ಕ್ರೇಜಿ ಬೈಕ್‌ ಹೋಂಡಾ CB300R


Team Udayavani, Jun 21, 2019, 1:27 PM IST

honda-bike-(1)

ನಗರ ಪ್ರವಾಸಕ್ಕೂ ಹೊಂದುವಂಥ, ದೂರ ಪ್ರಯಾಣಕ್ಕೂ ಸೈ ಅನ್ನುವಂಥ ಬೈಕ್‌ ಬೇಕು ಅನ್ನುವವರು ಈ ಬೈಕ್‌ ಖರೀದಿಸಬಹುದು. ಹೊಸ ಮಾದರಿಯ ಫ್ರೇಮ್ ನ ಅಳವಡಿಕೆಯಿಂದಾಗಿ ಈ ಬೈಕ್‌ ಹ್ಯಾಂಡ್ಲಿಂಗ್‌ ಅತ್ಯುತ್ತಮವಾಗಿದೆ.

ಭಾರತೀಯರಲ್ಲಿ ಬೈಕ್‌ಕ್ರೇಜ್‌ ಈಗ ಮೊದಲಿಗಿಂತ ಹೆಚ್ಚಾಗಿದೆ. ಇದೇ ಕಾರಣಕ್ಕೆ, ದೊಡ್ಡ ಪ್ರಮಾಣದಲ್ಲಿ ಬೈಕ್‌ಗಳೂ ಮಾರಾಟವಾಗುತ್ತಿವೆ. ಅಧಿಕ ಶಕ್ತಿ-ಸಾಮರ್ಥ್ಯದ ಬೈಕ್‌ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ 250-300 ಸಿಸಿ ಬೈಕ್‌ಗಳಿಗೆ ಬೇಡಿಕೆ ಕುದುರಿರುವುದೇ ಈ ಮಾತಿಗೆ ಉದಾಹರಣೆ. ಭಾರತದ ಅತಿದೊಡ್ಡ ದ್ವಿಚಕ್ರ ತಯಾರಿಕಾ ಕಂಪೆನಿಯಾಗಿರುವ ಜಪಾನ್‌ ಮೂಲದ ಹೋಂಡಾ ಈ ಸೂಕ್ಷ್ಮವನ್ನು ಮನಗಂಡಿದ್ದು, ಈ ನಿಟ್ಟಿನಲ್ಲಿ ಹೊಸ ಸಿಬಿ 300 ಆರ್‌ ಅನ್ನು ಬಿಡುಗಡೆ ಮಾಡಿದೆ.

ಈವರೆಗೆ ಮಾರುಕಟ್ಟೆಯಲ್ಲಿ ಹೋಂಡಾದ ಸಿಬಿಆರ್‌ 250 ಆರ್‌ ಸದ್ದು ಮಾಡಿತ್ತು. ಇದೊಂದು ಫ‌ುಲ್‌ಫೇರಿಂಗ್‌ ರೇಸಿಂಗ್‌ ಮಾದರಿ ಬೈಕ್‌ಆಗಿದ್ದು ಒಂದು ವರ್ಗವನ್ನು ಆರ್ಕಷಿಸಿತ್ತು. ಇದರ ಹೊಸ ಆವೃತ್ತಿಯನ್ನು ಹೋಂಡಾ ಇತ್ತೀಚೆಗೆ ಬಿಡುಗಡೆ ಮಾಡುವುದರೊಂದಿಗೆ ಹೊಸ ಸಿಬಿ 300 ಆರ್‌ ನೇಕೆಡ್‌ ಮಾದರಿಯನ್ನೂ ಬಿಡುಗಡೆ ಮಾಡಿದೆ.

