ಅನಂತಕುಮಾರ ಹೆಗಡೆ ಪಾಕ್ ಪಠಾಣ ಇದ್ಹಂಗೆ’
Team Udayavani, Mar 31, 2019, 6:00 AM IST
ಗಂಗಾವತಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಕಿಸ್ತಾನದ ಪಠಾಣ ಇದ್ಹಂಗೆ. ಜಾತಿ-ಜಾತಿಗಳ ನಡುವೆ ಜಗಳ ಹಚ್ಚುವ ಮೂಲಕ ಚುನಾವಣೆಯಲ್ಲಿ ಪ್ರತಿ ಸಲ ಗೆಲುವು ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದರು.
ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸಲು ಬಿಜೆಪಿ ಅ ಧಿಕಾರಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ ಪ್ರಜಾಪ್ರಭುತ್ವ ವಿರೋಧಿ ಯಾದ ಅನಂತಕುಮಾರ್ ಅವರಿಗೆ ಬಿಜೆಪಿ ಪುನಃ ಪಕ್ಷದ ಟಿಕೆಟ್ ನೀಡುವ ಮೂಲಕ ಬೆಂಬಲಿಸಿದೆ. ಎಸ್ಸಿ, ಎಸ್ಟಿ ಹಿಂದುಳಿದವರು ಸೇರಿ ಪ್ರಜಾಪ್ರಭುತ್ವವನ್ನು ಪ್ರೇಮಿಸುವವರು ಬಿಜೆಪಿಗೆ ಮತ ಚಲಾಯಿಸಬಾರದು ಎಂದರು.