ದಕ್ಷಿಣ ಸಮರ ಕ್ಷಣ ರೋಚಕ ಕಣ


Team Udayavani, May 19, 2019, 9:35 AM IST

vote

ದೇಶಾದ್ಯಂತ ಒಂದೊಂದು ಲೋಕಸಭಾ ಕ್ಷೇತ್ರವೂ ಒಂದೊಂದು ರೀತಿಯಲ್ಲಿ ವಿಶೇಷತೆ ಪಡೆದುಕೊಂಡಿದೆ. ದಿಗ್ಗಜ ನಾಯಕರಿಂದ ಹಿಡಿದು, ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವವರೂ ಸದ್ದು ಮಾಡುತ್ತಿದ್ದಾರೆ. ಈ ಬಾರಿಯ ಲೋಕಸಭೆಯ ಟಾಪ್‌ 50 ಕ್ಷೇತ್ರಗಳ ಪೈಕಿ ಕೊನೆಯ ಕಂತಿನಲ್ಲಿ ಕರ್ನಾಟಕದ ಏಳು,  ಉತ್ತರ ಭಾರತದ ಮೂರು ಸೇರಿದಂತೆ 14 ಕ್ಷೇತ್ರಗಳ ಸಮರ ಚಿತ್ರಣ ಇಲ್ಲಿದೆ.

ಹಾಸನ (ಕರ್ನಾಟಕ)
ಎ.ಮಂಜು (ಬಿಜೆಪಿ) Vs ಪ್ರಜ್ವಲ್‌ ರೇವಣ್ಣ (ಜೆಡಿಎಸ್‌)
* ದೇವೇಗೌಡರು ಸ್ಪರ್ಧಿಸಬೇಕೆಂದಿದ್ದ ಕ್ಷೇತ್ರದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಪುತ್ರ ಸ್ಪರ್ಧೆ.
* ಕಾಂಗ್ರೆಸ್‌ನಲ್ಲಿದ್ದ ಎ.ಮಂಜು ಬಿಜೆಪಿ ಸೇರ್ಪಡೆಗೊಂಡು ಸ್ಪರ್ಧಾಳುವಾಗಿದ್ದಾರೆ.
* ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಹಲವು ಸಂದಿಗ್ಧತೆ ನಡುವೆಯೂ ಪ್ರಚಾರ ನಡೆಸಿದ್ದರು. ಈ ಬಾರಿ ಯಾರು ಗೆಲ್ಲಬಹುದು ಎನ್ನುವ ವಿಚಾರವು ರಾಜ್ಯಾದ್ಯಂತ ತೀವ್ರ ಕುತೂಹಲ ಹುಟ್ಟುಹಾಕಿದೆ.

ಮಂಡ್ಯ (ಕರ್ನಾಟಕ)
ಸುಮಲತಾ (ಪಕ್ಷೇತರ) Vs ನಿಖೀಲ್‌ (ಜೆಡಿಎಸ್‌)
* ಚುನಾವಣೆ ಘೋಷಣೆ ಮುನ್ನವೇ ರಂಗು ಪಡೆದ ಕ್ಷೇತ್ರವಿದು.
* ಈ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸುಮಲತಾ ಮತ್ತು ಜೆಡಿಎಸ್‌ನಿಂದ ಸಿಎಂ ಪುತ್ರ ನಿಖೀಲ್‌ ಸ್ಪರ್ಧಿಸಲಿದ್ದಾರೆ ಎಂದಾದಾಗ ಮತ್ತಷ್ಟು ಬಿರುಸಾಯ್ತು ಪ್ರಚಾರ.
* ಜೆಡಿಎಸ್‌ ನಾಯಕರ ವಿವಾದಾತ್ಮಕ ಹೇಳಿಕೆಗಳು ಸುಮಲತಾಗೆ ವರವಾಗುವುದೇ ಕಾದು ನೋಡಬೇಕಿದೆ.

