ಆರದಿರಲಿ ಬೆಳಕು…
Team Udayavani, Oct 25, 2019, 5:40 PM IST
ಆರದಿರಲಿ ಬೆಳಕು…
ಮತ್ತೆ ಬಂದಿದೆ ದೀಪಾವಳಿ ಸಂಭ್ರಮ,
ಆಗಲಿ ಭಕ್ತಿ ಭಾವದ ಸಂಗಮ!!
ಕತ್ತಲೆ ಸರಿದು ಬೆಳಗಲಿ ಹಣತೆ,
ದೀಪದಿಂದ ದೀಪಕೆ ಹೆಚ್ಚಲಿ ಬೆಳಕಿನ ಪ್ರಖರತೆ!!
ಆಧುನಿಕತೆಯ ನೆಪದಲ್ಲಿ ಸಂಪ್ರದಾಯದ ಕಡೆಗಣನೆ ಸಾಕು,
ಬಣ್ಣದಂಗಿ, ಎಣ್ಣಿಸ್ನಾನ,
ಅಪ್ಪ ತಂದ ಪಟಾಕಿ,
ಅಮ್ಮ ಮಾಡಿದ ದೋಸೆ, ಎಲ್ಲವೂ ಬೇಕು!!
ಧಾಂ ಧೂಂ ಸದ್ದಿನೊಂದಿಗೆ,
ವ್ಯಾಸ್ತವ ಮರೆಯದಿರೋಣ,
ಬೆಳಕಿನ ಆಟದೊಂದಿಗೆ , ಜಾಗರೂಕತೆ ಪಾಲಿಸೋಣ !!
ಬೆಳಕಿನ ಪ್ರಖರತೆಯಲ್ಲಿ,
ಕಣ್ಣಿನ ದೃಷ್ಟಿ ಮಬ್ಬಾಗದಿರಲಿ,
ಎಲ್ಲರ ಜವಾಬ್ದಾರಿಯೊಂದಿಗೆ ಸ್ವಯಃರಕ್ಷಣೆ ನೆನಪಿರಲಿ!!
–ಕೆ. ಎಸ್. ಜಯಲಕ್ಷ್ಮೀ ಮುನಿಯಾಲು.