ನಾನೇನು ಮಾಡಿದ್ದೇನೆಂದು ಕೊಪ್ಪಳ ಜನರನ್ನು ಕೇಳಲಿ!: ಯಶ್
Team Udayavani, Apr 10, 2019, 12:10 PM IST
ಮಂಡ್ಯ: ಹೌದಪ್ಪಾ, ನನಗೆ ಮನೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲ. ನಾನೇನು
ಮಾಡಿದ್ದೇನೆ ಎಂದು ಕೊಪ್ಪಳ ಜಿಲ್ಲೆಯಜನತೆಯನ್ನು ಹೋಗಿ ಕೇಳಿ ಎಂದು
ನಿಖೀಲ್ ಕುಮಾರಸ್ವಾಮಿಗೆ ಚಿತ್ರನಟ ಯಶ್ ಟಾಂಗ್ ನೀಡಿದ್ದಾರೆ.
ಮಂಗಳವಾರ ತಾಲೂಕಿನ ಉಮ್ಮಡಹಳ್ಳಿಯಲ್ಲಿ ಸುಮಲತಾ ಪರ ಪ್ರಚಾರ ನಡೆಸಿದ ಅವರು, ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಜನರಿಗಾಗಿ, ರೈತರಿಗಾಗಿ ನಾನೇನು ಮಾಡಿದ್ದೇನೆ ಎನ್ನುವುದನ್ನು ಅಲ್ಲಿಗೆ ಹೋಗಿ ಕೇಳಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಸುಮಲತಾ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಅದಕ್ಕೊಂದು ವೇದಿಕೆಯನ್ನೇ ಸಿದ್ಧಪಡಿಸಿ. ಅಲ್ಲಿ ಅಭ್ಯರ್ಥಿಗಳು ನಿಂತು ಮಾತನಾಡಲಿ. ಆಗ ಅಭಿವೃದ್ಧಿ ಬಗ್ಗೆ ಯಾರ ಯಾರ ಆಲೋಚನೆಗಳು, ದೂರದೃಷ್ಟಿ ಏನೆಂಬುದು ಗೊತ್ತಾಗಲಿದೆ. ಅಭಿವೃದ್ಧಿ ವಿಷಯವಾಗಿ ನಾನು
ಅಭ್ಯರ್ಥಿಯಾಗಿದ್ದರೆ ಮಾತನಾಡುತ್ತಿದ್ದೆ. ಇಲ್ಲಿ ಅಮ್ಮ (ಸುಮಲತಾ) ಅಭ್ಯರ್ಥಿಯಾಗಿರುವುದರಿಂದ ನಾನು ಮಾತನಾಡಿದರೆ ತಪ್ಪಾಗುತ್ತದೆ ಎಂದು ತಿಳಿಸಿದರು.
ಸುಮಲತಾ ಅವರು ಇವತ್ತು ಬಂದು ನಾಳೆ ಹೋಗುವುದಕ್ಕೆ ರಾಜಕಾರಣಕ್ಕೆ
ಬಂದಿಲ್ಲ. ಇಲ್ಲೇ ಇದ್ದುಕೊಂಡು ಜನರ ಕಷ್ಟ-ಸುಖಗಳಿಗೆ, ನೋವು-ನಲಿವುಗಳಿಗೆ ಸ್ಪಂದಿಸಲು ಬಂದಿದ್ದಾರೆ. ಅಂಬರೀಶ್ ಅವರು ಯಾವ ರೀತಿ ಸಂಸದರ ನಿಧಿಯನ್ನು ಜನರ ಒಳಿತಿಗಾಗಿ ಬಳಸಿದರೋ ಅದೇ ರೀತಿ ಸುಮಲತಾ ಅವರು ಉತ್ತಮ ರಾಜಕಾರಣ ಮಾಡಿ ಜನರ ಮನಸ್ಸನ್ನು ಗೆಲ್ಲಲು
ಮುಂದಾಗಿದ್ದಾರೆ. ಅದಕ್ಕೆ ಜನರು ಅವರನ್ನು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಿಗೆ ಅವರದ್ದೇ ಆದ ಕನಸುಗಳಿವೆ. ಜೊತೆಗೆ
ಅಂಬರೀಶ್ ಕನಸುಗಳನ್ನೂ ನನಸು ಮಾಡುವ ಮಹತ್ವಾಕಾಂಕ್ಷೆ ಇಟ್ಟು ಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಮತದಾರರ ಸಹಕಾರ ಅತಿ
ಮುಖ್ಯವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
Election Commission: ಪ್ರಿಯಾಂಕ್ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