ಎಲೆಕ್ಷನ್ಗೆ 1344 ಕೋಟಿ ಕಮಿಷನ್ ಬಳಕೆ: ಶ್ರೀರಾಮುಲು
Team Udayavani, Apr 5, 2019, 6:10 AM IST
ರಾಯಚೂರು: ಕಾಮಗಾರಿ ನಿರ್ವಹಿಸದೆ ಮುಂಗಡ ಹಣವನ್ನು ಪಡೆದು ಚುನಾವಣೆಗೆ ಬಳಸಿಕೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಬಿ. ಶ್ರೀರಾಮುಲು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಐಟಿ ದಾಳಿ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಕೆಲಸಗಳನ್ನೇ ಆರಂಭಿಸದೆ 1,344 ಕೋಟಿ ರೂ. ಕಮಿಷನ್ ಹಣವನ್ನು ಮುಂಗಡವಾಗಿ ಪಡೆದಿರುವ ಸಂಗತಿ ಐಟಿ ದಾಳಿಯಿಂದ ಬಯಲಾಗಿದೆ. ಆ ಹಣವನ್ನು ಮಂಡ್ಯ, ಹಾಸನ ಭಾಗದಲ್ಲಿ ಚುನಾವಣೆಗೆ ಬಳಸಲಾಗುತ್ತಿದೆಎಂದರು.