ಸಾಂಬಾರ್‌ ಬಸಳೆ ಸ್ಪೆಷಲ್‌


Team Udayavani, May 31, 2019, 6:00 AM IST

v-20

ನೋಡಲು ಬಸಳೆಯಂತಿಲ್ಲದೆ ಇದ್ದರೂ ಗುಣ ಮಾತ್ರ ಬಸಳೆ ಸೊಪ್ಪಿನ ಥರವೇ ಇರುತ್ತದೆ. ಹಾಗಾಗಿ ಇದನ್ನು ಸಾಂಬಾರ್‌ ಬಸಳೆ, ಸಾಂಬಾರ್‌ ಹರಿವೆ, ಬೊಂಬಾಯಿ ಹರಿವೆ ಎಂದೆಲ್ಲ ಕರೆಯುತ್ತಾರೆ. ಒಂದೆರಡು ಮಳೆಯಾದರೆ ಸಾಕು ತೋಟದ ತುಂಬೆಲ್ಲ ಪೊದೆಯಂತೆ ಬೆಳೆಯುತ್ತದೆ. ಬೇರೆ ಸೊಪ್ಪಿನ ಗಿಡಗಳಂತೆ ಇದಕ್ಕೆ ವಿಶೇಷ ಆರೈಕೆಯೇನೂ ಬೇಕಾಗಿಲ್ಲ. ಕುಡಿಯನ್ನು ತೆಗೆದು ಉಪಯೋಗಿಸುತ್ತಿದ್ದ ಹಾಗೆ ಕವಲೊಡೆಯುತ್ತಾ ಬೆಳೆಯುತ್ತದೆ. ಎಳೆಯ ದಂಟನ್ನು ಕೂಡ ಉಪಯೋಗಿಸಬಹುದು.

ಪಲ್ಯ
ಬೇಕಾಗುವ ಸಾಮಗ್ರಿ: ಸೊಪ್ಪು- ಎರಡು ಹಿಡಿ, ಹಸಿಮೆಣಸು- 2, ತೆಂಗಿನಕಾಯಿ ತುರಿ- 1/4 ಬಟ್ಟಲು, ಅರಸಿನಪುಡಿ- ಸ್ವಲ್ಪ , ಕರಿಬೇವು ಸ್ವಲ್ಪ, ಒಣಮೆಣಸು-1, ಉದ್ದಿನಬೇಳೆ- ಎರಡು ಚಮಚ, ಸಾಸಿವೆ- 1 ಚಮಚ, ಉಪ್ಪು ರುಚಿಗೆ, ಬೆಲ್ಲ ಸ್ವಲ್ಪ (ಬೇಕಿದ್ದರೆ).

ತಯಾರಿಸುವ ವಿಧಾನ: ಸೊಪ್ಪನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯ ಮೇಲೆ ಹರಡಿ. ನಂತರ ಸಣ್ಣಗೆ ಕತ್ತರಿಸಿ. ಒಂದು ಬಾಣಲೆಗೆ ಕತ್ತರಿಸಿದ ಹಸಿಮೆಣಸು, ಎಣ್ಣೆ , ಕರಿಬೇವು ಮತ್ತು ಒಗ್ಗರಣೆ ಸಾಮಾನುಗಳನ್ನು ಹಾಕಿ. ಸಾಸಿವೆ ಸಿಡಿದ ನಂತರ ಸೊಪ್ಪನ್ನು ಹಾಕಿ ನೀರನ್ನು ಚಿಮುಕಿಸಿದರೆ ಸಾಕು. ನಂತರ ಅದಕ್ಕೆ ಉಪ್ಪು , ಅರಸಿನಪುಡಿ, ಬೆಲ್ಲವನ್ನು ಹಾಕಿ ನೀರು ಆರಿದ ಮೇಲೆ ತೆಂಗಿನಕಾಯಿ ತುರಿಯನ್ನು ಬೆರೆಸಿ ಮಿಶ್ರಮಾಡಿ. ಅನ್ನದ ಜೊತೆ ಮಾತ್ರವಲ್ಲದೆ ದೋಸೆ, ಚಪಾತಿ, ರೊಟ್ಟಿಗಳಿಗೂ ರುಚಿಯಾಗಿರುತ್ತದೆ.

