ಒಪ್ಪಂದ; ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ


Team Udayavani, Oct 25, 2018, 4:35 PM IST

oneplus.jpg

ಮುಂಬೈ: ದೇಶದ ನಂ. ಒನ್ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್  ಜೊತೆಗೆ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ನಿರ್ಮಾತೃ ಒನ್‌ಪ್ಲಸ್ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯವಾಗಲಿದೆ.

ಗ್ರಾಹಕರು ದೇಶದೆಲ್ಲೆಡೆಯ ನಗರಗಳಲ್ಲಿ ಒನ್‌ಪ್ಲಸ್ ಮೊಬೈಲ್ ಫೋನುಗಳನ್ನು ಬಳಸಿ ನೋಡಲು ಹಾಗೂ ಕೊಂಡುಕೊಳ್ಳಲು, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಈ ಸಹಭಾಗಿತ್ವದ ಮೂಲಕ ಹೆಚ್ಚಿನ ಸಂಖ್ಯೆಯ ಕೇಂದ್ರಗಳನ್ನು ಒದಗಿಸುತ್ತಿವೆ.

ಆಫ್‌ಲೈನ್ ಚಾನೆಲ್ ಪಾರ್ಟ್‌ನರ್ ರೂಪದಲ್ಲಿ ರಿಲಯನ್ಸ್ ಡಿಜಿಟಲ್‌ನ ಪ್ರವೇಶದೊಡನೆ, ಅನುಕೂಲಕರ ಸ್ಥಳಗಳಲ್ಲಿರುವ ಮಳಿಗೆಗಳಲ್ಲಿ ಒನ್‌ಪ್ಲಸ್ ಉತ್ಪನ್ನಗಳನ್ನು ಬಳಸಿ ನೋಡುವ, ಆನ್‌ಲೈನ್‌ನಷ್ಟೇ ಬೆಲೆಯಲ್ಲಿ ಕೊಳ್ಳುವ ಅವಕಾಶ ಗ್ರಾಹಕರಿಗೆ ದೊರಕಲಿದೆ. ಇದರ ಜೊತೆಗೆ ಅವರು ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ನಡೆಸಲಾಗುವ ಪ್ರಚಾರ ಅಭಿಯಾನಗಳ ಲಾಭವನ್ನೂ ಪಡೆದುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಒನ್‌ಪ್ಲಸ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ವಿಕಾಸ್ ಅಗರ್‌ವಾಲ್, “ಭಾರತದಲ್ಲಿ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಮಾರುಕಟ್ಟೆ ಏಕಪ್ರಕಾರವಾಗಿ ಬೆಳೆಯುತ್ತಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳೆರಡನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡು ಗ್ರಾಹಕರನ್ನು ತಲುಪುವ ಮೂಲಕ ಒನ್‌ಪ್ಲಸ್ ಈ ಮಾರುಕಟ್ಟೆಯಲ್ಲಿ ಬೆಳೆಯಲು ಬಯಸುತ್ತದೆ. ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಸಹಭಾಗಿತ್ವದಿಂದಾಗಿ, ಹಲವು ನಗರಗಳಲ್ಲಿ ಬೆಳೆಯುತ್ತಿರುವ ತನ್ನ ಗ್ರಾಹಕ ಸಮುದಾಯವನ್ನು ಹೆಚ್ಚು ಸಶಕ್ತವಾದ ಭೌತಿಕ ಅಸ್ತಿತ್ವದೊಡನೆ ತಲುಪುವುದು ಒನ್‌ಪ್ಲಸ್‌ಗೆ ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಮಾತ್ರ ನೀಡುವ ರಿಲಯನ್ಸ್ ಡಿಜಿಟಲ್‌ನ ಗುರಿ ಹಾಗೂ ಒನ್‌ಪ್ಲಸ್‌ನ ಗ್ರಾಹಕಪರ ಸಿದ್ಧಾಂತಕ್ಕೆ ಉತ್ತಮ ಹೊಂದಾಣಿಕೆ ಇದೆ.” ಎಂದರು.