ತುಮಕೂರು (ಕರ್ನಾಟಕ)
ಎಚ್‌.ಡಿ.ದೇವೇಗೌಡ (ಜೆಡಿಎಸ್‌) Vs ಬಿ.ಎಸ್‌.ಬಸವರಾಜು (ಬಿಜೆಪಿ)
* ಬಹಳ ಲೆಕ್ಕಾಚಾರದ ಬಳಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
* ಕಷ್ಟದಲ್ಲಿ ಹಾಲಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡರಿಂದ ನಾಮಪತ್ರ ವಾಪಸ್‌.
* ಬಿಜೆಪಿಯಿಂದ ಮಾಜಿ ಸಂಸದ ಬಿ.ಎಸ್‌.ಬಸವರಾಜು ಸ್ಪರ್ಧಿಸಿರುವ ಕಣದಲ್ಲಿ ಈಗ ಗರಿಗೆದರಿದ ಕುತೂಹಲ.

ಉತ್ತರ ಕನ್ನಡ (ಕರ್ನಾಟಕ)
ಅನಂತ ಕುಮಾರ್‌ ಹೆಗಡೆ (ಬಿಜೆಪಿ) Vs ಆನಂದ ಅಸ್ನೋಟಿಕರ್‌ (ಜೆಡಿಎಸ್‌)
* ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ನೇರ ಹೋರಾಟವಿದೆ. ಅಸ್ನೋಟಿಕರ್‌ ನಾಮಪತ್ರ ಸಲ್ಲಿಕೆ ವೇಳೆ ಪ್ರಮುಖರು ಗೈರುಹಾಜರಾಗಿದ್ದರು.
* ಬಿಜೆಪಿಯಲ್ಲಿ ಕೂಡ ಬಣಗಳು ಇದ್ದು, ಅದು ಕೇಂದ್ರ ಸಚಿವರಿಗೆ ಮುಳುವಾಗುವ ಲಕ್ಷಣ.
* ಜೆಡಿಎಸ್‌ ಪರ ಕೆಲಸ ಮಾಡಲು ಕಾಂಗ್ರೆಸ್‌ನ ಕೆಲವರು ಹಿಂದೇಟು ಹಾಕಿದ್ದರು.

ಬೆಂಗಳೂರು ಉತ್ತರ (ಕರ್ನಾಟಕ)
ಡಿ.ವಿ.ಸದಾನಂದ ಗೌಡ (ಬಿಜೆಪಿ) Vs ಕೃಷ್ಣ ಬೈರೇಗೌಡ (ಕಾಂಗ್ರೆಸ್‌)
* ದೇವೇಗೌಡರು ಇಲ್ಲಿಂದ ಸ್ಪರ್ಧೆ ಮಾಡುವ ಮಾತುಗಳಿದ್ದವು. ಅಂತಿಮವಾಗಿ ಸಚಿವ ಕೃಷ್ಣ ಬೈರೇಗೌಡರು ಸ್ಪರ್ಧಿಸಿದ್ದಾರೆ.
* 2004ರಿಂದ ಬಿಜೆಪಿ ಹಿಡಿತದಲ್ಲಿರುವ ಈ ಕ್ಷೇತ್ರದಲ್ಲಿ ಡಿ.ವಿ.ಸದಾನಂದ ಗೌಡ ಅವರು 2ನೇ ಬಾರಿಗೆ ಗೆಲ್ಲುವ ಭರವಸೆಯಲ್ಲಿ ಇದ್ದಾರೆ.
* ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರ ಸಂಖ್ಯೆ ಅಧಿಕವಿದೆ.

ಬೆಂಗಳೂರು ದಕ್ಷಿಣ (ಕರ್ನಾಟಕ)
ಹರಿಪ್ರಸಾದ್‌ (ಕಾಂಗ್ರೆಸ್‌) Vs ತೇಜಸ್ವಿ ಸೂರ್ಯ (ಬಿಜೆಪಿ)
* ಬಿಜೆಪಿಯಿಂದ ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್‌ ನೀಡುವ ಮಾತುಗಳು ಇದ್ದರೂ, ಕೊನೆಗೆ ಸಿಕ್ಕಿದ್ದು ತೇಜಸ್ವಿ ಸೂರ್ಯಗೆ.
* ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಕಣಕ್ಕೆ. 1999ರಲ್ಲಿ ಪ್ರಸಾದ್‌ ಸೋತಿದ್ದರು.
*1996ರಿಂದ ಈ ಕ್ಷೇತ್ರದಲ್ಲಿ ಅನಂತ ಕುಮಾರ್‌ ಅವರೇ ಜಯ ಸಾಧಿಸುತ್ತಾ ಬಂದಿದ್ದರು.