ಸೊಪ್ಪಿನ ಅವಿಲ್‌
ಬೇಕಾಗುವ ಸಾಮಗ್ರಿ: ಸೊಪ್ಪು 2-3 ಚಮಚ, ಹಸಿಮೆಣಸು-3, ತೆಂಗಿನತುರಿ-1/2 ಬಟ್ಟಲು, ಹುಣಸೆಹಣ್ಣು ಅಥವಾ ತುಂಬಾ ಹುಳಿಯಿರದ ಮಜ್ಜಿಗೆ- 1 ಬಟ್ಟಲು, ಜೀರಿಗೆ- 1 ಚಮಚ, ಕರಿಬೇವು ಸ್ವಲ್ಪ, ಉಪ್ಪು ರುಚಿಗೆ, ಎಣ್ಣೆ ಮತುತ ಒಗ್ಗರಣೆಗೆ ಸಾಮಾನು.

ತಯಾರಿಸುವ ವಿಧಾನ: ಸೊಪ್ಪನ್ನು ತೊಳೆದು ಸಣ್ಣಗೆ ಕತ್ತರಿಸಿ, ಹುಣಸೆ ರಸದಲ್ಲಿ ಇದನ್ನು ಬೇಯಿಸಿ. ಮಿಕ್ಸಿ ಜಾರಿನಲ್ಲಿ ತೆಂಗಿನತುರಿ, ಜೀರಿಗೆ, ಹಸಿಮೆಣಸನ್ನು ಮಜ್ಜಿಗೆಯಲ್ಲಿ ರುಬ್ಬಿಕೊಳ್ಳಿ. ಬೆಂದ ಮಿಶ್ರಣಕ್ಕೆ ಮಿಕ್ಸಿಯಲ್ಲಿದ್ದುದನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕರಿಬೇವಿನೊಂದಿಗೆ ತೆಂಗಿನೆಣ್ಣೆಯಲ್ಲಿ ಒಗ್ಗರಣೆ ಕೊಡಿ.

ಚಪಾತಿಯ ಕರಿ
ಬೇಕಾಗುವ ಸಾಮಗ್ರಿ: ಸೊಪ್ಪು- 2 ಹಿಡಿ, ಹಸಿಮೆಣಸು-2, ಚಕ್ಕೆಲವಂಗ ಸ್ವಲ್ಪ, ಒಗ್ಗರಣೆಗೆ: ಸಾಸಿವೆ, ಒಣಮೆಣಸು, ಎಣ್ಣೆ , ಉಪ್ಪು ರುಚಿಗೆ, ಕರಿಬೇವು ಸ್ವಲ್ಪ, ತೆಂಗಿನ ತುರಿ-1/2 ಬಟ್ಟಲು.

ತಯಾರಿಸುವ ವಿಧಾನ: ಸೊಪ್ಪನ್ನು ಕತ್ತರಿಸಿ ಬೇಯಿಸಿ. ಚಕ್ಕೆ-ಲವಂಗ-ಹಸಿಮೆಣಸನ್ನು ತೆಂಗಿನತುರಿಯೊಂದಿಗೆ ರುಬ್ಬಿಕೊಳ್ಳಿ. ರುಬ್ಬುವಾಗ ಸ್ವಲ್ಪ ಹುಳಿ ಮಜ್ಜಿಗೆಯನ್ನು ಸೇರಿಸಿ. ನಂತರ ಬೆಂದ ಸೊಪ್ಪಿಗೆ ಎಲ್ಲವನ್ನೂ ಹಾಕಿ, ಉಪ್ಪನ್ನೂ ಹಾಕಿ. ಗ್ರೇವಿಯಂತಿರಬೇಕು. ಕರಿಬೇವಿನೊಂದಿಗೆ ತುಪ್ಪದಲ್ಲಿ ಒಗ್ಗರಣೆ ಕೊಡಿ. ಚಪಾತಿ, ರೊಟ್ಟಿಗೆ ರುಚಿಕಟ್ಟಾದ ಕರಿ.

