ದೀಪ ಹಚ್ಚಿ…ಅಂಧಕಾರದಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ದೀಪಾವಳಿ


Team Udayavani, Oct 25, 2019, 1:53 PM IST

Deepa-light

ದೀಪಾವಳಿ ಹಬ್ಬ ಹೆಸರೇ ಸೂಚಿಸುವ ಹಾಗೆ ದೀಪ ಹಚ್ಚಿ ಸಂಭ್ರಮಿಸುವ ಹಬ್ಬ. ಅಂದರೆ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯುವ ಹಬ್ಬ. ಕೇವಲ ಪಟಾಕಿ ಹಚ್ಚಿ ಸಂಭ್ರಮ ಪಟ್ಟರೆ ಅದು ದೀಪಾವಳಿಯ ನಿಜವಾದ ಅರ್ಥ ನೀಡುವುದಿಲ್ಲ. ಪಟಾಕಿ ಕೇವಲ ನಮ್ಮ ಸಂತೋಷಕ್ಕೆ ಮಾತ್ರ. ದೀಪಾವಳಿಗೆ ನಿಜವಾದ ಅರ್ಥ ಬೇರೆನೇ ಇದೆ, ಅದೇನೆಂದರೆ ಅಂಧಕಾರದಲ್ಲಿ ಜೀವನ ನಡೆಸುತ್ತಿರುವವರು ಶ್ರಮದಿಂದ ಯಶಸ್ವಿಯಾಗುದವರು ಆಚರಿಸುವ ಹಬ್ಬವೇ ದೀಪಾವಳಿ.

ದೀಪದಿಂದ ದೀಪ ಹಚ್ಚಿ ಸಂಭ್ರಮಿಸುವುದು ಮಾತ್ರವಲ್ಲದೆ, ಅಂದು ಮನೆಯೆಲ್ಲಾ ದೀಪದ ಬೆಳಕಿನಿಂದ ಪ್ರಜ್ವಲಿಸುತ್ತಿರುತ್ತದೆ. ಮನೆ ಮನಸ್ಸಿನ ತುಂಬೆಲ್ಲಾ ಸಂಭ್ರಮದ ಛಾಯೆ ಹಬ್ಬಿರುತ್ತದೆ. ಮನೆಯಿಂದ ದೂರ ಇರುವವರೆಲ್ಲಾ ಈ ದೀಪಾವಳಿ ಹಬ್ಬದಂದು ಮನೆಗೆ ಬಂದು ಮನೆಯವರ ಜೊತೆ ಸಡಗರ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಇತ್ತ ಮನೆಯಲ್ಲಿ ಅಮ್ಮ ಬಗೆಬಗೆಯ ತಿಂಡಿ ತನಸುಗಳನ್ನು ಮಾಡಿ ಉಣಬಡಿಸುವ ಖುಷಿಯಲ್ಲಿದ್ದರೆ, ಮಕ್ಕಳೆಲ್ಲಾ ಹೊಸ ಧಿರಿಸುಗಳನ್ನು ಧರಿಸಿಕೊಳ್ಳುವ ಖುಷಿ ಹಾಗೆ ಪಟಾಕಿ ಹೊಡೆಯುವ ಸಂಭ್ರಮದಲ್ಲಿ ತೊಡಗಿರುತ್ತಾರೆ. ಹೀಗೆ ಮನೆಯ ತುಂಬೆಲ್ಲಾ ಹಬ್ಬದ ಕಲೆ ಪಸರಿಸಿರುತ್ತದೆ.

ದೀಪಾವಳಿ ಹಬ್ಬದಂದು ಬೆಳಗ್ಗಿನಿಂದಲೇ ಒಂದು ರೀತಿಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಅಂದು ಹೆಣ್ಣು ಮಕ್ಕಳಿಗೆ ಮನೆಯ ಮುಂದೆ ರಂಗೋಲಿ ಹಾಕಿ ಮನೆಯೆಲ್ಲಾ ಅಲಂಕಾರ ಮಾಡಿ ಮನೆಗೆ ಹೊಸ ಕಳೆಯನ್ನೆ ತಂದಿರುತ್ತಾರೆ. ಸಂಜೆಯಾಗುತ್ತಿದಂತೆ ಮನೆಯ ಸುತ್ತೆಲ್ಲಾ ಹಣತೆಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ.

ಹಬ್ಬದ ವಾತಾವರಣ ಅಂದರೆ ಅಲ್ಲಿ ಪಟಾಕಿ ಸದ್ದು ಕೇಳಿಸಿಯೇ ಕೇಳಿಸುತ್ತದೆ. ಅದರಲ್ಲೂ ದೀಪಾವಳಿ ಹಬ್ಬವೆಂದರೆ ಜನರಿಗೆ ಅದೇನೋ ವಿಶೇಷ. ಅಂದಂತ್ತೂ ತುಸು ಹೆಚ್ಚೇ ಪಟಾಕಿ ಸದ್ದು ಎಲ್ಲರ ಮನೆಯಲ್ಲಿ ಕೇಳಿಸುತ್ತದೆ. ಅದಕ್ಕೆಂದೇ ತರತರಹದ ಪಟಾಕಿಗಳು ಮಾರುಕಟ್ಟೆಗಳಿಗೆ ಇಳಿದಿರುತ್ತವೆ. ಅಂದು ಪಟಾಕಿ ಖರೀದಿ ಮಾಡುವುದೇ ಒಂದು ಖುಷಿ. ಸಣ್ಣ ಸಣ್ಣ ಮಕ್ಕಳೆಲ್ಲಾ ಶಬ್ದ ಬರದಂತಹ ಪಟಾಕಿಗಳನ್ನು ಬಳಕೆ ಮಾಡಿ ಖುಷಿ ಪಟ್ಟರೇ ಇತ್ತ ಯುವ ಪೀಳಿಗೆ ಹೆಚ್ಚು ಶಬ್ದ ಬರುವಂತಹ ಪಟಾಕಿಗಳನ್ನೇ ಖರೀದಿ ಮಾಡುತ್ತಾರೆ.