ಗುಲ್ಬರ್ಗ (ಕರ್ನಾಟಕ)
ಮಲ್ಲಿಕಾರ್ಜು ಖರ್ಗೆ (ಕಾಂಗ್ರೆಸ್‌) Vs ಡಾ| ಉಮೇಶ್‌ ಜಾಧವ್‌ (ಬಿಜೆಪಿ)
* ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಬಿಜೆಪಿಯಿಂದ ಡಾ| ಉಮೇಶ್‌ ಜಾಧವ್‌ ಕಣಕ್ಕೆ.
* ಮೋದಿ ಪ್ರಧಾನಿಯಾಗುವುದು ಎಷ್ಟು ಸತ್ಯವೋ, ಗುಲ್ಬರ್ಗದಲ್ಲಿ ಜಾಧವ್‌ ಗೆಲುವುದೂ ಅಷ್ಟೇ ಸತ್ಯ ಎನ್ನುತ್ತಾರೆ ಬಿಜೆಪಿ ನಾಯಕರು.
* ಖರ್ಗೆಯವರು ಕ್ಷೇತ್ರದ ಜನರು ತಮ್ಮ ಕೈಬಿಡುವುದಿಲ್ಲ ಎಂಬ ವಿಶ್ವಾಸವನ್ನು ಪದೇ ಪದೆ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು (ಕೇರಳ)
ಕೆ.ಪಿ.ಸತೀಶ್ಚಂದ್ರನ್‌ (ಎಲ್‌ಡಿಎಫ್) Vs ರಾಜಮೋಹನ್‌ ಉಣ್ಣಿತ್ತಾನ್‌ (ಯುಡಿಎಫ್)
* 1989ರಿಂದಲೇ ಇಲ್ಲಿ ಯುಡಿಎಫ್ ಗೆಲ್ಲುತ್ತಿದೆ. ಕಾಲಕ್ಕೆ ತಕ್ಕಂತೆ ಅಭ್ಯರ್ಥಿಗಳು ಬದಲಾಗಿದ್ದಾರೆ.
* ಈ ಬಾರಿ ಬಿಜೆಪಿ ಕುಂಟಾರು ರವೀಶ ತಂತ್ರಿಯವರನ್ನು ಕಣಕ್ಕಿಳಿಸಿದೆ. ಶಬರಿಮಲೆ ವಿವಾದ ಹಿಂದೂ ಮತದಾರರ ಮೇಲೆ ಪ್ರಭಾವ ಬೀರಿದೆ.
* ಬಿಜೆಪಿಗೆ ಹಿಂದಿನ ಬಾರಿಗಿಂತ ಹೆಚ್ಚು ಅನುಕೂಲವಾಗಿ ಇರಲಿದೆ ಎಂಬ ವಿಶ್ಲೇಷಣೆಗಳಿವೆ.

ವಯನಾಡ್‌ (ಕೇರಳ)
ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಪಿ.ಪಿ.ಸುನೀರ್‌  (ಸಿಪಿಐ)
*ಅಮೇಠಿ ಜತೆಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಪರ್ಧಿಸಿರುವ 2ನೇ ಮತ್ತು ಅಲ್ಪಸಂಖ್ಯಾಕ‌ರೇ ಹೆಚ್ಚಾಗಿರುವ ಕ್ಷೇತ್ರ.
* ಬಿಜೆಪಿಯ ಮೈತ್ರಿ ಪಕ್ಷ ಭಾರತೀಯ ಧರ್ಮ ಜನಸೇನಾ ಅಭ್ಯರ್ಥಿ ಕಣದಲ್ಲಿದ್ದರೂ, ಮತ ವಿಭಜನೆಗೆ ಹೆಚ್ಚಿನ ಪರಿಣಾಮ ಇರಲಾರದು.
*ಕಾಂಗ್ರೆಸ್‌ ಹೇಳಿಕೊಳ್ಳುವ ಪ್ರಕಾರ ಕ್ಷೇತ್ರದಲ್ಲಿ ಪಕ್ಷದ ಅಧ್ಯಕ್ಷರ ಪರವಾಗಿಯೇ ಅಲೆ ಇದೆ. 4 ಕ್ಷೇತ್ರಗಳಲ್ಲಿ ಯುಡಿಎಫ್ ಶಾಸಕರಿದ್ದಾರೆ.