ದೋಸೆ
ಬೇಕಾಗುವ ಸಾಮಗ್ರಿ: ಸೊಪ್ಪು- 2ರಿಂದ 3 ಹಿಡಿ, ಬೆಳ್ತಿಗೆ ಅಕ್ಕಿ- 1 ಬಟ್ಟಲು, ಒಣಮೆಣಸು 4-5, ಧನಿಯಾ-2 ಚಮಚ, ಮೆಂತ್ಯ-1 ಚಮಚ, ಜೀರಿಗೆ- 1 ಚಮಚ, ಉದ್ದಿನಬೇಳೆ, ಕಡಲೆಬೇಳೆ- 2 ಚಮಚ, ಹುಣಸೆಹಣ್ಣು- ನಿಂಬೆಗಾತ್ರ, ಉಪ್ಪು ರುಚಿಗೆ, ಬೆಲ್ಲ ಸಣ್ಣ ತುಂಡು, ಅರಸಿನ ಪುಡಿ ಚಿಟಿಕೆ, ತೆಂಗಿನತುರಿ- 1/2 ಬಟ್ಟಲು.

ತಯಾರಿಸುವ ವಿಧಾನ: ಅಕ್ಕಿಯನ್ನು 2 ಗಂಟೆ ನೆನೆಸಿಡಿ. ನಂತರ ಜಾರಿಗೆ ಹಾಕಿ ಒಣಮೆಣಸು, ಧನಿಯಾ, ಮೆಂತ್ಯ, ಜೀರಿಗೆ, ಉದ್ದು, ಕಡಲೆಬೇಳೆ, ಹುಣಸೆಹಣ್ಣು , ಉಪ್ಪು , ಬೆಲ್ಲ , ತೆಂಗಿನ ತುರಿ, ಅರಸಿನ ಪುಡಿಯೊಂದಿಗೆ ಸಣ್ಣಗೆ ರುಬ್ಬಿಟ್ಟುಕೊಳ್ಳಿ. ನಂತರ ಅದಕ್ಕೆ ತೊಳೆದು ಕತ್ತರಿಸಿದ ಸೊಪ್ಪನ್ನು ಸೇರಿಸಿ ದೋಸೆಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ರುಬ್ಬಿಟ್ಟ ದಿನವೇ ದೋಸೆ ಮಾಡಬಹುದು. ಮರುದಿವಸ ಮಾಡಬೇಕಾದರೆ ಹುಣಸೆಹಣ್ಣನ್ನು ಹಾಕಬಾರದು.

ಗಟ್ಟಿ
ಮೇಲೆ ಹೇಳಿದ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಿ ಕಲಸಿಕೊಂಡು ಉಂಡೆಗಳಂತೆ ಮಾಡಿ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿದರೆ ಗಟ್ಟಿ ತಯಾರಾಗುತ್ತದೆ. ನಂತರ ಅದನ್ನು ಪುಡಿಪುಡಿ ಮಾಡಿ ಒಗ್ಗರಣೆ ಹಾಕಿ ತೆಂಗಿನಕಾಯಿ ತುರಿಯನ್ನು ಸೇರಿಸಿದರೆ ತಿಂಡಿಯಂತೆಯೂ ತಿನ್ನಬಹುದು.

ಪುಷ್ಪಾ ಎನ್‌.ಕೆ. ರಾವ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

earrtiyukjhg

ನೋಡಿ ಸ್ವಾಮಿ ದುಬಾರಿ ಮೀನಿನ ಕಥೆ… ಒಂದು ಕೆಜಿಗೆ 5 ಸಾವಿರದಿಂದ 17 ಸಾವಿರ..!

food recipes

ಸಿಂಪಲ್‌ ಬಿಳಿ ಕಡಲೆ ಉಪ್ಪುಕಾರಿ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

holige

ಯುಗಾದಿಯ ವಿಶೇಷ ಖಾದ್ಯ ಹೂರಣದ ಹೋಳಿಗೆ

Jolad-nucchu

ದೇಹಕ್ಕೆ ತಂಪು ಈ ಜೋಳದ ನುಚ್ಚು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.