ಆಪ್‌ ನೊಗ ಮಾನ್‌ ಹೆಗಲಮೇಲೆ


Team Udayavani, May 15, 2019, 5:41 AM IST

37

ದೆಹಲಿ ನಂತರ ಆಮ್‌ ಆದ್ಮಿ ಪಕ್ಷ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತಿರುವುದು ಪಂಜಾಬ್‌ನಲ್ಲಿ. ಆ ರಾಜ್ಯದಲ್ಲಿ ಅರವಿಂದ್‌ ಕೇಜ್ರಿವಾಲ್ ಪಕ್ಷದ ನೊಗವನ್ನು ಹೊರಿಸಿರುವುದು ಕಾಮಿಡಿಯನ್‌ನಿಂದ ರಾಜಕಾರಣಿಯಾಗಿ ಬದಲಾದ ಸಂಗರೂರ್‌ ಕ್ಷೇತ್ರದ ಸಂಸದ ಭಗವಂತ್‌ ಮಾನ್‌ರ ಹೆಗಲ ಮೇಲೆ. ಸಂಗರೂರ್‌ ಕ್ಷೇತ್ರದ ಸಂಸದರಾಗಿರುವ ಭಗವಂತ್‌ ಮಾನ್‌ ಅವರು ತುಸು ಒರಟು ಸ್ವಭಾವದ ವ್ಯಕ್ತಿ ಎಂದು ಗುರುತಿಸಿಕೊಂಡವರು. ಅವರು ಯಾವಾಗಲೂ ಮದ್ಯದ ಅಮಲಿನಲ್ಲೇ ಇರುತ್ತಾರೆ ಎನ್ನುವುದು ಎದುರಾಳಿಗಳ ಆರೋಪ. ಆದರೆ ಮಾನ್‌ಗೆ ಹೆದರಿ ಪ್ರತಿಪಕ್ಷಗಳು ಇಂಥ ಸುಳ್ಳು ಆರೋಪ ಮಾಡುತ್ತವೆ ಎನ್ನುವುದು ಆಪ್‌ನ ವಾದ.

ಇದೇನೇ ಇದ್ದರೂ ಭಗವಂತ್‌ ಮಾನ್‌ ಅವರ ಹೆಸರಂತೂ ಪಂಜಾಬ್‌ ರಾಜಕೀಯ ವಲಯದಲ್ಲಿ ಜನಜನಿತವಾಗಿದೆ. 2014ರ ಚುನಾವಣೆಯಲ್ಲಿ ಅವರು ಶಿರೋಮಣಿ ಅಕಾಲಿದಳದ ಸುಖದೇವ್‌ ಸಿಂಗ್‌ ಢಿಂಡ್ಸಾರನ್ನು ಸುಮಾರು 2.1 ಲಕ್ಷ ಮತಗಳ ಅಂತರದಿಂದ ಸೋಲಿಸಿ ಸದ್ದು ಮಾಡಿದ್ದರು. ಅವರ ಗೆಲುವು ಶಿರೋಮಣಿ ಅಕಾಲಿದಳಕ್ಕೆ ನಿಜಕ್ಕೂ ದೊಡ್ಡ ಆಘಾತ ತಂದಿಟ್ಟಿತ್ತು. ಈಗ ಭಗವಂತ್‌ ಮಾನ್‌ರ ಸೋಲು/ಗೆಲುವು ಪಂಜಾಬ್‌ನಲ್ಲಿ ಆಪ್‌ನ ಭವಿಷ್ಯವನ್ನು ನಿರ್ಧರಿಸಲಿದೆ.