ಪಟಾಕಿ ಹಚ್ಚಿ ಸಂಭ್ರಮ ಪಡುವುದು ಕೇವಲ ಅವರ ಖುಷಿಯ ಸಲುವಾಗಿ ಅದರಾಚೆಗೆ ಅಗಾಧ ಪ್ರಮಾಣದಲ್ಲಿ ಪರಿಸರಕ್ಕೆ ತೊಂದರೆಗಳು ಆಗುತ್ತದೆ. ಅದರ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ. ಈ ಪಟಾಕಿ ಸಿಡಿಸುವುದರಿಂದ ಕೇವಲ ಪರಿಸರಕ್ಕೆ ಹಾನಿ ಮಾತ್ರ ಆಗುವುದಲ್ಲದೆ ಪ್ರಾಣಿ ಪಕ್ಷಿಗಳಿಗೂ ಸಮಸ್ಯೆಗಳು ಆಗುತ್ತವೆ. ಹೆಚ್ಚೆಚ್ಚು ಶಬ್ದ ಇರುವಂತಹ ಪಟಾಕಿಗಳನ್ನು ಸಿಡಿಸಿದಾಗ ಮನೆಯಲ್ಲಿ ಸಾಕುವ ಪ್ರಾಣಿಗಳಿಗೆ ಸಮಸ್ಯೆ ಆಗುತ್ತದೆ. ಮನೆಯಲ್ಲಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದವರಿದ್ದರೆ ಅಂತವರಿಗೂ ಸಮಸ್ಯೆ ಕಟ್ಟಿ ಇಟ್ಟ ಬುತ್ತಿ ಇದ್ದಂತೆ.

ಅದರಿಂದಾಗಿ ಆದಷ್ಡೂ ಪರಿಸರ ಸ್ನೇಹಿ ಪಟಾಕಿಗಳನ್ನು ಬಳಕೆ ಮಾಡಿದರೆ ನಮಗೂ ಹಾಗೂ ಪ್ರಾಣಿ ಪಕ್ಷಿಗಳಿಗೂ ಒಳಿತು. ದೀಪಾವಳಿ ಹಬ್ಬದ ಕೊನೆಯ ದಿನ ತುಂಬಾನೇ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಅದರ ಮರುದಿನ ಟಿವಿ ಮಾದ್ಯಮಗಳಲ್ಲಿ ಪಟಾಕಿಗಳಿಂದ ತೊಂದರೆ ಗೀಡಾದ ಸುದ್ದಿಗಳೇ ಕೇಳಸಿಗುವುದು ಹೆಚ್ಚು. ಆದ್ದರಿಂದ ಇನ್ನಾದರೂ ಪಟಾಕಿ ಸಿಡಿಸುವಾಗ ಎಚ್ಚರ ವಹಿಸಿದರೆ ಮುಂದೆ ಸಮಸ್ಯೆಗಳಾಗದಂತೆ ತಡೆಯಬಹುದು.

ಈ ಹಿಂದೆಯೇ ಪರಿಸರ ಸ್ನೇಹಿ ಪಟಾಕಿಗಳ ಉಲ್ಲೇಖ ಇತ್ತು, ಆದರೆ ಈ ಬಾರಿಯ ದೀಪಾವಳಿ ಹಬ್ಬ ಜನರಿಗೆ ತೊಂದರೆಯಾಗದಂತೆ ಹಾಗೇ ಪರಿಸರಕ್ಕೂ ಹಾನಿಯಾಗದಂತೆ ಪರಿಸರ ಸ್ನೇಹಿ ಪಟಾಕಿ ಮಾರುಕಟ್ಟೆಗೆ ಬರಲಾರಂಭಿಸಿವೆ. ಈ ಒಂದು ಮಹತ್ವದ ಕಾರ್ಯಕ್ಕೆ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸಲ್ಟ್ಸ್ ಲ್ಯಾಬೋರೇಟರಿ ಸಹಾಯಕವಾಗಿದೆ. ಇಲ್ಲಿ ತಯಾರು ಮಾಡಿದ ಪಟಾಕಿಗಳಲ್ಲಿ ಸೌಂಡ್ ಎಮಿಟಿಂಗ್ ಕ್ರ್ಯಾಕರ್ಸ್, ಪೆನ್ಸಿಲ್, ಫ್ಲವರ್ ಕ್ರ್ಯಾಕರ್ಸ್ ಮತ್ತು ಸ್ಪಾಕ್ರ್ಲರಸ್ಗಳು ಇವೆಲ್ಲವುಗಳನ್ನು ಒಳಗೊಂಡಿದೆ. ಆದ್ದರಿಂದ ಈ ಬಾರಿಯಾದರೂ ಪರಿಸರಕ್ಕೆ ಹಾನಿಯಾಗದೆ ಹಣತೆ ಹಚ್ಚಿ ದೀಪಾವಳಿ ಹಬ್ಬವನ್ನು ಸಂಭ್ರಮಿಸೋಣ.

*ಗಾಯತ್ರಿ ಗೌಡ
ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ
ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ ಉಜಿರೆ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.