ಈ ಸಹಭಾಗಿತ್ವ ಕುರಿತು ವಿವರಿಸಿದ ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, “ಒನ್‌ಪ್ಲಸ್ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸಲು ರಿಲಯನ್ಸ್ ಡಿಜಿಟಲ್ ಸಂತೋಷಿಸುತ್ತದೆ. ನಾವು ಮಾರಾಟ ಮಾಡುವ ಉತ್ಪನ್ನಗಳ ಸಾಲಿಗೆ ಒನ್‌ಪ್ಲಸ್ 6Tಯನ್ನು ಸೇರಿಸಿಕೊಳ್ಳುವ ಮೂಲಕ, ಗ್ರಾಹಕರು ತಮ್ಮ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರಿಗೆ ವಿಶ್ವದರ್ಜೆಯ ರೀಟೇಲ್ ಅನುಭವ ನೀಡುವ ನಮ್ಮ ನಿರಂತರ ಪ್ರಯತ್ನದ ಕುರಿತು ಮತ್ತೊಮ್ಮೆ ಹೇಳಲು ಬಯಸುತ್ತಿದ್ದೇವೆ.” ಎಂದು ಹೇಳಿದರು.

ಭಾರತೀಯ ಮಾರುಕಟ್ಟೆಯ ಕುರಿತು ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಒನ್‌ಪ್ಲಸ್ ಪಾಲಿಗೆ ರಿಲಯನ್ಸ್ ಡಿಜಿಟಲ್ ಜೊತೆಗಿನ ಈ ಒಪ್ಪಂದವು ಮತ್ತೊಂದು ಜಾಗತಿಕ ಪ್ರಥಮ ಸಾಧನೆಯಾಗಿದೆ. ಕೌಂಟರ್‌ಪಾಯಿಂಟ್‌ ಮಾರ್ಕೆಟ್ ಮಾನಿಟರ್ ಸರ್ವಿಸ್‌ನ 2018ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಶೇ. 40ಕ್ಕೂ ಹೆಚ್ಚಿನ ಪಾಲಿನೊಡನೆ ಅಧಿಕ ಮೌಲ್ಯದ (ಪ್ರೀಮಿಯಂ) ಸ್ಮಾರ್ಟ್‌ಫೋನುಗಳ ಅತಿದೊಡ್ಡ ನಿರ್ಮಾತೃ ಎಂಬ ಹೆಗ್ಗಳಿಕೆಗೆ ಒನ್‌ಪ್ಲಸ್ ಪಾತ್ರವಾಗಿದೆ.

ಈ ಸಹಭಾಗಿತ್ವದ ಅನ್ವಯ, ಒನ್‌ಪ್ಲಸ್ ಹಾಗೂ ರಿಲಯನ್ಸ್ ಡಿಜಿಟಲ್ ಸಂಸ್ಥೆಗಳು ಗ್ರಾಹಕರ ಅನುಕೂಲಕ್ಕಾಗಿ ಲೈವ್ ಡೆಮೋ ಫೋನುಗಳೊಡನೆ ಪ್ರತ್ಯೇಕ ಎಕ್ಸ್‌ಪೀರಿಯೆನ್ಸ್ ಜೋನ್‌ಗಳನ್ನು ರೂಪಿಸಲಿವೆ. ಈ ಕೇಂದ್ರಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಕೂಡ ಇರಲಿದ್ದು ಗ್ರಾಹಕರು ಒನ್‌ಪ್ಲಸ್ ಸಾಧನಗಳನ್ನು ಕುರಿತ ತಮ್ಮ ಪ್ರಶ್ನೆಗಳಿಗೆ ಅವರಿಂದ ನೇರವಾಗಿ ಉತ್ತರ ಪಡೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

IIT Madras graduate Pawan Davuluri heads Microsoft Windows

Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ

1-qweewqe

Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.