ಹೇಗಿದೆ ವಿನ್ಯಾಸ?
ಪರಿಪೂರ್ಣ ಜಪಾನ್‌ ತಂತ್ರಜ್ಞಾನದ ಈ ಬೈಕ್‌ ಮೊದಲ ನೋಟಕ್ಕೇ ಆಕರ್ಷಕವಾಗಿ ಕಾಣುತ್ತದೆ. ಹಿಂದೆ ಮತ್ತು ಮುಂಭಾಗ ಆಕರ್ಷಕ ಎಲ್‌ಇಡಿ ಲೈಟುಗಳು, ಡಿಜಿಟಲ್‌ ಮೀಟರ್‌, ಸೆಳೆಯುವ ಇಂಡಿಕೇಟರ್‌ ಲೈಟ್‌ಗಳಿವೆ. ಅತ್ಯುತ್ತಮ ಟ್ಯಾಂಕ್‌ ವಿನ್ಯಾಸ, ಕೂರಲು ಆರಾಮದಾಯಕ ಸೀಟುಗಳು ಇದರ ಪ್ಲಸ್‌ ಪಾಯಿಂಟ್‌. ಇದರ ವಿನ್ಯಾಸ ಹೋಂಡಾದ ಸಿಬಿ 1000 ಆರ್‌ ಬೈಕ್‌ನ ವಿನ್ಯಾಸವನ್ನು ಹೋಲುವಂತೆ ಇದೆ. ಯಾವುದೇ ರೀತಿಯ ಹೆಚ್ಚುವರಿ ಸ್ಪೇರ್‌ಗಳು, ನೋಡಲು ಕೆಟ್ಟದೆನಿಸುವ ಸ್ಟಿಕ್ಕರ್‌ಗಳು ಇಲ್ಲದೆ ಅತಿ ಸಿಂಪಲ್‌ ಮತ್ತು ಆಕರ್ಷಕವಾಗಿದೆ. ತುಸು ದೊಡ್ಡದಾದ ಸೈಲೆನ್ಸರ್‌ ಇದ್ದು, ಹಿಂಭಾಗ ಸ್ಟೀಲ್‌ ಕವರ್‌ ಅನ್ನು ಹೊಂದಿದೆ. ಮುಂಭಾಗದಲ್ಲಿ ಆಕರ್ಷಕವಾದ ಗ್ರ್ಯಾಬ್‌ರೇಲ್‌ ಮತ್ತು ಮುಂಭಾಗ ನ್ಪೋರ್ಟಿ ಹ್ಯಾಂಡಲ್‌ ಬಾರ್‌ಇದೆ.

ಸೌಲಭ್ಯಗಳು
ಸಿಬಿ 300 ಆರ್‌ ಸಾಕಷ್ಟು ಸುಧಾರಣೆ ಕಂಡ ಬೈಕ್‌ ಆಗಿದೆ. 250 ಆರ್‌ ಫ‌ುಲ್‌ಫೇರಿಂಗ್‌ ಬೈಕ್‌ ಬಿಡುಗಡೆ ಮಾಡಿದ್ದಾಗ ಭಾರತದಲ್ಲಿ ಇಂತಹುದೇ ನೇಕೆಡ್‌ ಬೈಕ್‌ ಬೇಕು ಎಂಬ ನಿರೀಕ್ಷೆಗಳಿದ್ದವು. ಕೆಟಿಎಂ 390 ಮಾರುಕಟ್ಟೆಗೆ ಬಂದ ಬಳಿಕ ಹೋಂಡಾದಿಂದಲೂ 300 ಸಿಸಿ ಹೆಚ್ಚು ಸಾಮರ್ಥ್ಯದ ಬೈಕ್‌ ನೀಡುವ ನಿರೀಕ್ಷೆ ಇತ್ತು. ಈಗ ತಡವಾಗಿಯಾದರೂ ಹೋಂಡಾ ಅದನ್ನು ಬಿಡುಗಡೆ ಮಾಡಿದೆ. ಹೋಂಡಾದ ಅತ್ಯಂತ ಪರಿಣಾಮಕಾರಿ ಎಂಜಿನ್‌, ಯಾವುದೇ ಹೆಚ್ಚುವರಿ ಶಬ್ದ ಕೇಳಿಸದಷ್ಟು ಉತ್ತಮವಾಗಿದೆ. ಡ್ಯುಎಲ್‌ ಚಾನೆಲ್‌ ಎಬಿಎಸ್‌ ಹೊಂದಿದೆ. ಎರಡೂ ಕಡೆ 296 ಮತ್ತು 220 ಎಂ.ಎಂ.ನ ಡಿಸ್ಕ್ ಹೊಂದಿದೆ. 41 ಎಂ.ಎಂ.ನ ಅಪ್‌ಸೆçಡ್‌ ಆಂಡ್‌ ಡೌನ್‌ಟೆಲಿ ಸ್ಕೋಪಿಕ್‌ ಶಾಕ್ಸ್‌ಅಬಾರ್ಬರ್‌ ಮತ್ತು ಹಿಂಭಾಗ ಸುಧಾರಿತ ಮೋನೋಶಾಕ್‌ ಸಸ್ಪೆನÒನ್‌ ಹೊಂದಿದೆ. ಡಿಜಿಟಲ್‌ ಮೀಟರ್‌ ಕೂಡ ಹಲವು ಸೌಕರ್ಯಗಳನ್ನು ಹೊಂದಿದೆ. ಹೆಚ್ಚು ಅಗಲವಾದ 17 ಇಂಚಿನ 150/60 ಹಿಂಭಾಗ ಮತ್ತು 110/70 ಮಾದರಿಯ ಮುಂಭಾಗದ ಟಯರ್‌ ಹೊಂದಿದೆ. ಇದು ಹೆಚ್ಚಿನ ಗ್ರಿಪ್‌ ಕಾಯ್ದುಕೊಳ್ಳಲು ನೆರವಾಗುತ್ತದೆ. ಸವಾರಿಗೆ ಬೈಕ್‌ ಅನುಕೂಲಕರವಾಗಿದ್ದು, ಹೊಸ ಮಾದರಿಯ ಫ್ರೇಮ್ ನಿಂದಾಗಿ ಹ್ಯಾಂಡ್ಲಿಂಗ್‌ ಅತ್ಯುತ್ತಮವಾಗಿದೆ.

