ನು ತೆಂಗಿನತುರಿಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ ಹುರಿದ ಮಿಶ್ರಣ, ಇಂಗು ಹಾಕಿ ರುಬ್ಬಿ ತೆಗೆದಿಡಿ. ಈ ಚಟ್ನಿಯು ಬಿಸಿಬಿಸಿ ಅನ್ನದೊಂದಿಗೆ ತಿನ್ನಲು ಭಾರಿ ರುಚಿಕರವಾಗಿರುತ್ತದೆ. 

ಪುಷ್ಪಾ ಎನ್‌. ಕೆ. ರಾವ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.