ಮುಳಿಯ ಕೇಶವ್ ಭಟ್ ಮನೆಗೆ ನಳಿನ್ ಭೇಟಿ
Team Udayavani, Apr 15, 2019, 1:59 PM IST
ಪುತ್ತೂರು: ನಗರದ ಮುಳಿಯ ಜುವೆಲ್ಲರಿಯ ಮಾಲಕರಾದ ಮುಳಿಯ ಕೇಶವ್ ಭಟ್ ಇವರ ಮನೆಗೆ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್ ಮಿಜಾರ್, ಚುನಾವಣಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ನಗರ ಬಿಜೆಪಿ ಅಧ್ಯಕ್ಷ ಜೀವಂದರ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಳಿಯ ಕೇಶವ ಪ್ರಸಾದ್ ಅವರ ಮಗಳು ರಚಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ಚಿತ್ರವನ್ನು ವೀಕ್ಷಿಸಿದ ನಳಿನ್ ಕುಮಾರ್ ಕಟೀಲ್ ಇವರು ಪ್ರಶಂಸೆ ವ್ಯಕ್ತ ಪಡಿಸಿದರು.