ಎಂಜಿನ್‌ ಸಾಮರ್ಥ್ಯ
ಹೋಂಡಾ ಸಿಬಿ 300 ಆರ್‌, ಸುಧಾರಿತ ಲಿಕ್ವಿಡ್‌ಕೂಲ್ಡ್‌ ಎಂಜಿನ್‌ಅನ್ನು ಇದರಲ್ಲಿ ಪರಿಚಯಿಸಿದೆ. 286.01 ಸಿಸಿಯ 4 ಸ್ಟ್ರೋಕ್‌ ಎಸ್‌ಐ ಎಂಜಿನ್‌ ಇದರಲ್ಲಿದ್ದು, 31 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಇದರೊಂದಿಗೆ 6500 ಆರ್‌ಪಿಎಂನಲ್ಲಿ ಗರಿಷ್ಠ 27.4ಎನ್‌ಎಂ ಟಾರ್ಕ್‌ಅನ್ನು ಉತ್ಪಾದನೆ ಮಾಡುವುದು ಇದರ ಹೆಚ್ಚುಗಾರಿಕೆ. ಫ‌ುÂಯಲ್‌ ಇಂಜೆಕ್ಷನ್‌ ವ್ಯವಸ್ಥೆ ಇದರಲ್ಲಿದೆ. ಒಟ್ಟು 6 ಗಿಯರ್‌ ಹೊಂದಿದೆ. 1344 ಎಂ.ಎಂ. ಹೀಲ್‌ಬೇಸ್‌, 151 ಎಂ.ಎಂ. ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿದೆ. ಒಟ್ಟು 147 ಕೆ.ಜಿ. ಭಾರವಿದ್ದು, 10 ಲೀಟರ್‌ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌ಇದೆ.

ಖರೀದಿಸಬಹುದೇ?
ಛಂಗನೆ ನೆಗೆಯುವ ಶಕ್ತಿಶಾಲಿ ಬೈಕ್‌ ಬೇಕು. ತುಸುದೂರ ಪ್ರವಾಸ ಮಾಡುವಂತೆ ಇರಬೇಕು, ನಗರ ಸವಾರಿಗೂ ಇರಬೇಕು ಎನ್ನುವವರು ಈ ಬೈಕ್‌ ಖರೀದಿಸಬಹುದು. ಪೆಟ್ರೋಲ್‌ ಟ್ಯಾಂಕ್‌ ತುಸು ಸಣ್ಣದಿರುವುದು ಇದರ ಹಿನ್ನಡೆ. ಹಾಗೆಯೇ ಹಿಂದಿನ ಸೀಟ್‌ ಉದ್ದವಾಗಿಲ್ಲ. ಹೋಂಡಾ ಇದನ್ನು ಸಿಕೆಡಿ ಮೂಲಕ (ವಿದೇಶದಿಂದ ಬಿಡಿ ಭಾಗಗಳನ್ನು ತಂದು ಜೋಡಿಸುತ್ತದೆ) ಭಾರತಕ್ಕೆ ತರುತ್ತದೆ. ಇದರಿಂದ ಬೆಲೆ ತುಸು ಹೆಚ್ಚಿದೆ. ಆದರೂ ಹೋಂಡಾ ಮಾರುಕಟ್ಟೆಯಲ್ಲಿ ಸಾಕಷ್ಟು ಅಧ್ಯಯನ ಮಾಡಿ, ಉತ್ತಮ ಬೆಲೆಗೆ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ 2.41 ಲಕ್ಷ ರೂ. ಇದೆ.

ತಾಂತ್ರಿಕ ವಿವರಗಳು
286.01 ಸಿಸಿ ಎಂಜಿನ್‌
ಲಿಕ್ವಿಡ್‌ಕೂಲ್ಡ್‌, ಫ‌ುÂಯೆಲ್‌ಇಂಜೆಕ್ಷನ್‌
6 ಗಿಯರ್‌
31 ಎಚ್‌ಪಿ, 27.4 ಎನ್‌.ಎಂ. ಟಾರ್ಕ್‌
1344 ಎಂ.ಎಂ. ವೀಲ್‌ ಬೇಸ್‌
151 ಎಂ.ಎಂ. ಗ್ರೌಂಡ್‌ಕ್ಲಿಯರೆನ್ಸ್‌,
10 ಲೀ. ಇಂಧನ ಟ್ಯಾಂಕ್‌ ಸಾಮರ್ಥ್ಯ
ಎಕ್ಸ್‌ ಷೋರೂಂ ಬೆಲೆ:2.41 ಲಕ್ಷ ರೂ.

-ಈಶ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.