ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹಿಂತಿರುಗಿಸಿ ಎಂಬ ಆದೇಶದ ಕುರಿತು ಅಭಿಪ್ರಾಯವೇನು?
Team Udayavani, Jun 13, 2020, 3:54 PM IST
ಮಣಿಪಾಲ: ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಿ ಎಂದು ರಾಜ್ಯ ಸರಕಾರ ಕಠಿಣ ಆದೇಶ ನೀಡಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ರಮೇಶ್ ಭಟ್ ನಕ್ರೆ: ಸರ್ಕಾರದ ಎಲ್ಲಾ ಸೌಲಭ್ಯ ಸಿಗುವಾಗ ಬಿಪಿಎಲ್ ಪ್ರಶ್ನೆಯೇ ಬರುವುದಿಲ್ಲ .ಬಿಪಿಎಲ್ ಸೌಲಭ್ಯ ಬೇಕೇ ಎನ್ನುವವರು ನೌಕರಿ ತೊರೆಯಲಿ.
ಶ್ರೀನಿವಾಸ್ ಎಂ. ಎ: ಸರಕಾರಿ ನೌಕರರಿಗೆ ಅಷ್ಟೇ ಅಲ್ಲ 50000 ಸಂಬಳ ತೆಗೆದುಕೊಳ್ಳುವ ಖಾಸಗಿ ನೌಕರರಿಗೂ ಅನ್ವಯಿಸುವಂತೆ ಕಠಿಣ ಕಾನೂನು ಕ್ರಮ ತರಬೇಕು ನಾನು ಕಂಡಂತೆ ಪ್ರತಿಷ್ಠಿತ ಕಂಪನಿಯಲ್ಲಿ ರುವ ನೌಕರರು ಸಹ ತಮ್ಮ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ
ಗಂಗಾಧರ ರಾವ್ ಕೊಕ್ಕಡ: ಅಯ್ಯೋ ಅಯ್ಯೋ ಬಿಡಿ ಹದಿಮೂರು ಹದಿನೈದು ಮಕ್ಕಳು ಓಡಾಲು ಕಾರು ಬ್ಯೆಕ್ ಮೂರು ನಾಲ್ಕು ಅಂತಸ್ತಿನ ಮನೆ ಇದ್ದವರಿಗೆ ಬಿ. ಪಿ. ಎಲ್ ಕಾರ್ಡ್ ಇದೆ . ಹ್ಞಾಂ ಕಾರಣ ಅವರು ಕಡು ಬಡವರು ಸ್ವಾಮಿ
ರಾಜು ಕೆ ಉದ್ದಮನಹಳ್ಳಿ: ಒಳ್ಳೆಯದು, ಆದರೆ ಅರೆ ಸರ್ಕಾರಿ ನೌಕರರನ್ನು ಈ ಆದೇಶದಿಂದ ಹೊರಗಿಡಬೇಕು, ಕಾರಣ ಇವರಿಗೆ ಐದು ಅಥವಾ ಆರು ತಿಂಗಳಿಗೊಮ್ಮೆ ವೇತನ ಸಿಗೋದು ಅದೂ ಕೂಡಾ ಒಂದೋ ಎರಡೋ ತಿಂಗಳ ವೇತನ ಮಾತ್ರ.
ಸಚೀನ ಕುಲಕರ್ಣಿ: ಜನಸೇವೆಯೆ ಜನಾರ್ಧನನ ಸೇವೆ ಅಂತಾ ಜನರಿಂದ ಆಯ್ಕೆಗೊಂಡ ಶಾಸಕರಿಗೆ ಅನುದಾನ ಯಾಕೆ ವೇತನ ಯಾಕೆ? ಇವರಿಗೆ ಇದೆಲ್ಲ ಸೌಲಭ್ಯ ಬೇಕು ಆದರೆ ಎಲ್ಲರಿಗೂ ಬಿಪಿಎಲ್ಲ್ ಕಾರ್ಡ್ ಇರೋದು ತಪ್ಪಾ
ಕಿರುಗುಂದ ನಜೀರ್: ಸರ್ಕಾರಿ ನೌಕರರು ಮಾತ್ರ ಅಲ್ಲ ಅರ್ಥಿಕವಾಗಿ ಅನುಕೂಲ ಇರುವವರ ಬಿಪಿಎಲ್ ಕಾರ್ಡಗಳನ್ನು ರದ್ದು ಪಡಿಸಬೇಕು, ಜೊತೆಗೆ ಇವರು ಬಡವರೆಂದು ವರಮಾನ ಪತ್ರ ಕೊಟ್ಟ ಕಂದಾಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.
ರಾಘವೇಂದ್ರ ಶೇಟ್: ಒಳ್ಳೆಯ ನಿರ್ಧಾರ ಅಧಿಕಾರಿಗಳು ಹಣದಾಸೆಗಾಗಿ ಮನೆ ಮನೆಗೆ ಕಾರ್ಡ್ ಮಾಡಿಕೊಟ್ಟಿದ್ದಾರೆ ನಿಜವಾದ ಬಡವರಿಗೆ ಇನ್ನೂ ಕಾರ್ಡ್ ಸಿಗಲಿಲ್ಲ ಸರಿಯಾಗಿ ತನಿಖೆ ನಡೆಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