- Wednesday 11 Dec 2019
ದೇಶದಲ್ಲಿ ಟೀಕೆ ಮಾಡಲು ಮುಕ್ತ ವಾತಾವರಣವಿದೆ ಎನ್ನುವ ಅಮಿತ್ ಶಾ ಅಭಿಪ್ರಾಯವನ್ನು ಒಪ್ಪುವಿರಾ?
Team Udayavani, Dec 3, 2019, 5:17 PM IST
ಮಣಿಪಾಲ: ದೇಶದಲ್ಲಿ ಟೀಕೆ ಮಾಡಲು ಮುಕ್ತ ವಾತಾವರಣವಿದೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯವನ್ನು ಒಪ್ಪುವಿರಾ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಈ ಕೆಳಗಿನಂತಿದೆ.
ಕೃಷ್ಣಪ್ರಸಾದ್ ಬಾಗುರ್: ಹೌದು, ಯಾರೇ ಆಗಲಿ ಅದು ದೇಶದ ಓಳಿತಿಗಾಗಿ ಆರೋಗ್ಯವಂತ ಟೀಕೆ ಯಾಗಿರಬೇಕು. ಅದನ್ನು ಕೇಳಿ ತಪ್ಪನ್ನು ತಿದ್ದಿಕೋಂಡರೆ ಇನ್ನು ಉತ್ತಮ.
ಮೊಹಮ್ಮದ್ ರಫೀಕ್ ಕೊಲ್ಪೆ; ನೂರಕ್ಕೆ ನೂರರಷ್ಟು ಒಪ್ಪಲೇ ಬೇಕು! ಎಲ್ಲರಿಗೂ ಸರ್ಕಾರದ ಪರ ಹಾಗೂ ವಿರೋಧವಾಗಿ ಮಾತನಾಡುವ ಅಧಿಕಾರ ಇದೇ. ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಸಲ್ಪಡುವ ಅಧಿಕಾರವನ್ನು ಸರಕಾರ ಎಂದೂ ಕರೆಯುತ್ತೇವೆ. ಅಧಿಕಾರ ದುರೋಪಯೋಗ ಆಗ್ದೆ ಇರಲು. ಟೀಕೆಗಳು ಅತೀ ಅಗತ್ಯ
ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಇದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಬಹುಶಃ ಇಂದಿರಾ ಗಾಂಧಿರವರ ಅವಧಿಯಲ್ಲಿ ಮಾತ್ರ ಟೀಕೆ ಮಾಡುವಂತಹ ವಾತಾವರಣವಿರಲಿಲ್ಲ. ಅದನ್ನು ಕಾಂಗ್ರೆಸ್ ಮರೆ ಮಾಚಿ ಈಗ ಅನಗತ್ಯವಾಗಿ ಭಯದ ವಾತಾವರಣವಿರುವಂತಹ ಸನ್ನಿವೇಶ ಸೃಷ್ಟಿ ಮಾಡುತ್ತಿದೆ. ದೇಶದಲ್ಲಿ ಹಿಂದಿಗಿಂತಲೂ ಹೆಚ್ಚಿನ ಟೀಕೆಗಳು ಈಗ ಕೇಳಿ ಬರುತ್ತಿವೆ. ಕೇಂದ್ರ ಸರಕಾರದ ಪ್ರತಿಯೊಂದು ನಡೆಗೂ ಟೀಕೆ ಮಾಡೋದು ಪ್ರತಿಪಕ್ಷಗಳ ಮತ್ತು ಬುದ್ಧಿಜೀವಿಗಳ ಜಾಯಮಾನ ಆಗಿ ಹೋಗಿದೆ. ಹಾಗಿದ್ದು ಅನಗತ್ಯವಾಗಿ ಇಲ್ಲದ ಸನ್ನಿವೇಶ ಸೃಷ್ಟಿ ಮಾಡಿ ಮೋದಿ ಸರಕಾರವನ್ನು ಹೀಗೆಳೆಯುವ ಎಲ್ಲಾ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ.
ಲೋಕೇಶ್ ಗುಡ್ಡೆಮನೆ: ಟೀಕೆ ಮಾಡುವ ಹಕ್ಕು ಸ್ವಾಮ್ಯ ಎಲ್ಲರಿಗೂ ಇದೆ.. ಟೀಕೆ ಮಾಡಿದನ್ನು ಅವಗಣನೆ ಮಾಡುವ ಮೂಲಕ ಟೀಕೆಗಳನ್ನು ಎಕೆ ಎದುರಿಸಬೇಕಾಯಿತು ಎಂದು ಅವಲೋಕನ ಮಾಡಬೇಕು, ಹಾಗು ಟೀಕೆ ಕೂಡ ಒಂದು ಒಳ್ಳೆಯ ಬೆಳವಣಿಗೆಗೆ ಮುನ್ನುಡಿ ಇಡಲು ಸಾದ್ಯ!