ಈ ಬಾರಿ ಆಪ್‌ವಿರುದ್ಧವಾಗಿ ಶಿರೋಮಣಿ ಅಕಾಲಿ ದಳವು ಹಿರಿಯ ನಾಯಕ ಪರಮಿಂದ್‌ ಢೀಂಡಸಾ ಅವರನ್ನು ಅಖಾಡಕ್ಕೆ ಇಳಿಸಿದೆ. ಅಕಾಲಿ-ಬಿಜೆಪಿ ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ ವಿತ್ತ ಮಂತ್ರಿಯಾಗಿ ಅನುಭವವಿರುವ ಪರಮಿಂದರ್‌ ಸಂಗರೂರ್‌ ಕ್ಷೇತ್ರದಲ್ಲಿ ಬರುವ ಲೆಹರ್‌ಗಾಗಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದವರು. ಪರಮಿಂದರ್‌ ಅವರು ಸಂಗರೂರ್‌ನಲ್ಲಿ ಅನೇಕ ವಿಕಾಸ ಕಾರ್ಯಗಳನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಪರಮಿಂದರ್‌ರ ತಂದೆಯೂ ಸಂಗರೂರ್‌ನ ಸಂಸದರಾಗಿದ್ದವರು. ಇನ್ನೊಂದೆಡೆ ಭಗವಂತ್‌ ಮಾನ್‌ ಕೂಡ ಸಂಗರೂರ್‌ನಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಎಂಪಿಲ್ಯಾಡ್‌ ಹಣವನ್ನೂ ಅವರು ಉತ್ತಮವಾಗಿ ವಿನಿಯೋಗಿಸಿದ್ದಾರೆ. ಆದರೆ ಪಂಜಾಬ್‌ನಲ್ಲಿ ಪಕ್ಷವನ್ನು ದುರ್ಬಲಗೊಳಿಸಿದ ಆರೋಪವೂ ಅವರ ಮೇಲಿದೆ. 2014ರಲ್ಲಿ ಅವರ ಪರವಾಗಿ ನಿಂತಿದ್ದ ಅನೇಕ ಪ್ರಭಾವಿ ನಾಯಕರು ಈಗ ದೂರವಾಗಿಬಿಟ್ಟಿದ್ದಾರೆ. ಇದಷ್ಟೇ ಅಲ್ಲದೆ, ಅನವಶ್ಯಕ ಕಾರಣಗಳಿಂದಾಗಿ ಅನೇಕಬಾರಿ ವಿವಾದಕ್ಕೂ ಸಿಲುಕಿದ್ದಾರೆ. ಹಾಗಿದ್ದರೆ ಈ ಸಂಗತಿಗಳು ಭಗವಂತ್‌ ಮಾನ್‌ ಅವರಿಗೆ ಪೆಟ್ಟು ಕೊಡಲಿವೆಯೇ? ‘ಚಾನ್ಸೇ ಇಲ್ಲ’ ಎನ್ನುತ್ತಾರವರು! ‘ಈ ವಿವಾದಗಳೆಲ್ಲ ನಮ್ಮ ಎದುರಾಳಿಗಳು ಸೃಷ್ಟಿಸಿದ ಕುತಂತ್ರ ಎನ್ನುವುದು ಕ್ಷೇತ್ರದ ಜನರಿಗೆ ತಿಳಿದಿದೆ. ನಿಜ ಹೇಳಬೇಕೆಂದರೆ, ನನಗೆ ಇಲ್ಲಿ ಎದುರಾಳಿಗಳೇ ಇಲ್ಲ’ ಎಂಬ ಭರವಸೆಯ ಮಾತನಾಡುತ್ತಾರೆ ಮಾನ್‌.

ಈ ಕ್ಷೇತ್ರದಲ್ಲಿ ಇದುವರೆಗೂ 15 ಚುನಾವಣೆಗಳು ನಡೆದಿದ್ದು, ಯಾವೊಂದು ಪಕ್ಷಕ್ಕೂ ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದಕ್ಕೆ ಸಾಧ್ಯವಾಗಿಲ್ಲ. ಶಿರೋಮಣಿ ಅಕಾಲಿ ದಳ ಐದು ಬಾರಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ನಾಲ್ಕು ಬಾರಿ ಗೆದ್ದಿದೆ. ಉಳಿದಂತೆ, ಸಿಪಿಐನಿಂದ ಒಬ್ಬರು, ಸಿಎಡಿ(ಎಂ) ಪಕ್ಷದಿಂದ ಒಬ್ಬರು ಮತ್ತು ಆಪ್‌ನಿಂದ ಭಗವಂತ್‌ ಮಾನ್‌ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಮೇ 19ಕ್ಕೆ ಏಳನೇ ಹಂತದ ಮತದಾನ ನಡೆಯಲಿದ್ದು, ಭಗವಂತ್‌ ಮಾನ್‌ರ ಭವಿಷ್ಯವನ್ನು, ತನ್ಮೂಲಕ ಪಂಜಾಬ್‌ನಲ್ಲಿ ಆಪ್‌ನ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.

ಈ ಬಾರಿ ಕಣದಲ್ಲಿ
ಭಗವಂತ್‌ ಮಾನ್‌(ಆಪ್‌)
ಪರಮಿಂದರ್‌ (ಶಿರೋಮಣಿ ಅಕಾಲಿದಳ)

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.