ಹೊಸ ವಿನ್ಯಾಸದ ಹ್ಯುಂಡೈ ವೆನ್ಯೂ


Team Udayavani, Jun 10, 2019, 6:00 AM IST

VEnu

ಸಣ್ಣ ಎಸ್‌ಯುವಿ ಕಾರುಗಳನ್ನು ಬಳಸುವವರಿಗೆ ವೆನ್ಯೂ ಒಂದು ಉತ್ತಮ ಆಯ್ಕೆ. ಇ, ಎಸ್‌ಎಕ್ಸ್‌, ಎಸ್‌ಎಕ್ಸ್‌ಪ್ಲಸ್‌, ಎಸ್‌ಎಕ್ಸ್‌ ಒ ಮಾದರಿಯಲ್ಲಿ ಈ ಕಾರು ಲಭ್ಯವಿದೆ. ಆರಂಭಿಕ 6.2 ಲಕ್ಷ ರೂ.ಗಳಿಂದ (ಎಕ್ಸ್‌ಷೋರೂಂ) ಇದರ ಬೆಲೆ ಆರಂಭವಾಗುತ್ತದೆ. ಪೆಟ್ರೋಲ್‌ ಮತ್ತು ಡೀಸೆಲ್‌ಗ‌ಳಲ್ಲಿ ಮೂರು ಮಾದರಿಯ ಎಂಜಿನ್‌ ಆಯ್ಕೆ ಇರುವುದರಿಂದ ಆಯ್ಕೆ ಸುಲಭವಾಗಿದೆ. ನಗರ ಸವಾರಿ ಸುತ್ತಾಟಗಳಿಗೆ ಇದು ಉತ್ತಮವಾಗಿದೆ.

ಕಾರು ಈಗ ಶ್ರೀಮಂತಿಕೆಯ ಸಂಕೇತವಾಗಿ ಮಾತ್ರ ಉಳಿದಿಲ್ಲ. ಎಲ್ಲರಿಗೂ ಅದು ಅಗತ್ಯವೂ ಆಗಿದೆ. ಮಧ್ಯಮ ವರ್ಗದವರೂ ಕಾರುಗಳನ್ನು ಕೊಳ್ಳಲು ಆಸಕ್ತಿ ಹೆಚ್ಚು ಹೆಚ್ಚು ತೋರಿಸುತ್ತಿರುವುದರಿಂದ ಅಂತಹ ವರ್ಗದವರಿಗಾಗಿಯೇ ವ ವಿಶೇಷವಾಗಿ ವಿನ್ಯಾಸಮಾಡಲಾದ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಮಧ್ಯಮ ವರ್ಗದ ಸಂಬಳ ಪಡೆಯುವ ಉದ್ಯೋಗಿಗಳು, ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಯಾಗಿರುವುದು ಹ್ಯುಂಡೈ ಕಂಪೆನಿಯ ಅವೆನ್ಯೂ. ಭಾರತದಲ್ಲಿ ಹೆಚ್ಚು ಬೇಡಿಕೆ ಕಂಡುಕೊಳ್ಳುತ್ತಿರುವ ಸಣ್ಣ ಎಸ್‌ಯುವಿ ಮಾದರಿಗಳಿಗೆ ಸಡ್ಡು ಹೊಡೆಯುವಂತೆ ಹ್ಯುಂಡೈ ಇತ್ತೀಚಿಗೆ ಈ ಕಾರನ್ನು ಬಿಡುಗಡೆ ಮಾಡಿದೆ.

ವಿನ್ಯಾಸ
ಈ ಕಾರು ಪಕ್ಕನೆ ನೋಡಲು ಹ್ಯುಂಡೈಯ ಕ್ರೆಟಾ ಕಾರಿನಂತೆಯೇ ಇದೆ. ಟಾಟಾ ನೆಕ್ಸಾನ್‌, ಮಾರುತಿ ಬ್ರಿàಝಾ, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್‌ ಇಕೋನ್ಪೋರ್ಟ್‌ ಮಾದರಿಯಲ್ಲಿ ತುಸು ಭಿನ್ನ ವಿನ್ಯಾಸವನ್ನು ಇದು ಹೊಂದಿದೆ. ಮುಂಭಾಗದಲ್ಲಿ ಟಾಟಾ ಹೆಕ್ಸಾ ಮಾದರಿಯಲ್ಲೋ ಹೆಡ್‌ಲೈಟ್‌ಗಳನ್ನು ಹೊಂದಿದ್ದು, ಅದರ ಮೇಲ್ಭಾಗದಲ್ಲಿ ಎಲ್‌ಇಡಿ ಲೈಟ್‌ಗಳನ್ನು ಹೊಂದಿದೆ. ಮಧ್ಯದಲ್ಲಿ ಹ್ಯುಂಡೈಯ ಲೋಗೋವಿದ್ದು, ಸ್ಯಾಂಟಫೆ ಕಾರನ್ನು ಹೋಲುತ್ತದೆ. ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌ಗ್ಳಿದ್ದು ಹಿಂಭಾಗ ಎಲ್‌ಇಡಿ ಬ್ರೇಕ್‌ಲೈಟ್‌ಗಳನ್ನು ಹೊಂದಿದೆ. ಜತೆಗೆ ಕೆಳಗೆ ರಿವರ್ಸ್‌ ಲೈಟ್‌ಗಳನ್ನು ಹೊಂದಿದೆ. 16 ಇಂಚಿನ ಆಕರ್ಷಕ ಡೈಮಂಡ್‌ ಕಟ್‌ ಅಲಾಯ್‌ ಇದ್ದು, ದೊಡ್ಡ ಕಾರಿನ ಫೀಲ್‌ ಕೊಡುತ್ತದೆ.