ವಾದಿರಾಜ್ ತಂತ್ರಿ: ಅಮಿತ್ ಷಾ ಅವರು ಲೋಕ ಸಭಾ ಸದನದಲ್ಲಿ ಅನೇಕ ಬಾರಿ ಹೇಳಿದ್ದಾರೆ. ಮೋದಿ ಮತ್ತು ತನಗೆ ಏನು ಬೇಕಾದರೂ ಹೇಳಿ ಎಂದು ಆದ್ರೆ ದೇಶ ದ್ರೋಹಿ ವಿಚಾರ ಮತ್ತು ಅವಶ್ಯಕತೆ ಇಲ್ಲದೆ ಇರುವ ವಿಚಾರದಲ್ಲಿ ಸಾಂವಿಧಾನಿಕ ಹುದ್ದೆಗಳಿಗೆ ಅಪಮಾನ ಮಾಡಬೇಡಿ ಎಂದು.
ದಯಾನಂದ ಕೊಯಿಲಾ: ಟೀಕೆ ಮಾಡುವುದು ಮೂಲಭೂತ ಹಕ್ಕು ಅದನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಅದು ನಿರಂಕುಶ ಪ್ರಭುತ್ವವನಿಸುತ್ತದೆ. ಟೀಕೆ ಸಮಾಜದ ಒಳಿತಿಗಾಗಿ ಇರಬೇಕು.
ಈ ವಿಭಾಗದಿಂದ ಇನ್ನಷ್ಟು
-
ಮಣಿಪಾಲ: ಉಪ ಚುನಾವಣೆಯಲ್ಲಿ ಮತದಾರರು ನೀಡಿದ ಸ್ಪಷ್ಟ ತೀರ್ಪಿನ ಕುರಿತು ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು...
-
ಮಣಿಪಾಲ: ನಷ್ಟದಲ್ಲಿರುವ ಟೆಲಿಕಾಂ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವುದು ಅವಶ್ಯಕತೆ ಇದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ...
-
ಮಣಿಪಾಲ: ಅತ್ಯಾಚಾರ ಪ್ರಕರಣಗಳಲ್ಲಿ ಶೀಘ್ರ ನ್ಯಾಯಕ್ಕಾಗಿ ತ್ವರಿತ ವಿಚಾರಣಾ ನ್ಯಾಯಾಲಯವನ್ನು ತುರ್ತಾಗಿ ರಚಿಸಲು ಕ್ರಮ ಕೈಗೊಳ್ಳಬೇಕಾಗಿದೆಯೇ? ಎಂಬ ಪ್ರಶ್ನೆಯನ್ನು...
-
ಮಣಿಪಾಲ: ಉಪಚುನಾವಣೆಗಳ ಸಂಖ್ಯೆ ಹೆಚ್ಚುತ್ತಿರುವುದು ಮತದಾರರು ಮತದಾನದಿಂದ ದೂರ ಉಳಿಯಲು ಕಾರಣವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ...
-
ಮಣಿಪಾಲ: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಭಾರತ ಬಿಟ್ಟು ಪರಾರಿಯಾಗಲು ಗುಪ್ತಚರ ವಿಭಾಗದ ವೈಫಲ್ಯವೇ ಕಾರಣವೇ ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ...
ಹೊಸ ಸೇರ್ಪಡೆ
-
ಲಂಡನ್: ವೈದ್ಯರ ಬಳಿಯಲ್ಲಿ ಹಾಗೂ ವಕೀಲರ ಬಳಿಯಲ್ಲಿ ನಾವು ಯಾವುದೇ ವಿಷಯಗಳನ್ನು ಮುಚ್ಚಿಡಬಾರದು ಎಂಬ ಮಾತೊಂದಿದೆ. ಹಾಗಾಗಿಯೇ ರೋಗಿಗಳು ತಾವು ವೈದ್ಯರಲ್ಲಿಗೆ...
-
ಶರತ್ ಭದ್ರಾವತಿ ಶಿವಮೊಗ್ಗ: ತಮಿಳುನಾಡು ಬಾಳೆ ಜಿಲ್ಲೆಗೆ ಕಾಲಿಟ್ಟ ಕಾರಣ ಗ್ರಾಹಕರ ಜೇಬಿಗೆ ಹೊರೆಯಾಗಿದ್ದು ಪುಟ್ಟ ಬಾಳೆ (ಏಲಕ್ಕಿ ಬಾಳೆ) ಈಗ ಭಾರೀ ಇಳಿಕೆಯಾಗಿದ್ದು...
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...