ನನ್ನನ್ನು ಬೋಳಿಸಿದರು, ಡಾ.ಜಾಧವ್ ಹರಕೆಯ ಕುರಿ ಆಗ್ತಾನೆ : ಬಾಬುರಾವ್ ಚೌಹಾಣ್
Team Udayavani, Apr 2, 2019, 11:32 AM IST
ಕಲಬುರಗಿ : ಬಿಜೆಪಿಯಲ್ಲಿ ಚುನಾವಣೆ ವೇಳೆ ಟಿಕೆಟ್ಗಳನ್ನು ಮಾರುತ್ತಾರೆ, ಡಾ. ಉಮೇಶ್ ಜಾಧವ್ ಕೂಡ ಹಣ ಕೊಟ್ಟು ಟಿಕೇಟ್ ಪಡೆದುಕೊಂಡಿದ್ದಾರೆ ಎಂದು ಬಾಬುರಾವ್ ಚೌಹಾಣ್ ಗಂಭೀರ ಆರೋಪ ಮಾಡಿದ್ದಾರೆ.
ನಾನು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಬಿಜೆಪಿ ನನಗೆ ಟಿಕೆಟ್ ನೀಡದೆ ವಂಚಿಸಿದೆ. ಬಿಜೆಪಿ ಟಿಕೆಟ್ಗಳನ್ನು ಮಾರಾಟ ಮಾಡುತ್ತದೆ. ಕಳೆದ ಚುನಾವಣೆಯಲ್ಲೂ ಟಿಕೆಟ್ಗಳು ಮಾರಾಟವಾಗಿದ್ದವು. ನನ್ನ ಬಳಿ ಸಾಕಷ್ಟು ಹಣ ಖರ್ಚು ಮಾಡಿಸಿದರು. ನನ್ನನ್ನು ಬೋಳಿಸಿ ವಂಚಿಸಿದರು. ಹೀಗಾಗಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಇದೇ ವೇಳೆ ಡಾ.ಉಮೇಶ್ ಜಾಧವ್ ಮಿತ್ರ ದ್ರೋಹಿ. ಅವನು ನನ್ನ ಬೆನ್ನಿಗೆ ಚೂರಿ ಹಾಕಿದ. ಅವನು ಹರಕೆಯ ಕುರಿಯಾಗುತ್ತಾನೆ ಎಂದರು.
ಕಲಬುರಗಿಯಲ್ಲಿ ಜಾಧವ್ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಿದ್ದಾ ಜಿದ್ದಿನ ಹಣಾಹಣಿ ನಡೆಯುತ್ತಿದ್ದು, ಮುಖಂಡರ ಪಕ್ಷಾಂದರ ಪರ್ವವೂ ಜೋರಾಗಿದೆ.