ಬ್ರೇಕ್‌ ಹಾಕೋ ಮೊದಲು.. ಎಚ್ಚರ!


Team Udayavani, Jul 26, 2019, 5:00 AM IST

m-24

ದ್ವಿಚಕ್ರ ವಾಹನದಲ್ಲಿ ಹೋಗೋದು ಅಂದರೆ ಎಲ್ಲರಿಗೂ ಇಷ್ಟ. ಪಾರ್ಕಿಂಗ್‌ ಕಿರಿಕ್‌ ಇಲ್ಲ, ಪೇಟೇಲೂ, ಹಳ್ಳಿಲೂ ಬೇಕಾದಂತೆ ಹೋಗಬಹುದು. ರಸ್ತೆ ಸರಿ ಇಲ್ಲ ಎನ್ನೋ ಸಮಸ್ಯೆನೂ ಇಲ್ಲ. ಆದರೆ, ಹೀಗೆ ದ್ವಿಚಕ್ರ ವಾಹನದಲ್ಲಿ ಬಿಡುಬೀಸಾಗಿ ಹೋಗೋದು ಒಂದು ರೀತಿಯಲ್ಲಿ ಡೇಂಜರ್‌! ಕಾರಣ ನಿಮ್ಮ ಬ್ರೇಕಿಂಗ್‌ ಕರೆಕ್ಟಾಗಿರಬೇಕು. ಅಷ್ಟೇ ಅಲ್ಲ, ಪರಿಣಾಮಕಾರಿಯೂ ಆಗಿರಬೇಕು. ಇಲ್ಲದಿದ್ದರೆ ಸಮಸ್ಯೆಗೆ ಕಾರಣವಾಗುತ್ತೆ. ಬ್ರೇಕಿಂಗ್‌ ಪರಿಣಾಮಕಾರಿಯಾಗಿ ಹಾಕೋದು ಹೇಗೆ ಎನ್ನುವ ಬಗ್ಗೆ ನಾವು ಚಾಲನೆಯ ವೇಳೆಯೇ ಕಲಿಯಬೇಕಾಗುತ್ತದೆ. ಅಷ್ಟೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ಆದ ಅಪಾಯಗಳಿಂದ ನಾವು ಪಾಠ ಕಲಿತು ಉತ್ತಮ ಚಾಲನೆ ಅಭ್ಯಾಸವನ್ನು ನಾವು ಮೈಗೂಡಿಸಿಕೊಳ್ಳಬಹುದು. ಅದಕ್ಕಾಗಿ ಬ್ರೇಕ್‌ ಯಾವಾಗ ಹಾಗಬೇಕು? ಎಲ್ಲಿ ಯಾವಾಗ ಹಾಕಬಾರದು ಎಂಬುದನ್ನು ನೋಡೋಣ.

ರಸ್ತೆ ಒದ್ದೆಯಾಗಿದ್ದರೆ ಫೋರ್ಸ್‌ ಬ್ರೇಕ್‌ ಬೇಡ
ರಸ್ತೆ ಒದ್ದೆಯಾಗಿದೆ, ಯಾವುದೋ ಒಂದು ಸಂದರ್ಭ ಬ್ರೇಕ್‌ ಹಾಕಬೇಕಾಯ್ತು, ಅನ್ನಿ. ಆದರೆ ಈ ವೇಳೆ ಏಕಾಏಕಿ ಫೋರ್ಸ್‌ ಹಾಕಿ ಬ್ರೇಕ್‌ ಹಾಕಬೇಡಿ. ಇದರಿಂದ ಟಯರ್‌ ರಸ್ತೆಯಿಂದ ಜಾರುವ ಅಪಾಯ ಹೆಚ್ಚು. ಹಿಂಭಾಗದ ಬ್ರೇಕ್‌ ತುಸು ಹೆಚ್ಚು, ಮುಂಭಾಗದ ಬ್ರೇಕ್‌ ತುಸು ಕಡಿಮೆ ಎಂಬಂತೆ (ಶೇ.75-ಶೇ.25) ಅನುಪಾತದಲ್ಲಿ ಬ್ರೇಕ್‌ ಹಾಕಬಹುದು. ಬ್ರೇಕ್‌ ಹಾಕುವ ಮುನ್ನ ಅಕ್ಸಲರೇಟರ್‌ ತಗ್ಗಿಸಿ, ನಿಧಾನಗೊಳಿಸಿ ಬ್ರೇಕ್‌ ಹಾಕುವುದೇ ಉತ್ತಮ.