ಶಿವಗಂಗಾ (ತಮಿಳುನಾಡು)
ಕಾರ್ತಿ ಚಿದಂಬರಂ (ಕಾಂಗ್ರೆಸ್‌) Vs ಎಚ್‌.ರಾಜಾ (ಬಿಜೆಪಿ)
*ಏಳು ಬಾರಿ ಪಿ.ಚಿದಂಬರಂ ಪ್ರತಿನಿಧಿಸಿದ್ದ ಕ್ಷೇತ್ರವಿದು. 2014ರಲ್ಲಿ ಸ್ಪರ್ಧಿಸಿದ್ದ ಕಾರ್ತಿ ಚಿದಂಬರಂ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. * ಕಾಂಗ್ರೆಸ್‌ ನಾಯಕ ಇ.ಎಂ.ಸುದರ್ಶನ ನಾಚಿಯಪ್ಪನ್‌ಗೆ ಟಿಕೆಟ್‌ ಕೊಡದೇ ಇದ್ದದ್ದು ಸ್ಥಳೀಯ ಮುಖಂಡರಿಗೆ ಆಕ್ರೋಶ ತರಿಸಿದೆ.
* ಎಐಎಡಿಎಂಕೆ ಬೆಂಬಲ ನೀಡಿರುವುದರಿಂದಾಗಿ ಕ್ಷೇತ್ರದಲ್ಲಿ ಗೆಲ್ಲಬಹುದೆಂಬ ವಿಶ್ವಾಸ ಬಿಜೆಪಿಯದ್ದು.

ನಿಜಾಮಾಬಾದ್‌ (ತೆಲಂಗಾಣ)
ಕೆ.ಕವಿತಾ (ಟಿಆರ್‌ಎಸ್‌) Vs ಮಧು ಯಾಶ್ಕಿ ಗೌಡ್‌ (ಕಾಂಗ್ರೆಸ್‌)
* ಅಮೆರಿಕದಲ್ಲಿ ಟೆಕ್ಕಿ ಆಗಿದ್ದ ಕೆ.ಕವಿತಾ, 2014ಲ್ಲಿ ಗೆದ್ದಿದ್ದರು. ತಂದೆ ಚಂದ್ರಶೇಖರ ರಾವ್‌ ಸಿಎಂ ಆಗಿರುವುದರಿಂದ ಅನುಕೂಲದ ಸ್ಥಿತಿ.
* 178 ಮಂದಿ ರೈತರು ತಮ್ಮ ದಯನೀಯ ಸ್ಥಿತಿ ಜಾಹೀರುಗೊಳಿಸಲು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಗೈರತ್ತು.
* ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಆರ್‌ಎಸ್‌ ಶಾಸಕರೇ ಇರುವುದು ಧನಾತ್ಮಕ ಸ್ಥಿತಿ.

ಗುಣಾ (ಮಧ್ಯಪ್ರದೇಶ)
ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌) Vs ಡಾ| ಕೆ.ಪಿ.ಯಾದವ್‌ (ಬಿಜೆಪಿ)
* ನಾಲ್ಕು ಬಾರಿ ಗೆದ್ದಿರುವ ಸಿಂಧಿಯಾಗೆ ಈ ಬಾರಿಯೂ ನಿರಾಯಾಸ ಜಯ ಸಾಧ್ಯತೆ.
* ಬಿಎಸ್‌ಪಿ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆದಿರುವುದರಿಂದ ಮಾಯಾ ಕೋಪ ಪ್ರಭಾವ ಬೀರುವ ಸಾಧ್ಯತೆ.
* ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಾಳಿಯನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು ಸಿಂಧಿಯಾ.