ಆಂತರಿಕ ವಿನ್ಯಾಸ
ಒಳಭಾಗಕ್ಕೆ ಕಾಲಿಡುತ್ತಿದ್ದಂತೆ ಸಿಂಪಲ್‌ ಮತ್ತು ಆಕರ್ಷಕವಾಗಿರುವ ಒಳಾಂಗಣ ವಿನ್ಯಾಸ ಗಮನ ಸೆಳೆಯುತ್ತದೆ. 8 ಇಂಚಿನ ಟಚ್‌ಸ್ಕ್ರೀನ್‌ ಇರುವ ಎಚ್‌ಡಿ ಇನ್ಫೋಎಂಟರ್‌ಟೈನ್ಮೆಂಟ್‌ ಸಿಸ್ಟಂ, ಹ್ಯುಂಡೈಯ ಗಮನಸೆಳೆಯುವ ಮೀಟರ್‌ ಕನ್ಸೋಲ್‌, ಆಕರ್ಷಕ ಡ್ಯುಯಲ್‌ ಟೋನ್‌ ಇಂಟೀರಿಯರ್‌, ಡ್ಯಾಶ್‌ಬೋರ್ಡ್‌ ವಿನ್ಯಾಸ ಇದರ ಪ್ಲಸ್‌ ಪಾಯಿಂಟ್‌ ಹಾಗೆಯೇ ಮುಂಭಾಗದಲ್ಲಿ ತುಸು ಮೃದುವಾದ ಬಕೆಟ್‌ ಸೀಟ್‌ಗಳು, ಹಿಂಭಾಗ ಕಪ್‌ಹೋಲ್ಡರ್‌, ಆರ್ಮ್ ರೆಸ್ಟ್‌ ವ್ಯವಸ್ಥೆ ಇದೆ. ಒಟ್ಟು ಐವರು ಈ ಕಾರಿನಲ್ಲಿ ಪ್ರಯಾಣಿಸಬಹುದಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ಎಸ್‌ಯುವಿಗಳ ಮಾದರಿಯಲ್ಲೇ ಪ್ರಥಮವೆಂಬಂತೆ ಈ ಕಾರಿನಲ್ಲಿ ಏರ್‌ ಪ್ಯೂರಿಫೈಯರ್‌ ಇದೆ. ಹಾಗೆಯೇ, ಹಿಂಭಾಗಕ್ಕೂ ಎ.ಸಿ ವ್ಯವಸ್ಥೆ, ಚಾರ್ಜಿಂಗ್‌, ಬ್ಲೂಟೂತ್‌ ವ್ಯವಸ್ಥೆ ಇದರಲ್ಲಿದೆ. ಐಷಾರಾಮಿ ಕಾರುಗಳಲ್ಲಿರುವ ಸನ್‌ರೂಫ್ ವ್ಯವಸ್ಥೆ, ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆ, ಕೂಲ್ಡ್‌ಗ್ಲೋವ್‌ ಬಾಕ್ಸ್‌, ರಿಮೋಟ್‌ ಎಂಜಿನ್‌ ಸ್ಟಾರ್ಟ್‌ ವ್ಯವಸ್ಥೆಯೂ ಇದೆ.

ತಾಂತ್ರಿಕತೆ
ಮೂರು ಎಂಜಿನ್‌ ಮಾದರಿಯಲ್ಲಿ ವೆನ್ಯೂ ಲಭ್ಯ. 3 ಸಿಲಿಂಡರ್‌ನ 1 ಲೀಟರ್‌ನ ಟಬೋìಚಾರ್ಜ್‌ಡ್‌ ಜಿಡಿಐ ಪೆಟ್ರೋಲ್‌ ಎಂಜಿನ್‌ 120 ಎಚ್‌ಪಿ 172 ಟಾರ್ಕ್‌ ಹೊಂದಿದೆ. ಇದರೊಂದಿಗೆ 1.2 ಲೀ.ನ ಪೆಟ್ರೋಲ್‌ (83 ಎಚ್‌ಪಿ) ಮತ್ತು 1.4 ಲೀ.ನ ಡೀಸೆಲ್‌ ಎಂಜಿನ್‌ (90ಎಚ್‌ಪಿ) ಆಯ್ಕೆ ಕೂಡ ಇದೆ. ವಿವಿಧ ಎಂಜಿನ್‌ ಆಯ್ಕೆಗಳಿಗೆ ಅನುಗುಣವಾಗಿ 7ಸ್ಪೀಡ್‌, 6 ಸ್ಪೀಡ್‌, 5 ಸ್ಪೀಡ್‌ ಗಿಯರ್‌ ವ್ಯವಸ್ಥೆಯನ್ನು ಹೊಂದಿದೆ. ಎಂಜಿನ್‌ ಅತ್ಯಂತ ನವಿರಾಗಿದ್ದು, ಹೆಚ್ಚು ವೈಬ್ರೇಷನ್‌ ಇಲ್ಲ. ಚಾಲನೆಗೆ ಆರಾಮದಾಯಕವಾಗಿದೆ. ಆರು ಏರ್‌ಬ್ಯಾಗ್‌ಗಳಿದ್ದು, ಇದರೊಂದಿಗೆ ಎಬಿಎಸ್‌, ಇಬಿಡಿ ವ್ಯವಸ್ಥೆಯೂ ಇದೆ.

-ಈಶ

ಟಾಪ್ ನ್ಯೂಸ್

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.