ಒಂದೇ ರೀತಿ ಲೆಕ್ಕಾಚಾರ ಬೇಡ
ರಸ್ತೆಯಲ್ಲಿ ಮರಳಿನ ಹುಡಿ, ಚರಳು ಕಲ್ಲು, ಒದ್ದೆಯಿದ್ದ ಸಂದರ್ಭದಲ್ಲಿ ಯಾವತ್ತೂ ಬ್ರೇಕ್‌ ಹಾಕಿದಂತೆ ಬ್ರೇಕ್‌ ಹಾಕಿದರೆ ನಡೆಯುತ್ತದೆ ಎಂಬ ಆಲೋಚನೆಯನ್ನು ಮಾಡದಿರಿ. ರಸ್ತೆ ಒದ್ದೆಯಿದೆಯೇ, ಬದಿಯಲ್ಲಿ ಮರಳು, ಚರಳು ಇದೆಯೇ ಎಂಬುದನ್ನು ಗಮನಿಸಿಯೇ ನೀವು ಬ್ರೇಕ್‌ ಹಾಕಬೇಕು. ಈ ಲೆಕ್ಕಾಚಾರ ಅತಿಮುಖ್ಯ.

ಕೈಯ ನಾಲ್ಕು ಬೆರಳುಗಳು ಅಥವಾ ಕಾಲು ಬ್ರೇಕ್‌ನ ಮೇಲಿಟ್ಟುಕೊಂಡೇ ಚಾಲನೆ ಮಾಡುವುದು ಒಳ್ಳೆಯದಲ್ಲ. ಭಾರೀ ಟ್ರಾಫಿಕ್‌ ವೇಳೆ ಇದು ಸರಿಯಾದ್ದಿರಬಹುದು. ಹೀಗೆ ಚಾಲನೆ ಮಾಡುವುದರಿಂದ ಗೊತ್ತಿಲ್ಲದೆ ಕೆಲವೊಮ್ಮೆ ಬ್ರೇಕ್‌ ಅಪ್ಲೆ„ಯಾಗುತ್ತಿರುತ್ತದೆ. ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.

ಒಂದು ಬ್ರೇಕ್‌ ಮಾತ್ರ ಬೇಡ
ಯಾವುದಾದರೂ ಒಂದು ಬ್ರೇಕ್‌ ಅನ್ನು ಮಾತ್ರ ಹಾಕುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಕೆಲವರು ಮುಂಭಾಗದ ಬ್ರೇಕ್‌ ಮಾತ್ರ, ಇನ್ನು ಕೆಲವರು ಹಿಂಭಾಗದ ಬ್ರೇಕ್‌ ಮಾತ್ರ ಹಾಕುತ್ತಾರೆ. ಇದು ಎರಡೂ ಒಳ್ಳೆಯ ಚಾಲಕನ ಅಭ್ಯಾಸವಲ್ಲ. ಎರಡೂ ಬ್ರೇಕ್‌ಗಳನ್ನು ಸಮ ಪ್ರಮಾಣ ದಲ್ಲಿ ಹಾಕುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದ್ವಿಚಕ್ರ ವಾಹನದ ಮೇಲೆ ಕಂಟ್ರೋಲ್‌ ಹೆಚ್ಚಿರುತ್ತದೆ.

ತಿರುವಿನಲ್ಲಿ ಫ್ರಂಟ್‌ ಬ್ರೇಕ್‌ ಬೇಡ
ತಿರುವಿನಲ್ಲಿ ಚಾಲನೆ ವೇಳೆ ದ್ವಿಚಕ್ರ ವಾಹನಗಳಿಗೆ ಒಂದಷ್ಟು ಪ್ರಮಾಣದ ಗ್ರಿಪ್‌ ಮಾತ್ರ ಇರುತ್ತದೆ. ಒಂದು ವೇಳೆ ರಸ್ತೆಯಲ್ಲೂ ಮರಳು, ನೀರು ಇದ್ದರೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ತಿರುವಿನಲ್ಲಿ ಯಾವುದೇ ಕಾರಣಕ್ಕೆ ಮುಂಭಾಗದ ಬ್ರೇಕ್‌ ಅನ್ನು ಮಾತ್ರವೇ ಹಾಕಬಾರದು. ಎರಡೂ ಬ್ರೇಕ್‌ ಅಥವಾ ಹಿಂಭಾಗದ ಬ್ರೇಕ್‌ ಮಾತ್ರ ಹಾಕಬೇಕು.

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.