ಹಝಾರಿಬಾಗ್‌ (ಜಾರ್ಖಂಡ್‌)
ಜಯಂತ್‌ ಸಿನ್ಹಾ (ಬಿಜೆಪಿ) Vs ಗೋಪಾಲ್‌ ಸಾಹು (ಕಾಂಗ್ರೆಸ್‌)
* ಜಾರ್ಖಂಡ್‌ ಮುಕ್ತಿ ಮೋರ್ಚಾ ಜತೆ ಕಾಂಗ್ರೆಸ್‌ ಮೈತ್ರಿಯಿಂದ ಸಿನ್ಹಾಗೆ ಪರಿಸ್ಥಿತಿ ಕಠಿನ.
* ಜೆಎಂಎಂ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಟಿಕೆಟ್‌ ನೀಡದೆ ಇರುವುದು ಕೊಂಚ ಅನುಕೂಲ.
* ಯಶವಂತ್‌ ಸಿನ್ಹಾ ಕೇಂದ್ರದ ವಿರುದ್ಧ ಮಾಡುವ ಟೀಕೆಗಳು ಬಿಜೆಪಿಗೆ ಪ್ರತಿಕೂಲವಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಆದರೆ ಇದನ್ನು ಜಯಂತ್‌ ನಿರಾಕರಿಸುತ್ತಾರೆ.

ಉನ್ನಾವ್‌ (ಉತ್ತರ ಪ್ರದೇಶ)
ಸಾಕ್ಷಿ ಮಹಾರಾಜ್‌ (ಬಿಜೆಪಿ) VS ಅರುಣ್‌ ಶಂಕರ್‌ ಮಿಶ್ರಾ (ಎಸ್‌ಪಿ)
* 2 ದಶಕಗಳ ಅವಧಿಯಲ್ಲಿ ಒಬ್ಬ ಸಂಸದ ಸತತ 2ನೇ ಬಾರಿಗೆ ಗೆದ್ದ ಉದಾಹರಣೆ ಇಲ್ಲ.
* ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೇ ಪ್ರಮುಖವಾದ್ದರಿಂದ ಎಸ್ಪಿಯಿಂದ ಬ್ರಾಹ್ಮಣ ಮುಖಂಡನಿಗೆ ಟಿಕೆಟ್‌.
* ಕಾಂಗ್ರೆಸ್‌ನಿಂದ ಅನು ಟಂಡನ್‌ ಸ್ಪರ್ಧೆ ಮತ್ತು ಮೋದಿ ಪ್ರಭಾವಳಿ ಬಿಜೆಪಿಗೆ ಅನುಕೂಲ. ಸಾಕ್ಷಿ ಮಹಾರಾಜ್‌ ಅವರ ಬೆಂಬಲಿಗ ಪಡೆಯೂ ಬೃಹತ್ತಾಗಿರುವುದರಿಂದ ಅವರೇ ಗೆಲ್ಲುವ ಸಾಧ್ಯತೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ?

urmila

ತಾರಾ ವರ್ಚಸ್ಸಿನ 7 ಕ್ಷೇತ್ರಗಳು

parliment

ಕಣ ಕುತೂಹಲ ಕ್ಷಣ ರೋಚಕ: ಟಾಪ್‌ ಕ್ಷೇತ್ರಗಳ ಕಿರುನೋಟ

vote

ಕಣ ಕುತೂಹಲ ಕ್ಷಣ ರೋಚಕ 2019ರ ಲೋಕಸಭೆ ಚುನಾವಣೆ

Chandrasekhar-Rao,-MK-Stalin,

ಸ್ಟಾಲಿನ್‌ ಭೇಟಿಗೆ ಕೆಸಿಆರ್‌ ಮತ್ತೊಮ್ಮೆ ಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.